ನಾರಾವಿ: ಹೆಗ್ಗಡೆ ವಲಯ ಬಾಂಧವರಿಂದ ಹೆಗ್ಗಡೆ ಸಂಗಮ 2023 ಕಾರ್ಯಕ್ರಮವು ಬಿರ್ಮೋಟ್ಟು ಮಹಾದೇವಿ ಮಂದಿರ ನಾರಾವಿಯಲ್ಲಿ ಅ.16 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಾವಿ ವಲಯ ಹೆಗ್ಗಡೆ ಸಂಘದ ಅಧ್ಯಕ್ಷ ಶುಭರಾಜ್ ಹೆಗ್ಡೆ ವಹಿಸಿದ್ದರು
ವೇದಿಕೆಯಲ್ಲಿ ಮುಖ್ಯ ಅಥಿತಿಯಾಗಿ ದ.ಕ ಹೆಗ್ಗಡೆ ಸಂಘದ ಅಧ್ಯಕ್ಷರಾದ ನವೀನ್ ಹೆಗ್ಡೆ, ದಿವಾಕರ ಹೆಗ್ಡೆ, ಶ್ಯಾಮಹೆಗ್ಡೆ, ಉದಯ ಹೆಗ್ಡೆ, ರತ್ನವತಿ ಹೆಗ್ಡೆ, ಶೀನಪ್ಪ ಹೆಗ್ಡೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಅಣ್ಣಪ್ಪ ಹೆಗ್ಡೆ, ಸರಸ್ವತಿ ಹೆಗ್ಡೆ,ವಿಮಲಾ ಹೆಗ್ಡೆ, ಮಹಾಬಲ ಹೆಗ್ಡೆ ಹಾಗೂ ನಿವೃತ್ತ ನೌಕರ ಲಿoಗಯ್ಯ ಹೆಗ್ಡೆಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮನರಂಜನಾ ಆಟೋಟ ಸ್ಪರ್ಧೇ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.











