July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೌಟುಂಬಿಕ ವಿಚಾರದಲ್ಲಿ ಕಲಹ: ಮಾವನಿಗೆ ಸ್ಕೂಟರ್ ನಲ್ಲಿ ಡಿಕ್ಕಿ ಹೊಡೆದು ಗಂಭೀರ ಗಾಯಗೊಳಿಸಿದ ಅಳಿಯ: ಮಿತ್ತಬಾಗಿಲು ಕಂಬಳದಡ್ಡದಲ್ಲಿ ನಡೆದ ಘಟನೆ

ಬೆಳ್ತಂಗಡಿ: ಕೌಟುಂಬಿಕ ವಿಚಾರದಲ್ಲಿ ಸ್ವತಹಾ ಅಳಿಯನೇ ಮಾವನಿಗೆ ಸ್ಕೂಟರ್ ನಲ್ಲಿ ಡಿಕ್ಕಿ ಹೊಡೆಸಿ ಕೊಲೆ ಯತ್ನ ನಡೆಸಿದ ಘಟನೆ ಮಿತ್ತಬಾಗಿಲು ಕಂಬಳದಡ್ಡ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ. ಈ ಘಟನೆಯಲ್ಲಿ ‌‌ಕಂಬಳದಡ್ಡ ನಿವಾಸಿ ಕೆ.ಹೆಚ್ ಇಬ್ರಾಹಿಂ (60ವ) ಎಂಬವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅವರ ಸ್ವಂತ ಅಳಿಯ ಮುಹಮ್ಮದ್ ಶಾಫಿ ಎಂಬವರ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನೆ ವಿವರ: ಮಿತ್ತಬಾಗಿಲು ಗ್ರಾಮದ ನಿವಾಸಿ ಮಹಮ್ಮದ್‌ ರಫೀಕ್ ಎಂಬವರು ಬೆಳ್ತಂಗಡಿ ಠಾಣೆಗೆ ನೀಡಿದ ದೂರಿನಲ್ಲಿ ನ .2 ರಂದು ತನ್ನ ತಂದೆ ಕೆ ಎಚ್‌ ಇಬ್ರಾಹಿಂ ಶಾಫಿ (60ವ) ರವರು, ಕಾಜೂರು ಮಸೀದಿಯಲ್ಲಿರುವ ಕಾರ್ಯಕ್ರಮದ ನಿಮಿತ್ತ, ಮಕ್ಕಳು ಹೆಂಗಸರನ್ನು ಅವರ ಅಕ್ಕನ ಮನೆಗೆ ಬಿಡಲು ಹೋದವರು, ರಾತ್ರಿಯವರೆಗೆ ಮನೆಗೆ ಬಾರದೇ ಇರುವುದರಿಂದ ಈ ಬಗ್ಗೆ ವಿಚಾರಿಸಲು, ಸ್ಕೂಟರಿನಲ್ಲಿ ಕಂಬಳದಡ್ಡು ಎಂಬಲ್ಲಿಗೆ ತಲುಪಿದಾಗ, ಸ್ವಲ್ಪ ದೂರದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಸ್ಕೂಟರೊಂದು ವ್ಯಕ್ತಿಯೊಬ್ಬರಿಗೆ ಡಿಕ್ಕಿಯಾಗಿ ಬೊಬ್ಬೆ ಕೇಳುತ್ತಿದ್ದು, ಕೂಡಲೇ ಅಲ್ಲಿಗೆ ಹೋಗಿ ನೋಡಿದಾಗ ,ನನ್ನ ತಂದೆ ಡಾಮಾರು ರಸ್ತೆಯಲ್ಲಿ ಬಿದ್ದಿದ್ದು, ನನ್ನ ತಂಗಿಯ ಗಂಡನಾದ ಮಹಮ್ಮದ್‌ ಶಾಫಿ, ತನ್ನ ತಂದೆಗೆ ಕೈಯಿಂದ ಹೊಡೆಯುತ್ತಿದ್ದು, ನನ್ನನ್ನು ನೋಡಿ ಆರೋಪಿಯು ನನ್ನ ಸ್ಕೂಟರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆರೋಪಿ ಮಹಮ್ಮದ್‌ ಶಾಫಿಯು ತಂದೆಯವರನ್ನು ಸ್ಕೂಟರ್‌ ನಿಂದ ಡಿಕ್ಕಿ ಹೊಡೆದು ಕೊಲೆ ಮಾಡುವ ಪ್ರಯತ್ನ ಮಾಡಿರುವುದಾಗಿ ಆರೋಪಿಸಿ ಬೆಳ್ತಂಗಡಿ ಪೊಲೀಸ್ ರಿಗೆ ದೂರು ನೀಡಿದ್ದಾರೆ.ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ ನಂ 109/2023 ಕಲಂ; 279,326,323,307 ಐಪಿಸಿ ಯಂತೆ ಪ್ರಕರಣ ದಾಖಲಾಗಿದ್ದು ,ತನಿಖೆ ನಡೆಸಲಾಗುತ್ತಿದೆ.

Related posts

ಕಳೆಂಜ ಗೋ ಶಾಲೆಗೆ ರೂ.33050 ದೇಣಿಗೆ ಹಸ್ತಾಂತರ

Suddi Udaya

ಗುರುವಾಯನಕೆರೆ ಮೆಡೆಕ್ಸ್ ಪಾಲಿಕ್ಲಿನಿಕ್ಸ್ ನಲ್ಲಿ ಖಾಸಗಿ ಬಸ್ ನೌಕರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ವೇಣೂರು ನವಚೇತನ ಆಂಗ್ಲಮಾಧ್ಯಮ ಶಾಲೆಯ ವಾರ್ಷಿಕೋತ್ಸವ

Suddi Udaya

ಉಜಿರೆ ಟಿ.ಬಿ. ಕ್ರಾಸ್ ನಿವಾಸಿ ಸಂದೀಪ್ ಅಸೌಖ್ಯದಿಂದ ನಿಧನ

Suddi Udaya

ಅಳದಂಗಡಿಯಲ್ಲಿ “ಅಶ್ವಿ” ಅಲಂಕಾರ ಮಳಿಗೆ ಶುಭಾರಂಭ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ಕಾಂಬೋಡಿಯ ತಂಡದಿಂದ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ

Suddi Udaya
error: Content is protected !!