25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ. 8.08 ಲಕ್ಷ ಲಾಭ, ಶೇ. 8 ಡಿವಿಡೆಂಟ್ ಘೋಷಣೆ

ಗೇರುಕಟ್ಟೆ: ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ 2022-23 ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.22 ರಂದು ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಸಭಾ ಭವನದಲ್ಲಿ ನಡೆಯಿತು.

ಹಾಲು ಉತ್ಪಾದಕರ ಸಂಘ ಅಧ್ಯಕ್ಷ ಜನಾರ್ಧನ ಗೌಡ ಕೆ. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು ರೂ. 8.08 ಲಕ್ಷ ನಿವ್ವಳ ಲಾಭ ಗಳಿಸಿ, ಶೇ. 8 ಡಿವಿಡೆಂಟ್ ಘೋಷಿಸಿದರು..

ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಗುಲಾಬಿ ವಾರ್ಷಿಕ ಖರ್ಚು-ವೆಚ್ಚದ ವರದಿ ಮಂಡಿಸಿದರು

ಈ ಸಂದರ್ಭದಲ್ಲಿ ಸಂಘದ ಅಂತರಿಕ ಲೆಕ್ಕ ಪರಿಶೋಧಕರಾದ ಕೆ.ಎಸ್ ಹರಿಪ್ರಸಾದ್, ಪಶು ವೈಧ್ಯಾಧಿಕಾರಿ ಡಾ.ಗಣಪತಿ, ಸಂಘದ ಉಪಾಧ್ಯಾಕ್ಷ ಸಿರಿಲ್ ಪಿಂಟೊ, ನಿರ್ದೇಶಕರಾದ ಕುಶಲಾವತಿ, ಪ್ರವೀಣ್ ಪೂಜಾರಿ, ಗಿರಿಯಪ್ಪ ಗೌಡ, ಕೇಶವ ಪೂಜಾರಿ, ರಂಜನ್ ಹೆಚ್, ನೆವಿಲ್ ಸ್ಟೀವನ್ ಮೋರಾಸ್, ವಸಂತ ನಾಯ್ಕ ಯೋಗಿನಿ, ಗಂಗಯ್ಯ ಗೌಡ, ಮೋಹನದಾಸ ಶೆಟಿ ರೇಖಾ ವೇದಿಕೆಯಲಿ ಉಪಸ್ಥಿತರಿದರು

2022-23ನೇ ಸಾಲಿನಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಕೆ ಮಾಡಿದ ಉರ್ಬನ್ ಮೋರಾಸ್, ವಲೇರಿಯನ್ ಡಿ.ಸೋಜ, ವೀರಪ್ಪ ಪೂಜಾರಿ ಗೌರವಿಸಿದರು. ಡೆಂಟಲ್ ಶಿಕ್ಷಣದಲ್ಲಿ 4 ಮತ್ತು 5 ನೇ ರ್‍ಯಾಂಕ್ ಪಡೆದ ಕುಮಾರಿ ಅನುದೀಕ್ಷಾ ಎಸ್.ಆರ್., ನಿವೃತ್ತ ಸೈನಿಕರಾದ ದಿನೇಶ್ ಗೌಡ ಕಲಾಯಿತೊಟ್ಟು, ಸುಭ್ರಮಣಿ ಐ.ಎಮ್.ಗೇರುಕಟ್ಟೆ, ರಾಜೇಶ್ ಕಾಮತ್ ಹಾಗೂ ಪ್ರಸ್ತುತ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಬೇಬಿ ಗೌಡ ಪೇರಾಜೆ, ವಿಕ್ರಂ ವಂಜಾರೆ, ಪ್ರಮೋದ್ ಗೌಡ ಬರಾಯ, ಸೂರಜ್ ಶೆಟ್ಟಿ ನೆಲ್ಲಿಕಟ್ಟೆ ಇವರ ಪರವಾಗಿ ಪೋಷಕರನ್ನು ವೇದಿಕೆಯಲ್ಲಿ ಸನ್ಮಾನಿಸಿ, ಗೌರವಿಸಿದರು. ಜಿಲ್ಲಾ ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ಗಳಿಸಿದ ನಾಗವೇಣಿ ಕೆ.ಎಸ್ ರವರನ್ನು ಸನ್ಮಾನಿಸಲಾಯಿತು.

ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮಕ್ಕೆ ಸ್ವರ ಸಂಯೋಜನೆ ಮಾಡಿ ಸತೀಶ್ ಭಂಡಾರಿ ಗೇರುಕಟ್ಟೆ ರವರನ್ನು ಗೌರವಿಸಿದರು. ಹಾಲು ಉತ್ಪಾದಕರ ಸಂಘದ ಅಂತರಿಕ ಲೆಕ್ಕ ಪರಿಶೋಧಕರಾದ ಕೆ.ಎಸ್.ಹರಿಪ್ರಸಾದ್ ಗೇರುಕಟ್ಟೆ, ದ.ಕ.ಹಾ.ಉ.ಮ.ಸಂ.ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆ, ಕಟ್ಟಡ ನಿರ್ಮಾಣ ಸಮಯದಲ್ಲಿ ಕಚೇರಿಗೆ ಕಟ್ಟಡದ ಸಹಕಾರ ನೀಡಿದ ಮೋಹನ ಗೌಡ ರವರನ್ನು ಗೌರವಿಸಿದರು.

ಸಂಘದ ನಿರ್ದೇಶಕ ರಂಜನ್ ಹೆಚ್ ಸ್ವಾಗತಿಸಿದರು. ಉಮೇಶ್ ಕೇಲ್ಡಡ್ಕ ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿರ್ದೇಶಕ ನೆವಿಲ್ ಸ್ಟೀವನ್ ಮೋರಾಸ್ ಧನ್ಯವಾದವಿತ್ತರು.

Related posts

ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಚುನಾವಣೆ: ಹೈಕೋರ್ಟು ತೀರ್ಪು ಪ್ರಕಟ ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಗಳು ನಿರ್ದೇಶಕರಾಗಿ ಆಯ್ಕೆ

Suddi Udaya

ಬೆದ್ರಬೆಟ್ಟು ಅರಿಫಾಯ್ಯಾ ಜುಮಾ ಮಸೀದಿಯಲ್ಲಿ ಸಂಭ್ರಮದ ಈದುಲ್‌ ಅಝಾ ಆಚರಣೆ

Suddi Udaya

ಮಡಂತ್ಯಾರು ಗ್ರಾ.ಪಂ ಪಾರೆಂಕಿ 1 ನೇ ಕ್ಷೇತ್ರದ ಉಪಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ತಡೆ

Suddi Udaya

ಉಜಿರೆ: ಶ್ರೀ ಧ.ಮಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಜೀವನ ಕೌಶಲ್ಯ ಕಾರ್ಯಾಗಾರ

Suddi Udaya

ನಿಡ್ಲೆ : ಕುದ್ರಾಯ ಓಡದಕೊಟ್ಯದಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರ

Suddi Udaya

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಅಮಾನವೀಯ ದಾಳಿಯನ್ನು ಖಂಡಿಸಿ ಧರ್ಮಪ್ರೇಮಿಗಳು ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಮೌನ ಪ್ರತಿಭಟನೆ

Suddi Udaya
error: Content is protected !!