ಕಾಯರ್ತಡ್ಕ: ಹದಗೆಟ್ಟ ರಸ್ತೆ, ಶಿಲಾನ್ಯಾಸಗೊಂಡ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ, ಪ್ರತಿಭಟನೆಗೆ ಗ್ರಾಮಸ್ಥರ ಸಿದ್ದತೆ

Suddi Udaya

ಕಳೆಂಜ: ಕಳೆಂಜ, ಕುದ್ರಾಯ, ಬರೆಂಗಾಯ, ಕಾಯರ್ತಡ್ಕ, ಮಿಯ್ಯಾರು, ನೆರಿಯ ಹಾದೂ ಹೋಗುವ ಪಿಡಬ್ಲ್ಯೂ ರಸ್ತೆಯು ಕಳೆಂಜ ಗ್ರಾಮದ ಮರಕ್ಕಡ ಹೈಸ್ಕೂಲ್ ಸಮೀಪದಿಂದ ಮಿಯ್ಯಾರು ಹೊಸಂಗಡಿ ತನಕ ರಸ್ತೆಯು ಸಂಪೂರ್ಣ ಹದೆಗೆಟ್ಟಿದ್ದು ದೊಡ್ಡ ದೊಡ್ಡ ಹೊಂಡಗಳಿಂದ ಕೂಡಿದೆ.

ವಾಹನ ಸವಾರರಿಗೆ, ಶಾಲೆಗೆ ಹೋಗುವ ಶಾಲಾ ಮಕ್ಕಳಿಗೆ ಇನ್ನಿತರ ಕೆಲಸ ಕಾರ್ಯಗಳಿಗೆ ಹೋಗುವ ಗ್ರಾಮಸ್ಥರಿಗೆ ಸಮಸ್ಯೆ ಉಂಟಾಗಿದೆ. ಈಗಾಗಲೇ ಕೆಲವು ದ್ವಿಚಕ್ರ ವಾಹನಗಾರರು ರಸ್ತೆಯ ಹೊಂಡಕ್ಕೆ ಬಿದ್ದು ಗಾಯಗೊಂಡಿದ್ದಾರೆ,


ಕಳೆದ ಅವಧಿಯಲ್ಲಿ ಸರಕಾರದ ಅನುದಾನದಿಂದ ರೂ.7 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಶಿಲಾನ್ಯಾಸಗೊಂಡಿದ್ದು ಆದರೆ ಈಗಿನ ಸರಕಾರವು ಸಾರ್ವಜನಿಕ ರಸ್ತೆ ಇನ್ನಿತರ ಕಾಮಗಾರಿಯ ಅನುದಾನವನ್ನು ಬಿಡುಗಡೆಗೊಳಿಸಲು ವಿಫಲವಾಗಿದೆ.

ಕೂಡಲೇ ಸರಕಾರ ತಡೆಹಿಡಿದ ಕಾಮಗಾರಿಗಳ ಅನುದಾನವನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆಗೆ ಗ್ರಾಮಸ್ಥರು ಸಿದ್ದತೆ ನಡೆಸುತ್ತಿದ್ದಾರೆ ಎಂದು ಕಳೆಂಜ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಪ್ರಸನ್ನ ಎ.ಪಿ, ಹೋರಾಟಗಾರರಾದ ಉಮೇಶ್ ನಿಡ್ಡಾಜೆ, ರಾಜೇಶ್ ನಿಡ್ಡಾಜೆ, ನಿತಿನ್ ಅಶ್ವತ್ತಡಿ ಇವರುಗಳು ತಿಳಿಸಿರುತ್ತಾರೆ.

Leave a Comment

error: Content is protected !!