22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ : ಕೆಪಿಎಸ್ ಪುಂಜಾಲಕಟ್ಟೆ ಪ್ರೌಢಶಾಲೆಗೆ ಹಲವು ಪ್ರಶಸ್ತಿ: ವಿದ್ಯಾರ್ಥಿಗಳ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

ಪುಂಜಾಲಕಟ್ಟೆ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವು ಅ. 7 ರಂದು ಸರಕಾರಿ ಪ್ರೌಢಶಾಲೆ ಗೇರುಕಟ್ಟೆಯ ನೇತೃತ್ವದಲ್ಲಿ ಗೇರುಕಟ್ಟೆಯ ಕ್ರೀಡಾಂಗಣದಲ್ಲಿ ನಡೆಯಿತು.
ಕ್ರೀಡಾಕೂಟದಲ್ಲಿ ನಿಖಿಲ್ ದೇವಾಡಿಗ 100 ಮೀಟರ್ ಮತ್ತು ಎತ್ತರ ಜಿಗಿತ ಪ್ರಥಮ ಹಾಗೂ 200 ಮೀಟರ್ ದ್ವಿತೀಯ, ದಿಯಾ ಚಂದನ ಎತ್ತರ ಜಿಗಿತ ಪ್ರಥಮ ಮತ್ತು ಈಟಿ ಎಸೆತ ದ್ವಿತೀಯ, ಅಂಕಿತ ಜೆ ಎನ್ ಚಕ್ರ ಎಸೆತ ಪ್ರಥಮ, ಸಂಜನಾ ಎ ಗುಂಡು ಎಸೆತ ಪ್ರಥಮ, ಹಿತೇಶ್ ಎತ್ತರ ಜಿಗಿತ ದ್ವಿತೀಯ, ಪ್ರತೀಕ್ಷಾ 400 ಮೀಟರ್ ದ್ವಿತೀಯ, ಚೇತನ ರೂಪ ಚಕ್ರಎಸೆತ ದ್ವಿತೀಯ, ಧೀರಜ್ ತ್ರಿವಿಧ ಜಿಗಿತ ದ್ವಿತೀಯ ಮತ್ತು 100 ಮೀಟರ್ ತೃತೀಯ, ಯಶ್ವಿನ್ ಉದ್ದ ಜಿಗಿತ ಪ್ರಥಮ ಹಾಗೂ ತ್ರಿವಿಧ ಜಿಗಿತ ತ್ರತೀಯ, ಸನ್ನಿಧಿ ಉದ್ದ ಜಿಗಿತ ಹಾಗೂ ತ್ರಿವಿಧ ಜಿಗಿತ ಪ್ರಥಮ, ಸಲ್ಮಾ ಶಹನಾಝ್ – ಈಟಿ ಎಸತ- ಪ್ರಥಮ, ಶರಣ್ಯ ತ್ರಿವಿಧ ಜಿಗಿತ ದ್ವಿತೀಯ, 4×100 ಮೀಟರ್ ರಿಲೇ ಬಾಲಕರ ತಂಡ ದ್ವಿತೀಯ ಹಾಗೂ ಬಾಲಿಕೆಯರ ತಂಡ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.


ಒಟ್ಟು 10 ಪ್ರಥಮ ಸ್ಥಾನ, 5 ದ್ವಿತೀಯ, 5 ತೃತೀಯ ಸ್ಥಾನ ಹೀಗೆ ಒಟ್ಟು 20 ಪದಕಗಳನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವ ಈ ಹಿಂದಿನ ದೈಹಿಕ ಶಿಕ್ಷಕರಾಗಿದ್ದ ಸತ್ಯಕಿರಣ್ ಕುಮಾರ್ ಉಡುಪಿ, ಪ್ರಸ್ತುತ ದೈಹಿಕ ಶಿಕ್ಷಕ ಆಗಿರುವ ಮೋಹನಂದ, ಹಾಗೂ ತರಬೇತುದಾರ ಸ್ನೇಹಿತ ರಾಜೇಶ್ ಇವರಿಗೆ ಹಾಗೂ ಶಿಕ್ಷಕ ಬಳಗಕ್ಕೆ ಉಪ ಪ್ರಾಂಶುಪಾಲರಾದ ಉದಯ್ ಕುಮಾರ್ ಬಿ ಇವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

ಈ ಸಂದರ್ಭದಲ್ಲಿ ಗೇರುಕಟ್ಟೆ ಪ್ರೌಢಶಾಲಾ ಉಪ ಪ್ರಾಂಶುಪಾಲರಾದ ಶ್ರೀಮತಿ ಈಶ್ವರಿ , ದೈಹಿಕ ಶಿಕ್ಷಕರಾದ ಅಜಿತ್ ಕುಮಾರ್ ಕೆ, ಇದೇ ಸಂಸ್ಥೆಯ ಸಹ ಶಿಕ್ಷಕರಾದ ರಾಜೇಂದ್ರಕೃಷ್ಣ, ದಿನೇಶ್, ಹಾಗೂ ಮಮತಾ, ಆಶಾಲತಾ, ರಮ್ಯಾ, ಜ್ಯೋತಿ ಮತ್ತು ಸವಣಾಲು ಪ್ರೌಢಶಾಲೆಯ ಸಹ ಶಿಕ್ಷಕ ಸತೀಶ್ ಬಂಗೇರ , ಕೆಪಿಎಸ್ ಪುಂಜಾಲಕಟ್ಟೆಯ ಪ್ರೌಢಶಾಲಾ ಶಿಕ್ಷಕರಾದ ಧರಣೇಂದ್ರ ಕೆ, ಜಯಂತಿ ಹಾಗೂ ತರಬೇತುದಾರ ರಾಜೇಶ್ ಉಪಸ್ಥಿತರಿದ್ದರು.

Related posts

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ರಬ್ಬರ್ ಕೃಷಿಕರ ಸಮಸ್ಯೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

Suddi Udaya

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ನಿಂದ ಮಕ್ಕಳ ರಜಾ ಶಿಬಿರ 2025: ಮಕ್ಕಳಿಗೆ ಉಚಿತ ಪುಸ್ತಕ ವಿತರಣೆಯೊಂದಿಗೆ ಮಾಹಿತಿ ಕಾರ್ಯಕ್ರಮ

Suddi Udaya

ಬಂದಾರು: ದ್ವಿಚಕ್ರ ವಾಹನಕ್ಕೆ ಪಿಕಪ್ ಡಿಕ್ಕಿ: ದ್ವಿಚಕ್ರ ವಾಹನ ಸವಾರ ಸಾವು, ಮಹಿಳೆ ಗಂಭೀರ

Suddi Udaya

ಕಣಿಯೂರು ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಸರಸ್ವತಿ ಹೃದಯಾಘಾತದಿಂದ ನಿಧನ

Suddi Udaya

ದಯಾ ವಿಶೇಷ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

Suddi Udaya
error: Content is protected !!