ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ

Suddi Udaya

ವೇಣೂರು : ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ. 29ರಂದು ಕುಕ್ಕೇಡಿಯಲ್ಲಿ ನಡೆದಿದೆ.

ಕುಕ್ಕೇಡಿ ಗ್ರಾಮದ ಗೋಳಿಯಂಗಡಿಬೊಳ್ಳಾಲು ಮನೆ ದಿ| ಅಣ್ಣಪ್ಪ ಮೂಲ್ಯರ ಪುತ್ರಿ ಶ್ರೀಮತಿ ಹರಿಣಾಕ್ಷಿ (35 ವರ್ಷ) ಆತ್ಮಹತ್ಯೆ ಮಾಡಿಕೊಂಡವರು. ಶ್ರೀಮತಿ ಹರಿಣಾಕ್ಷಿ ಅವರನ್ನು ಸುಮಾರು 8 ವರ್ಷ ಹಿಂದೆ ಬಂಟ್ವಾಳ ತಾಲೂಕು ಬಂಟ್ವಾಳ ಕಸಬಾ ಗ್ರಾಮದ ನಾಗೇಶ ಬಂಗೇರ ಎಂಬವರಿಗೆ ಜಾತಿ ಸಂಪ್ರದಾಯದಂತೆ ಮದುವೆ ಮಾಡಿ ಕೊಡಲಾಗಿತ್ತು. ಗಂಡನ ಮನೆಯಲ್ಲಿ ಸಂಸಾರ ಮಾಡಿಕೊಂಡಿದ್ದ ಹರಿಣಾಕ್ಷಿಯವರು ಮದುವೆಯಾಗಿ ಸ್ವಲ್ಪ ಸಮಯದ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿ, ಸಂಪೂರ್ಣ ಗುಣಮುಖರಾಗಿ ರಲಿಲ್ಲ. ಸುಮಾರು ಮೂರುವರೇ ತಿಂಗಳ ಹಿಂದೆ ಎರಡನೇ ಹೆರಿಗೆಯಾಗಿ ತವರು ಮನೆಯಲ್ಲಿ ಇದ್ದವರು ಸುಮಾರು 20 ದಿನ ಗಳ ಹಿಂದೆ ತನ್ನ ತಾಯಿ ಶ್ರೀಮತಿ ಮೋನಮ್ಮ ರವರೊಂದಿಗೆ ಗಂಡನ ಮನೆಗೆ ಹೋಗಿದ್ದರು.

ಸೆ.28 ರಂದು ಮಾನಸಿಕ ಖಿನ್ನತೆಗೆ ಒಳಪಟ್ಟವಳನ್ನು ಗಂಡನ ಮನೆಯಿಂದ ಕುಕ್ಕೆಡಿಯ ತಾಯಿ ಮನೆಗೆ ಕರೆದುಕೊಂಡು ಬಂದಿದ್ದರು. 29 ರಂದು ಬೆಳಗಿನ ಜಾವ ಹರಿಣಾಕ್ಷಿಯವರು ಮಾನಸಿಕ ಖಿನ್ನತೆಯಿಂದ ಎದ್ದು ಹೋಗಿ ತೋಟದ ಬಳಿಯ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವೇಣೂರು ಪೊಲೀಸ್ ಠಾಣೆಗೆ ಮೃತರ ಸಹೋದರ ಧನಂಜಯ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Leave a Comment

error: Content is protected !!