ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ರಸ್ತೆ ಬದಿ ವಾಹನ ನಿಲ್ಲಿಸುವರಿಗೆ ಎಚ್ಚರಿಕೆ, ಬ್ಯಾಟರಿ ಕಳ್ಳರಿದ್ದಾರೆ: ಸುಲ್ಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವು ವಾಹನಗಳ ಬ್ಯಾಟರಿ ಕಳವು; ವೇಣೂರು ಪೊಲೀಸ್ ಠಾಣೆಗೆ ದೂರು

ಬೆಳ್ತಂಗಡಿ: ಸುಲ್ಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿಲ್ಲಿಸಿದ್ದ ವಾಹನಗಳಿಂದ ಬ್ಯಾಟರಿ ಕಳವು ಮಾಡಿದ ಘಟನೆ ಡಿ.13 ರಂದು ಬೆಳಕಿಗೆ ಬಂದಿದೆ.

ಯು.ಎಸ್.ಕೆ ಕನಸ್ಟ್ರಕ್ಷನ್ ಅವರಿಂದ ಅಳದಂಗಡಿಯಿಂದ ನಾರಾವಿಯವರೆಗೆ ರಾಜ್ಯ ಹೆದ್ದಾರಿಯ ರಸ್ತೆ ಕಾಮಗಾರಿ ಕೆಲಸ ನಡೆಯುತ್ತಿದ್ದು,ಅವರು ಸುಲ್ಕೇರಿ ಗ್ರಾಮ ಪಂಚಾಯತ್ ಎದರು ಮೈದಾನದಲ್ಲಿ ವಾಹನ ನಿಲ್ಲಿಸಿದ್ದರು. ನಿಲ್ಲಿಸಲಾಗಿದ್ದ ಟಿಪ್ಪರ್ ನ ಬ್ಯಾಟರಿ ಜೋಡಿಸುವ ಲಾಕರ್ ಮುರಿದು ಬ್ಯಾಟರಿ ಕಳವು ಮಾಡಲಾಗಿದೆ. ವಯರ್ ಕಟ್ ಮಾಡಿ ವಿಕೃತಿ ಮೆರೆಯಲಾಗಿದೆ. ಕುದ್ಯಾಡಿ ರಸ್ತೆ ಬದಿ ನಿಲ್ಲಿಸಿದ್ದ ಹಿಟಾಚಿಯ 2 ಬ್ಯಾಟರಿ ಕಳವಾಗಿದೆ. ಇತ್ತಿಚೆಗೆ ಸ್ಥಳಿಯ ಶಾಲೆಯಲ್ಲಿ ಕಾರ್ಯಕ್ರಮ ನಡೆದಾಗ ಜನರೇಟರ್ ನ ಬ್ಯಾಟರಿ ಕಳವು ಮಾಡಲಾಗಿದೆ.ಸಿದ್ದಿ ವಿನಾಯಕ ಅರ್ಥ್ ಮೂವರ್ಸ್ ನ ಬ್ಯಾಟರಿ ಕೂಡ ಕಳವಾಗಿದೆ.ಈ ಸಂಬಂಧ ವೇಣೂರು ಪೋಲಿಸ್ ಠಾಣೆಗೆ ದೂರು ನೀಡಲಾಗಿದೆ.

ಕಳವಾದ ಬ್ಯಾಟರಿಗಳ ಮೌಲ್ಯ ರೂ. 50 ಸಾವಿರ ಎಂದು ಅಂದಾಜಿಸಲಾಗಿದೆ. ಸುಲ್ಕೇರಿ, ಕುದ್ಯಾಡಿ, ಕುತ್ಲೂರು, ಪಿಲ್ಯ ಪರಿಸರದ ರಸ್ತೆ ಬದಿ ವಾಹನ ನಿಲ್ಲಿಸುವರು ಜಾಗ್ರತೆ ವಹಿಸುವುದು ಮುಖ್ಯ. ವಾಹನದ ಬ್ಯಾಟರಿ ಕಳ್ಳರಿದ್ದಾರೆ ಎಚ್ಚರಿಕೆ ಎಂದು ತಿಳಿಸಿದ್ದಾರೆ.

Related posts

ಕರಾವಳಿ ಪ್ರವಾಸೋದ್ಯಮ ಕುರಿತು ವಿಧಾನಸಭಾ ಕಲಾಪದಲ್ಲಿ ಧ್ವನಿ ಎತ್ತಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ

Suddi Udaya

ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ: ಚಿನ್ನಾಭರಣ, ನಗದು ದೋಚಿ ಪರಾರಿ

Suddi Udaya

ಜೇನು ಕುಟುಂಬಕ್ಕಾಗಿ ಕಾಡಿಗೆ ತೆರಳಿದ್ದ ಅಣ್ಣ ಸಂತೋಷ್‌ಗೆ ಕಚ್ಚಿದ ಹಾವು: ಬಾಯಿಯಿಂದ ವಿಷ ಹೀರಿ ಅಣ್ಣನ ಜೀವ ಉಳಿಸಿದ ತಮ್ಮ ಗಣೇಶ್

Suddi Udaya

ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲಾ ವಾರ್ಷಿಕೋತ್ಸವ “ಮನೋಲ್ಲಾಸ ಸಾಂಸ್ಕೃತಿಕ ಸಂಭ್ರಮ -2025”

Suddi Udaya

ಬೆಳ್ತಂಗಡಿಯಲ್ಲಿ ರೂ.56 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮೂರು ಸೇತುವೆ: ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮುಖ್ಯ ಇಂಜಿನಿಯರ್ ಹಾಗೂ ಮುಖ್ಯ ಗುತ್ತಿಗೆದಾರ, ಮತ್ತು ಇಂಜಿನಿಯರ್ ತಂಡ ಭೇಟಿ

Suddi Udaya
error: Content is protected !!