ನೆರಿಯ: ಕೋಲೋಡಿ ತೋಡಿಗೆ ಪೈಪ್ ಮೋರಿ ಅಳವಡಿಕೆ: ಭರವಸೆ ಈಡೇರಿಸಿದ ರಕ್ಷಿತ್ ಶಿವರಾಂ

Suddi Udaya

ನೆರಿಯ ಗ್ರಾಮದ ಕೋಲೋಡಿ ಎಂಬಲ್ಲಿ ಮಳೆಗಾಲದಲ್ಲಿ ಜನರು ಸಂಕಷ್ಟಕ್ಕೆ ಒಳಗಾಗುತ್ತಿದ್ದ ತೋಡಿಗೆ
ರಕ್ಷಿತ್ ಶಿವರಾಂ ಅವರು ನೀಡಿದ ಭರವಸೆಯಂತೆ ಮೋರಿಯನ್ನು ಅಳವಡಿಸಲಾಗಿದೆ.
ಕೋಲೋಡಿ ಎಂಬಲ್ಲಿ ತೋಡಿನಲ್ಲಿ ಇತ್ತೀಚೆಗೆ ಬೈಕ್ ಸವಾರ ನೀರಲ್ಲಿ ಕೊಚ್ಚಿ ಹೋಗಿ ಬಹಳ ದೊಡ್ಡ ಅವಾಂತರ ಆಗಿತ್ತು.

ಈ ಬಗ್ಗೆ ಗ್ರಾಮಸ್ಥರು ರಕ್ಷಿತ್ ಶಿವರಾಮ್ ಅವರ ಬಳಿ ಬಂದು ಮನವಿ ಮಾಡಿದ್ದರು . ಕಾಯ೯ಪ್ರವೃತ್ತರಾದ ರಕ್ಷಿತ್ ಶಿವರಾಮ್ ಹಾಗೂ ಬೆಳ್ತಂಗಡಿ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷ ಕೆ ಎಂ ನಾಗೇಶ್ ಕುಮಾರ ಗೌಡ ಅವರು ಘಟನಾ ಸ್ಥಳ ವೀಕ್ಷಿಸಿ ತೋಡಿಗೆ ಮೋರಿ ಅಳವಡಿಸಿ ಕೊಡುವುದಾಗಿ ಆಶ್ವಾಸನೆ ಕೊಟ್ಟು ಎರಡು ದಿನದೊಳಗೆ ಕಾಮಗಾರಿ ಪೂರ್ತಿ ಗೊಳಿಸಿದರು.

Leave a Comment

error: Content is protected !!