26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಮುಂಡಾಜೆ : ಸಿಡಿಲು ಬಡಿದು ಮನೆಗೆ ಹಾನಿ, ಅಪಾರ ನಷ್ಟ

ಬೆಳ್ತಂಗಡಿ; ಅ.9 ರಂದು ಸಂಜೆ ಸಿಡಿಲು ಮಿಂಚು ಗಾಳಿ ಸಹಿತ ಸುರಿದ ಭಾರೀ ಮಳೆಗೆ ಮುಂಡಾಜೆ ಗ್ರಾಮದಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದರೆ ಹಲವೆಡೆ ಮನೆಗೆ ಸಿಡಿಲು ಬಡಿದು ಭಾರೀ ಹಾನಿಯಾಗಿದೆ.
ಮುಂಡಾಲ್ಬೆಟ್ಟು ಸುರೇಶ್ ಗೌಡ ಎಂಬವರ ಮನೆಗೆ ಸಿಡಿಲು ಬಡಿದು ಸ್ವಿಚ್ ಬೋರ್ಡ್‌ಗಳಿಗೆ ಹಾನಿಯಾಗಿದೆ . ಮನೆಯ ಗೋಡೆ ಬಿರುಕು ಬಿಟ್ಟಿದೆ. ಕಾರು ಪಾರ್ಕಿಂಗ್ ನ ಪಿಲ್ಲರ್ ಕಂಬದ ಬುಡ ಸಿಡಿಲಾಘಾತಕ್ಕೆ ಸಿಮೆಂಟ್ ಸಮೇತ ಕಿತ್ತು ಬಂದಿದ್ದು ಬಾವಿಯ ಕಟ್ಟೆಗೂ ಹಾನಿಯಾಗಿದೆ. ನೀರಿನ ಪಂಪಿನ ಕವರ್ ಛಿದ್ರಗೊಂಡಿದ್ದು ಮನೆಯ ಇನ್ವರ್ಟರ್, ಫ್ಯಾನ್‌ಗಳು, ಬಲ್ಬುಗಳು ಸಂಪೂರ್ಣ ಕೆಟ್ಟು ಹೋಗಿದೆ. ಮನೆಯ ಆವರಣ ಗೋಡೆಯು ಕುಸಿತಗೊಂಡಿದೆ.

ಸುರೇಶ್ ಗೌಡ ಅವರು ಉಜಿರೆ ಎಸ್‌ಡಿಎಂ ಡಿಪ್ಲೋಮಾ ಕಾಲೇಜಿನ ಸಿಬ್ಬಂದಿ, ಅವರ ಪತ್ನಿ‌ ಭಾರತಿ ಅವರು ನಡ ಪಂಚಾಯತ್ ನಲ್ಲಿ ಗುಮಾಸ್ತೆಯಾಗಿದ್ದು ಇಬ್ಬರೂ ಕರ್ತವ್ಯಕ್ಕೆ ಹೋಗಿದ್ದರು. ಮಕ್ಕಳು ಶಾಲೆಗೆ ಹೋಗಿದ್ದರಿಂದ ಮನೆಯಲ್ಲಿ ಯಾರೂ ಇರಲಿಲ್ಲ. ಆದ್ದರಿಂದ ಹೆಚ್ಚಿನ‌ ಅನಾಹುತ ತಪ್ಪಿದೆ.

Related posts

ಮಾಲಾಡಿ ಸ.ಹಿ.ಪ್ರಾ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ, ಗಿಡ ನಾಟಿ ಕಾರ್ಯಕ್ರಮ

Suddi Udaya

ಗೌಸಿಯಾ ಜಾಮಿಯಾ ಮಸೀದಿಯಲ್ಲಿ ಏಪ್ರಿಲ್ 11 ಮತ್ತು 12 ರಂದು ನಡೆಯಲಿರುವ ಬೃಹತ್ ವಾರ್ಷಿಕ ಜಲಾಲಿಯ್ಯಾ ರಾತೀಬ್ ಮಜ್ಲಿಸ್ ಕಾರ್ಯಕ್ರಮ

Suddi Udaya

ಸೇವಾ ನಿವೃತ್ತಿ ಅಂಗವಾಗಿ ಉಷಾ ವಿ. ರವರಿಗೆ ಬೀಳ್ಕೊಡುಗೆ

Suddi Udaya

ಬಿಜೆಪಿ ಓಡಿಲ್ನಾಳ ಶಕ್ತಿ ಕೇಂದ್ರ ಅಧ್ಯಕ್ಷರಾಗಿ ರಾಜ್ ಪ್ರಕಾಶ್ ಶೆಟ್ಟಿ ಆಯ್ಕೆ

Suddi Udaya

ಎಕ್ಸೆಲ್ ಗುರುವಾಯನಕೆರೆ: ಸಿ.ಇ.ಟಿ.ಯಲ್ಲಿ ಎಂದಿನಂತೆ ರ‍್ಯಾಂಕ್ ಗಳ ಸುರಿಮಳೆ : ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್

Suddi Udaya

ವೈಯಕ್ತಿಕ ತೇಜೋವಧೆ ಸರಿಯಲ್ಲ: ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ

Suddi Udaya
error: Content is protected !!