ಕಲ್ಮಂಜ : ಕಲ್ಮಂಜ ಗ್ರಾಮದ ಊರವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಕಲ್ಮಂಜ ಈ ಸಂಘಟನೆಗಳ ಸಹಕಾರದೊಂದಿಗೆ ನೂತನ ‘ಸದಾಶಿವೇಶ್ವರ’ ಭಜನಾ ತಂಡವನ್ನು ರಚನೆ ಮಾಡಲಾಯಿತು.

ಭಜನಾ ತಂಡವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧರ್ಮಸ್ಥಳ ವಲಯದ ಮೇಲ್ವಿಚಾರಕರಾದ ಪ್ರಶಾಂತ್ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀ ಸದಾಶಿವೇಶ್ವರ ದೇವಸ್ಥಾನ ಸಮಿತಿಯ ಜಯಂತ್ ರಾವ್ ಕಲ್ಮಂಜ, ಸಿದ್ಧಬೈಲು ಪರಾರಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ದಿನೇಶ್ ಗೌಡ, ಕಲ್ಮಂಜ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಶಾಂತಪ್ಪ ಗೌಡ, ಮುಂಡಾಜೆ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ನಾಗರಾಜ್ ನಾಯ್ಕ್ ಒಂಜರಾಬೈಲ್, ಕಲ್ಮಂಜ ಗ್ರಾಮ ಪಂಚಾಯತಿಯ ಸದಸ್ಯ ಪ್ರವೀಣ್ ಗೌಡ ಕರಿಯನೆಲ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷರಾದ ಧನಂಜಯ ಎಂ, ಸಮಿತಿಯ ಕೋಶಾಧಿಕಾರಿಯಾದ ಅನಿಲ್ ಗೌಡ, ಸತ್ಯನ ಪಲ್ಕೆ ಜ್ಞಾನ ವಿಕಾಸ ತಂಡದ ಮಾಜಿ ಅಧ್ಯಕ್ಷೆ ಶ್ರೀಮತಿ ಜಾನಕಿ ಗೌಡ, ಜ್ಞಾನ ವಿಕಾಸ ತಂಡದ ಸದಸ್ಯರಾದ ಶ್ರೀಮತಿ ರೇವತಿ ಮಾನಿಂಜೆ, ಸಿದ್ಧಬೈಲು ಪರಾರಿ ಶಾಲೆಯ ಎಸ್ ಡಿ ಎಮ್ ಸಿ ಸದಸ್ಯರಾದ ಕೃಷ್ಣಪ್ಪ ಒಂಜರಾಬೈಲ್ ಹಾಗೂ ಊರವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಂತಪ್ಪ ಗೌಡ ಬನಾದಬೈಲ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು., ಶಾಂತಪ್ಪ ಎಂ. ಮದ್ಮಲ್ ಕಟ್ಟೆ ಧನ್ಯವಾದವಿತ್ತರು.













