ಬೆಳ್ತಂಗಡಿ ಸವಿತಾ ಸಮಾಜದ ವತಿಯಿಂದ ಭಂಡಾರಿ ಸಂಘದ ಗೌರವ ಅಧ್ಯಕ್ಷರು ಪುವಪ್ಪ (ಅಣ್ಣಿ) ಭಂಡಾರಿ. ಹಾಗೂ ಹಿರಿಯ ಕ್ಷೌರಿಕ ಕೆಲಸ ಮಾಡುತ್ತಿರುವ ಮೋಹನ್ ಭಂಡಾರಿ ವೇಣೂರು ಇವರಿಗೆ ಸಂಘದ ಸದಸ್ಯರಗಳಿಂದ ಗುರುವಾಯನಕೆರೆ ಪಣೆಜಾಲು ಭಂಡಾರಿ ಸಭಾಭವನದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಮಾಜಿ ಸದಸ್ಯರಾದ ಕೇಶವ ಭಂಡಾರಿ ಬೆಳ್ತಂಗಡಿ, ಅಧ್ಯಕ್ಷ ಗೋಪಾಲ ಭಂಡಾರಿ, ರವಿ ಸದಾಶಿವ ಭಂಡಾರಿ, ದೀಕ್ಷಿತ್ ಭಂಡಾರಿ, ಚಂದ್ರಶೇಖರ್ ಭಂಡಾರಿ ಹಾಗೂ ಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು.