ನಾವೂರು : ನಾಗಜೆ ಪ್ರದೀಪ್ ರವರ ತೋಟದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆ

Suddi Udaya

ನಾವೂರು ಗ್ರಾಮದ ನಾಗಜೆ ಎಂಬಲ್ಲಿ ಪ್ರದೀಪ್ ರವರ ತೋಟದಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ಹೆಬ್ಬಾವುವನ್ನು ಸ್ಥಳೀಯ ಉರಗ ಪ್ರೇಮಿ ಯುವಕರಾದ ಅಶ್ವಥ್ ಮತ್ತು ಪ್ರದೀಪ ರವರಿಂದ ಸುರಕ್ಷಿತವಾಗಿ ಕಾರ್ಯಾಚರಣೆ ನಡೆಸಿ ರಕ್ಷಿತಾರಣ್ಯಗೆ ಬಿಡಲಾಯಿತು.

ಕಾಡಂಚಿನ ಭಾಗಗಳಲ್ಲಿ ಪದೇಪದೇ ಕಾಣಸಿಗುವ ಹೆಬ್ಬಾವುಗಳು ಆಹಾರ ಹುಡುಕಿಕೊಂಡು ಜನರು ಓಡಾಡುವ ಪ್ರದೇಶಗಳಲ್ಲಿ ಕಾಣಿಸಿಕೊಂಡು ಮಕ್ಕಳಲ್ಲಿ ಮಹಿಳೆಯರಲ್ಲಿ ಭಯ ಸನ್ನಿವೇಶ ನಿರ್ಮಾಣವಾಗುತ್ತದೆ. ಕೆಲವರು ಕೊಲ್ಲುವ ಪ್ರಯತ್ನ ಮಾಡುತ್ತಾರೆ ಆದರೆ ಇತ್ತೀಚಿಗೆ ಉರಗಗಳ ಬಗ್ಗೆ ಜನರಲ್ಲಿ ಪ್ರೇಮ ಭಾವನೆ ಇದ್ದು ಸ್ಥಳೀಯರು ಅದನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡುವಂತ ಕೆಲಸವನ್ನು ಮಾಡುತ್ತಿದ್ದಾರೆ.

Leave a Comment

error: Content is protected !!