24.1 C
ಪುತ್ತೂರು, ಬೆಳ್ತಂಗಡಿ
September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾಳ ದೇವಸ್ಥಾನದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ತಾಳಮದ್ದಳೆ

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ಪಾವನ ಪುರುಷೋತ್ತಮ ಶ್ರೀರಾಮ ತಾಳಮದ್ದಳೆ ಜರಗಿತು.


ಕವಿ ಡಾ. ವಸಂತ ಭಾರದ್ವಾಜ ವಿರಚಿತ ಕೃತಿಯಿಂದ ಆಯ್ದ ವಿಶ್ವಾಮಿತ್ರರ ಯಜ್ಞ ಸಂರಕ್ಷಣೆಯಿಂದ ರಾಮಘಟ್ಟಾಭಿಷೇಕದ ವರೆಗಿನ ಸನ್ನಿವೇಶಗಳನ್ನು ಕಲಾವಿದರು ರೂಪಕದ ರೀತಿಯಲ್ಲಿ ಪ್ರಸ್ತುತಪಡಿಸಿದರು. ಮೂರು ಗಂಟೆಯ ಅವಧಿಯಲ್ಲಿ 18 ಕಲಾವಿದರು ಭಾಗವಹಿಸಿದ್ದು ವಿಶೇಷವಾಗಿತ್ತು.

ಭಾಗವತರು ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಶ್ರೀ ನಿತೀಶ್ ಮನೋಳಿತ್ತಾಯ. ಹಿಮ್ಮೇಳದಲ್ಲಿ ವಾಸುದೇವ ಆಚಾರ್ಯ ಉಜಿರೆ,ಮುರಲೀಧರ ಆಚಾರ್ಯ ನೇರೆಂಕಿ, ಶ್ರೀಪತಿ ಭಟ್ ಉಪ್ಪಿನಂಗಡಿ, ಚಂದ್ರಶೇಖರ ಆಚಾರ್ಯ ಗೇರುಕಟ್ಟೆ, ಅರ್ಥಧಾರಿಗಳಾಗಿ ಮಧೂರು ಮೋಹನ ಕಲ್ಲೂರಾಯ (ವಿಶ್ವಾಮಿತ್ರ )ಗೋಪಾಲ ಶೆಟ್ಟಿ(ಹನುಮಂತ) ಜಯರಾಮ ಭಟ್ ದೇವಸ್ಯ(ಶ್ರೀ ರಾಮ) ಸತೀಶ ಶಿರ್ಲಾಲು(ದಶರಥ) ದಿನೇಶ್ ಭಟ್ ಬಳೆಂಜ(ಶ್ರೀ ರಾಮ)ಹರೀಶ್ ಆಚಾರ್ಯ ಬಾರ್ಯ(ಜನಕ)ರಾಘವ ಮೆದಿನ(ಸೀತೆ )ರಾಘವ ಗೇರುಕಟ್ಟೆ (ದೇವೇಂದ್ರ)ಜಯರಾಮ ಬಲ್ಯ(ದನು ಮತ್ತು ಕಬಂಧ)ಶಿವಾನಂದ ಭಂಡಾರಿ(ತಾಟಕಿ)ಜಿನೇಂದ್ರ ಜೈನ್ ಬಳ್ಳಮಂಜ(ರಾವಣ ) ರಾಹುಲ್ ಶೆಟ್ಟಿ ಗೇರುಕಟ್ಟೆ(ಲಕ್ಷ್ಮಣ ) ದಿವಾಕರ ಆಚಾರ್ಯ ಗೇರುಕಟ್ಟೆ (ಶ್ರೀ ರಾಮ) ಭಾಗವಹಿಸಿದ್ದರು.


ಕಳಿಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ವಸಂತ ಮಜಲು, ಬೆಳ್ತಂಗಡಿ ಸಹಕಾರ ಭಾರತಿ ಅಧ್ಯಕ್ಷ ರಾಜೇಶ್ ಪೆರ್ಮುಡ, ಪ್ರಧಾನ ಅರ್ಚಕರಾದ ರಾಘವೇಂದ್ರ ಆಸ್ರಣ್ಣ, ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಭುವನೇಶ ಗೇರುಕಟ್ಟೆ ,ಶ್ರೀನಾಳ ಮೇಳದ ಪ್ರಬಂಧಕ ರಾಘವ .ಎಚ್ ಕಲಾವಿದರನ್ನು ಗೌರವಿಸಿದರು. ದೇವಳದ ಕಚೇರಿ ವ್ಯವಸ್ಥಾಪಕರಾದ ಗಿರೀಶ್ ಶೆಟ್ಟಿನಾಳ ಸ್ವಾಗತಿಸಿ ಕಥಾ ಸಂಯೋಜನೆ ಮಾಡಿದ ದಿವಾಕರ ಆಚಾರ್ಯ ಗೇರುಕಟ್ಟೆ ವಂದಿಸಿದರು.

Related posts

ಧರ್ಮಸ್ಥಳ: “ಮಂಜೂಷಾ” ವಸ್ತುಸಂಗ್ರಹಾಲಯಕ್ಕೆ ಸೇರ್ಪಡೆಗೊಂಡ “ ಜೈಬಾಲಾಜಿ” ಹಾಯಿದೋಣಿ

Suddi Udaya

ಚಾರ್ಮಾಡಿ ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮೊಸರು ಕುಡಿಕೆ ಉತ್ಸವ

Suddi Udaya

2024ರಲ್ಲಿ ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವ ; ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಶಾಸಕ ಹರೀಶ್ ಪೂಂಜರವರಿಂದ ಕಾರ್ಯಕ್ರಮದ ಯಶಸ್ವಿಗೆ ಉಪಯುಕ್ತ ಮಾಹಿತಿ; ಜನಪ್ರತಿನಿಧಿಗಳು ಮತ್ತು ವಿವಿಧ ಇಲಾಖೆಯ ಇಲಾಖಾಧಿಕಾರಿಗಳು ಸಮಾಲೋಚನೆ ಸಭೆಯಲ್ಲಿ ಭಾಗಿ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದಿಂದ ಡಾ| ಡಿ ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿಷೇಕದ ವರ್ಧಂತ್ಯುತ್ಸವ ಪ್ರಯುಕ್ತ ಗೌರವಾರ್ಪಣೆ

Suddi Udaya

ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಶಿಯೇಷನ್ ವೇಣೂರು ವಲಯ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಉಜಿರೆ: ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘದ ಕ್ಷೇಮ ನಿಧಿಯ 11ನೇ ಸಹಾಯಧನ ಹಸ್ತಾಂತರ

Suddi Udaya
error: Content is protected !!