July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಕಾಯರ್ತಡ್ಕ: ಹದಗೆಟ್ಟ ರಸ್ತೆ, ಶಿಲಾನ್ಯಾಸಗೊಂಡ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ, ಪ್ರತಿಭಟನೆಗೆ ಗ್ರಾಮಸ್ಥರ ಸಿದ್ದತೆ

ಕಳೆಂಜ: ಕಳೆಂಜ, ಕುದ್ರಾಯ, ಬರೆಂಗಾಯ, ಕಾಯರ್ತಡ್ಕ, ಮಿಯ್ಯಾರು, ನೆರಿಯ ಹಾದೂ ಹೋಗುವ ಪಿಡಬ್ಲ್ಯೂ ರಸ್ತೆಯು ಕಳೆಂಜ ಗ್ರಾಮದ ಮರಕ್ಕಡ ಹೈಸ್ಕೂಲ್ ಸಮೀಪದಿಂದ ಮಿಯ್ಯಾರು ಹೊಸಂಗಡಿ ತನಕ ರಸ್ತೆಯು ಸಂಪೂರ್ಣ ಹದೆಗೆಟ್ಟಿದ್ದು ದೊಡ್ಡ ದೊಡ್ಡ ಹೊಂಡಗಳಿಂದ ಕೂಡಿದೆ.

ವಾಹನ ಸವಾರರಿಗೆ, ಶಾಲೆಗೆ ಹೋಗುವ ಶಾಲಾ ಮಕ್ಕಳಿಗೆ ಇನ್ನಿತರ ಕೆಲಸ ಕಾರ್ಯಗಳಿಗೆ ಹೋಗುವ ಗ್ರಾಮಸ್ಥರಿಗೆ ಸಮಸ್ಯೆ ಉಂಟಾಗಿದೆ. ಈಗಾಗಲೇ ಕೆಲವು ದ್ವಿಚಕ್ರ ವಾಹನಗಾರರು ರಸ್ತೆಯ ಹೊಂಡಕ್ಕೆ ಬಿದ್ದು ಗಾಯಗೊಂಡಿದ್ದಾರೆ,


ಕಳೆದ ಅವಧಿಯಲ್ಲಿ ಸರಕಾರದ ಅನುದಾನದಿಂದ ರೂ.7 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಶಿಲಾನ್ಯಾಸಗೊಂಡಿದ್ದು ಆದರೆ ಈಗಿನ ಸರಕಾರವು ಸಾರ್ವಜನಿಕ ರಸ್ತೆ ಇನ್ನಿತರ ಕಾಮಗಾರಿಯ ಅನುದಾನವನ್ನು ಬಿಡುಗಡೆಗೊಳಿಸಲು ವಿಫಲವಾಗಿದೆ.

ಕೂಡಲೇ ಸರಕಾರ ತಡೆಹಿಡಿದ ಕಾಮಗಾರಿಗಳ ಅನುದಾನವನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆಗೆ ಗ್ರಾಮಸ್ಥರು ಸಿದ್ದತೆ ನಡೆಸುತ್ತಿದ್ದಾರೆ ಎಂದು ಕಳೆಂಜ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಪ್ರಸನ್ನ ಎ.ಪಿ, ಹೋರಾಟಗಾರರಾದ ಉಮೇಶ್ ನಿಡ್ಡಾಜೆ, ರಾಜೇಶ್ ನಿಡ್ಡಾಜೆ, ನಿತಿನ್ ಅಶ್ವತ್ತಡಿ ಇವರುಗಳು ತಿಳಿಸಿರುತ್ತಾರೆ.

Related posts

ಧಾರಾಕಾರವಾಗಿ ಸುರಿದ ಗಾಳಿ ಮಳೆ: ಮೇಲಂತಬೆಟ್ಟು ಕೆಲವು ಮನೆಗಳ ಮೇಲ್ಛಾವಣಿ ಕುಸಿತ

Suddi Udaya

ಆರಂಬೋಡಿ ಯುವ ಬಂಟರ ಸಂಘದಿಂದ ಸಮಾಜಸೇವಕ ಮನೋಜ್ ಶೆಟ್ಟಿ ಐತೇರಿಗೆ ಸನ್ಮಾನ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ದೇಯಿ ಬೈದೆದಿ ಆಯುರ್ವೇದಿಕ್ ಕೇಂದ್ರದ ಕಾಮಗಾರಿಗೆ ವಿಶ್ವದಾದ್ಯಂತ ಇರುವ ಸಮಾಜ ಬಾಂಧವರು ಕೈಜೋಡಿಸಬೇಕು: ರಾಜಶೇಖರ್ ಕೋಟ್ಯಾನ್

Suddi Udaya

ಎಲೆಚುಕ್ಕಿ ರೋಗದಿಂದ ಅಡಕೆ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ: ವಿ.ಪ. ಸದಸ್ಯ ಪ್ರತಾಪಸಿಂಹ ನಾಯಕ್

Suddi Udaya

ಕಕ್ಕಿಂಜೆ : ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

Suddi Udaya

ಮೇ 1 : ಧರ್ಮಸ್ಥಳದಲ್ಲಿ 52ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: ಚಲನಚಿತ್ರ ನಟ ದೊಡ್ಡಣ್ಣ ಭಾಗಿ

Suddi Udaya
error: Content is protected !!