ಸುಲ್ಕೇರಿಮೊಗ್ರು: ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿಯ ವತಿಯಿಂದ ವಿ. ಹರೀಶ್ ನೆರಿಯರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya


ಸುಲ್ಕೇರಿಮೊಗ್ರು: ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿಯ ವತಿಯಿಂದ ನವರಾತ್ರಿಯ ಶುಭ ಸಂದರ್ಭದಲ್ಲಿ ಶ್ರೀ ಮಹಿಷಮರ್ದಿನಿ ದೇವರ ಸನ್ನಿಧಿಯಲ್ಲಿ ರೋಟರಿ ಕ್ಲಬ್ ನಾಗರಬಾವಿ ಬೆಂಗಳೂರು ಇವರಿಂದ ಸಮಾಜಮುಖಿ ಸೇವೆಯಲ್ಲಿ ವಿಶೇಷ ಸಾಧಕ ಪ್ರಶಸ್ತಿ ಪಡೆದ ವಿ. ಹರೀಶ್ ನೆರಿಯರಿಗೆ ಹಾರ ಶಾಲು ಫಲವಸ್ತು ನೀಡಿ ಅಭಿನಂದನಾ ಕಾರ್ಯಕ್ರಮ ಹಾಗೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ವತಿಯಿಂದ ಸ್ಮರಣಿಕೆ ಮತ್ತು ಪ್ರಸಾದ ನೀಡಿ ಅಭಿನಂದಿಸಿದರು. ಮತ್ತು ಮಕ್ಕಳ ಕುಣಿತ ಭಜನಾ ಮಂಡಳಿಯ ಮಕ್ಕಳು ಹೂ ಗುಚ್ಛ ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ಹರಿ ಭಟ್ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರಾಜೇಂದ್ರ ಸಾಲಿಯಾನ್ ಕಾರ್ಯದರ್ಶಿ ಸಂಜೀವ ಹಾಗೂ ಸದಸ್ಯರು, ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿಯ ಗೌರವಾಧ್ಯಕ್ಷರಾದ ಕಿರಣ್ ಕುಮಾರ್, ಅಧ್ಯಕ್ಷರಾದ ಸದಾನಂದ, ಕಾರ್ಯದರ್ಶಿ ದಯಾನಂದ, ಕೋಶಾಧಿಕಾರಿ ಅಶ್ವಥ್ ಸಂಘಟನಾ ಕಾರ್ಯದರ್ಶಿ ರವಿ ಸಾಲಿಯಾನ್ ಹಿರಿಯ ಸದಸ್ಯ ಚಂದಯ್ಯ ನಿಕಟಪೂರ್ವ ಅಧ್ಯಕ್ಷರಾದ ಇಂದೂಧರ, ಕಾರ್ಯದರ್ಶಿ ನಂದನ್‌, ಗೇತನ್‌, ಜಗದೀಶ್‌, ವಿಜಯ್‌, ರಾಜೇಶ್ ಹಾಗೂ ಭಜನಾ ಮಂಡಳಿಯ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು, ಭಜನಾ ತಂಡದ ಮಕ್ಕಳು ಉಪಸ್ಥಿತರಿದ್ದರು.

Leave a Comment

error: Content is protected !!