July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ : ಕೆಪಿಎಸ್ ಪುಂಜಾಲಕಟ್ಟೆ ಪ್ರೌಢಶಾಲೆಗೆ ಹಲವು ಪ್ರಶಸ್ತಿ: ವಿದ್ಯಾರ್ಥಿಗಳ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

ಪುಂಜಾಲಕಟ್ಟೆ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವು ಅ. 7 ರಂದು ಸರಕಾರಿ ಪ್ರೌಢಶಾಲೆ ಗೇರುಕಟ್ಟೆಯ ನೇತೃತ್ವದಲ್ಲಿ ಗೇರುಕಟ್ಟೆಯ ಕ್ರೀಡಾಂಗಣದಲ್ಲಿ ನಡೆಯಿತು.
ಕ್ರೀಡಾಕೂಟದಲ್ಲಿ ನಿಖಿಲ್ ದೇವಾಡಿಗ 100 ಮೀಟರ್ ಮತ್ತು ಎತ್ತರ ಜಿಗಿತ ಪ್ರಥಮ ಹಾಗೂ 200 ಮೀಟರ್ ದ್ವಿತೀಯ, ದಿಯಾ ಚಂದನ ಎತ್ತರ ಜಿಗಿತ ಪ್ರಥಮ ಮತ್ತು ಈಟಿ ಎಸೆತ ದ್ವಿತೀಯ, ಅಂಕಿತ ಜೆ ಎನ್ ಚಕ್ರ ಎಸೆತ ಪ್ರಥಮ, ಸಂಜನಾ ಎ ಗುಂಡು ಎಸೆತ ಪ್ರಥಮ, ಹಿತೇಶ್ ಎತ್ತರ ಜಿಗಿತ ದ್ವಿತೀಯ, ಪ್ರತೀಕ್ಷಾ 400 ಮೀಟರ್ ದ್ವಿತೀಯ, ಚೇತನ ರೂಪ ಚಕ್ರಎಸೆತ ದ್ವಿತೀಯ, ಧೀರಜ್ ತ್ರಿವಿಧ ಜಿಗಿತ ದ್ವಿತೀಯ ಮತ್ತು 100 ಮೀಟರ್ ತೃತೀಯ, ಯಶ್ವಿನ್ ಉದ್ದ ಜಿಗಿತ ಪ್ರಥಮ ಹಾಗೂ ತ್ರಿವಿಧ ಜಿಗಿತ ತ್ರತೀಯ, ಸನ್ನಿಧಿ ಉದ್ದ ಜಿಗಿತ ಹಾಗೂ ತ್ರಿವಿಧ ಜಿಗಿತ ಪ್ರಥಮ, ಸಲ್ಮಾ ಶಹನಾಝ್ – ಈಟಿ ಎಸತ- ಪ್ರಥಮ, ಶರಣ್ಯ ತ್ರಿವಿಧ ಜಿಗಿತ ದ್ವಿತೀಯ, 4×100 ಮೀಟರ್ ರಿಲೇ ಬಾಲಕರ ತಂಡ ದ್ವಿತೀಯ ಹಾಗೂ ಬಾಲಿಕೆಯರ ತಂಡ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.


ಒಟ್ಟು 10 ಪ್ರಥಮ ಸ್ಥಾನ, 5 ದ್ವಿತೀಯ, 5 ತೃತೀಯ ಸ್ಥಾನ ಹೀಗೆ ಒಟ್ಟು 20 ಪದಕಗಳನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವ ಈ ಹಿಂದಿನ ದೈಹಿಕ ಶಿಕ್ಷಕರಾಗಿದ್ದ ಸತ್ಯಕಿರಣ್ ಕುಮಾರ್ ಉಡುಪಿ, ಪ್ರಸ್ತುತ ದೈಹಿಕ ಶಿಕ್ಷಕ ಆಗಿರುವ ಮೋಹನಂದ, ಹಾಗೂ ತರಬೇತುದಾರ ಸ್ನೇಹಿತ ರಾಜೇಶ್ ಇವರಿಗೆ ಹಾಗೂ ಶಿಕ್ಷಕ ಬಳಗಕ್ಕೆ ಉಪ ಪ್ರಾಂಶುಪಾಲರಾದ ಉದಯ್ ಕುಮಾರ್ ಬಿ ಇವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

