September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಕ್ಕಡ ಜೇಸಿಗೆ ಸಮ್ಮೇಳನ ಪ್ರಶಸ್ತಿ: ಅಕ್ಷರ ದೀವಿಗೆ ವಲಯದ ಅತ್ಯುತ್ತಮ ಕಾರ್ಯಕ್ರಮ

ಕೊಕ್ಕಡ: ಜೇಸಿಐ ಕೊಕ್ಕಡ ಕಪಿಲಾ ಇವರು 2023 ನೇ ಸಾಲಿನಲ್ಲಿ ಓದುವ ಹವ್ಯಾಸ ಬೆಳೆಸಲು ನಡೆಸಿದ ಲೈಬ್ರರಿ ಪುಸ್ತಕ ವಿತರಣೆ ಅಭಿಯಾನವು ವಲಯದ ಅತ್ಯುತ್ತಮ ಕಾರ್ಯಕ್ರಮ ವಿನ್ನರ್ ಪ್ರಶಸ್ತಿ ಗಳಿಸಿದೆ.

ಅಧ್ಯಕ್ಷ ಜಿತೇಶ್ ಎಲ್ ಪಿರೇರಾ ಅವರು ಈ ವರ್ಷ ನಡೆಸಿದ ನೂತನ ವೈಬ್ ಸೈಟ್ ಸ್ಥಾಪನೆ , ಅಶಕ್ತರಿಗೆ ನೆರವು, ಸ್ಕಾಲರ್ ಶಿಪ್ ವಿತರಣೆ, ಯುವ ಜೇಸಿ ತರಬೇತಿ, ವಲಯ ಮಟ್ಟದ ಸಭೆಯ ಆತಿಥ್ಯ, ಸೆನೆಟರ್ , ಹೆಚ್ ಜಿ.ಎಫ್ , ಜೆ. ಎಫ್.ಯಂ. ಕೊಡುಗೆ, ಶೇಕಡಾ ನೂರರಷ್ಟು ಸದಸ್ಯರ ಹೆಚ್ಚಳ, ಅಧ್ಯಕ್ಷರ ವಾರ್ತಾ ಪತ್ರಗಳ ಎಲ್ಲಾ ಆವೃತ್ತಿಗಳ
ಪ್ರಕಟಣೆ, ಮೌನ ಸಾಧಕರ ಅಭಿನಂದನೆ ಮತ್ತು ನೆರವು, ಯಶಸ್ವೀ ಪ್ರವಾಸ, ಸ್ವಚ್ಛತಾ ಆಂದೋಲನ, ಗಿಡಗಳನ್ನು ನೆಡುವುದು ಸೇರಿದಂತೆ ನಡೆಸಿದ ನೂರಾರು ಕೆಲಸಗಳನ್ನು ಗುರುತಿಸಿ ಔಟ್ ಸ್ಟಾಡಿಂಗ್ ಲೋಕಲ್ ಗ್ಲೋಬಲ್ ಗೋಲ್ಸ್ ಪ್ರಾಜೆಕ್ಟ್ ಆಫ್ ದಿ ಜೋನ್ ವಿನ್ನರ್, ಔಟ್ ಸ್ಟಾಡಿಂಗ್ ಜೇಸಿಐ ಇಂಡಿಯಾ ಪೌಂಡೇಶನ್ ಮೆಂಬರ್ ಆಫ್ ದಿ ಜೋನ್ ವಿನ್ನರ್ ಪ್ರಶಸ್ತಿ ,ಹಾಗೂ ಘಟಕಾಧ್ಯಕ್ಷರಿಗೆ ಜೇಸಿ ಸೇವಾ ರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಪುತ್ತೂರು ಜೇಸಿಐ ಆತಿಥ್ಯದಲ್ಲಿ ಪುತ್ತೂರಿನ ಅಬ್ರಾಡ್ ಮಲ್ಟಿ ಫ್ಲೆಕ್ಸ್ ಆಡಿಟೋರಿಯನಲ್ಲಿ ಅ 28 ಹಾಗೂ 29 ರಂದು ಜರುಗಿದ ವರ್ಣ ರಂಜಿತ ವಲಯ ಸಮ್ಮೇಳನದಲ್ಲಿ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಅವರು ಆಡಳಿತ ಮಂಡಳಿ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಜಿತೇಶ್ ಎಲ್ ಪಿರೇರಾ ಅವರಿಗೆ ಪುರಸ್ಕಾರ ವಿತರಿಸಿ ಗೌರವಿಸಿದರು.

Related posts

ಪುಂಜಾಲಕಟ್ಟೆ: ಬೇರ್ಕಳ ಪೆರುವಾರು ಮನೆಯ ಬಾಬು ಶೆಟ್ಟಿ ನಿಧನ

Suddi Udaya

ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಸಭೆ

Suddi Udaya

ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ರವರಿಂದ ದೇವೆಂದ್ರ ಹೆಗ್ಡೆ ಕೊಕ್ರಾಡಿಯವರಿಗೆ ಸನ್ಮಾನ

Suddi Udaya

ಉಜಿರೆ ಎಸ್.ಡಿ.ಎಂ. ಮಹಿಳಾ ಐಟಿಐಯಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮ ಕುರಿತು ಮಾಹಿತಿ ಕಾರ್ಯಕ್ರಮ

Suddi Udaya

ಆಮಂತ್ರಣ ಪರಿವಾರದ ವಿಜಯಕುಮಾರ್ ಜೈನ್ ವರಿಗೆ ಗೌರವ ಸನ್ಮಾನ

Suddi Udaya

ಅ.20 : ಬೆಳಾಲಿನಲ್ಲಿ ಯುವಸಿರಿ- ರೈತ ಭಾರತದ ಐಸಿರಿ: 5೦೦ಕ್ಕೂ ಮಿಕ್ಕಿ ಕಾಲೇಜು ವಿದ್ಯಾರ್ಥಿಗಳಿಂದ ನೇಜಿನಾಟಿ

Suddi Udaya
error: Content is protected !!