ಈ ಸಂದರ್ಭದಲ್ಲಿ ಗೇರುಕಟ್ಟೆ ಪ್ರೌಢಶಾಲಾ ಉಪ ಪ್ರಾಂಶುಪಾಲರಾದ ಶ್ರೀಮತಿ ಈಶ್ವರಿ , ದೈಹಿಕ ಶಿಕ್ಷಕರಾದ ಅಜಿತ್ ಕುಮಾರ್ ಕೆ, ಇದೇ ಸಂಸ್ಥೆಯ ಸಹ ಶಿಕ್ಷಕರಾದ ರಾಜೇಂದ್ರಕೃಷ್ಣ, ದಿನೇಶ್, ಹಾಗೂ ಮಮತಾ, ಆಶಾಲತಾ, ರಮ್ಯಾ, ಜ್ಯೋತಿ ಮತ್ತು ಸವಣಾಲು ಪ್ರೌಢಶಾಲೆಯ ಸಹ ಶಿಕ್ಷಕ ಸತೀಶ್ ಬಂಗೇರ , ಕೆಪಿಎಸ್ ಪುಂಜಾಲಕಟ್ಟೆಯ ಪ್ರೌಢಶಾಲಾ ಶಿಕ್ಷಕರಾದ ಧರಣೇಂದ್ರ ಕೆ, ಜಯಂತಿ ಹಾಗೂ ತರಬೇತುದಾರ ರಾಜೇಶ್ ಉಪಸ್ಥಿತರಿದ್ದರು.

Related posts

ಪಡ್ಡ೦ದಡ್ಕ ನುರುಲ್ ಹುದಾ ಮಸೀದಿ ಆದೀನದಲ್ಲಿರುವ ಮುನವಿರುಲ್ ಇಸ್ಲಾಂ ಮದರಸದ ರಕ್ಷಕರ ಸಭೆ

Suddi Udaya

ಬೆಳ್ತಂಗಡಿ: ನೇತಾಜಿ ಸುಭಾಶ್ಚಂದ್ರ ಬೋಸ್ ಆವಾಸೀಯ ವಿದ್ಯಾಲಯದಲ್ಲಿ ಸಂಭ್ರಮ ಶನಿವಾರಕ್ಕೆ ಚಾಲನೆ

Suddi Udaya

ಇಂದು (ಜ.10): ಮುಂಡಾಜೆ ಶ್ರೀ ಪರಶುರಾಮ ದೇವಸ್ಥಾನದಲ್ಲಿ ಸಾಮೂಹಿಕ ಆರತಿ ಕಾರ್ಯಕ್ರಮ

Suddi Udaya

ಮಚ್ಚಿನ: ಬಂಗೇರಕಟ್ಟೆ ಕಲ್ಲಗುಡ್ಡೆಯಲ್ಲಿ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಕಾರು

Suddi Udaya

ಬೆಳ್ತಂಗಡಿ: ಎಸ್.ಐ.ಟಿ. ಪೊಲೀಸ್ ಠಾಣೆಗೆ ದೂರುದಾರ ಜಯಂತ್ ಟಿ. ಭೇಟಿ

Suddi Udaya

ದ.ಕ. ಎಸ್ಪಿ, ಕಮೀಷನರ್ ವರ್ಗಾವಣೆ-ಪವರ್‌’ಫುಲ್ ಅಧಿಕಾರಿಗಳ ಎಂಟ್ರಿ ಎಸ್ಪಿಯಾಗಿ ಅರುಣ್ ಕುಮಾ‌ರ್, ಕಮೀಷನ‌ರ್ ಆಗಿ ಸುಧೀರ್ ಕುಮಾ‌ರ್ ರೆಡ್ಡಿ

Suddi Udaya
error: Content is protected !!