September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವಿಚಂದ್ರ ಬಿ ಸಾಲಿಯಾನ್ ಇವರಿಗೆ ಕಲಾರತ್ನ ಗೌರವ ಪುರಸ್ಕಾರ

ಮಂಗಳೂರು: ಇತ್ತೀಚೆಗೆ ದ.ಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದ ಖ್ಯಾತ ರಂಗಭೂಮಿ ಕಲಾವಿದ, ನಾಟಕ ರಚನೆಕಾರ ರವಿಚಂದ್ರ ಬಿ ಸಾಲಿಯಾನ್ ಇವರಿಗೆ ಮಂಗಳೂರಿನ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಮತ್ತು ಆ್ಯಕ್ಸಿಸ್ ಬ್ಯಾಂಕ್ ವತಿಯಿಂದ ರಂಗಭೂಮಿಯಲ್ಲಿ ಮಾಡಿದ ಮಹಾ ಸಾಧನೆಗಾಗಿ ಕಲಾ ರತ್ನ ಪ್ರಶಸ್ತಿ ನೀಡಿ ನ.4ರಂದು ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಿದರು.

ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಮತ್ತು ಆಕ್ಸಿಸ್ ಬ್ಯಾಂಕ್ ಸಮಾಜದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ಮಂಗಳೂರಿನ ಅತ್ತಾವರದಲ್ಲಿ ನಡೆಯಿತು.

ರವಿಚಂದ್ರ ಬಿ ಸಾಲಿಯಾನ್ ವೇಣೂರು ಇವರು ರಂಗಭೂಮಿಯಲ್ಲಿ ಕಳೆದ 35 ವರ್ಷಗಳಿಂದ ತೊಡಗಿಸಿಕೊಂಡು ಸುಮಾರು 30ನಾಟಕಗಳನ್ನು ರಚಿಸಿದ್ದಾರೆ ಇವರ ನಾಟಕಗಳು ಕರಾವಳಿ ಮಾತ್ರವಲ್ಲದೇ, ದೂರದ ಮುಂಬೈಯಲ್ಲೂ ಯಶಸ್ವಿಯಾಗಿ ಪ್ರದರ್ಶನಗೊಂಡಿವೆ. ಸ್ತ್ರೀ ಪಾತ್ರದಾರಿಯಾಗಿ ಇವರು ಕರಾವಳಿಯ ನಾಟಕ ರಂಗದಲ್ಲಿ ಅದ್ಬುತ ಸಾಧನೆ ಮಾಡಿರುವ ಇವರಿಗೆ ಅದೆಷ್ಡೋ ಪ್ರಶಸ್ತಿಗಳು ಅರಸಿ ಬಂದಿವೆ.

ವೇಣೂರಿನಲ್ಲಿ ಫಲ್ಗುಣಿ ಕಲಾತಂಡ ಎಂಬ ನಾಟಕ ತಂಡವನ್ನು ಎರಡು ದಶಕಗಳ ಹಿಂದೆ ತನ್ನ ಸ್ನೇಹಿತ ಹೇಮಂತ್ ಕುಮಾರ್ ಭಟ್ ಬಡಕೋಡಿ ಇವರೊಂದಿಗೆ ಕಟ್ಟಿ ಆ ತಂಡದ ಮೂಲಕ ಜಿಲ್ಲೆಯಾದ್ಯಂತ ಕಲಾ ಸೇವೆ ನೀಡುತ್ತಿದ್ದಾರೆ.

Related posts

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಬೆಂಗಳೂರು ಭುವನೇಶ್ವರಿ ಕ್ಯಾಟರರ್ಸ್ ಜೆಬಿಆರ್ ಎಂಟರ್ ಪ್ರೈಶಸ್ ರವರಿಂದ ದೇವರಿಗೆ ವಿಶೇಷ ಹೂವಿನ ಅಲಂಕಾರ

Suddi Udaya

ಭಜನೆಯಿಂದ ಸಾಮಾಜಿಕ ಸಾಮರಸ್ಯ: ಪ್ರೊ. ಶುಭಾ ಮರವಂತೆ

Suddi Udaya

ಓಡಿಲ್ನಾಳ ಶಾಲಾ ವಿದ್ಯಾರ್ಥಿಗಳಿಗೆ ನೆರಿಯ ಸ್ಟೇಶನ್ ಇಂಚಾರ್ಜ್ ಪೆಟ್ರೋನೆಟ್ ವತಿಯಿಂದ ಬ್ಯಾಗ್ ಹಾಗೂ ಲೇಖನಿ ಸಾಮಾಗ್ರಿ ವಿತರಣೆ

Suddi Udaya

ಕಡಿರುದ್ಯಾವರ: ಕಾನರ್ಪ ಪುರುಷರ ಬಳಗದ ವತಿಯಿಂದ ಪುರುಷರ ರಾಶಿ ಪೂಜೆ

Suddi Udaya

ಹೊಸಂಗಡಿ ಗ್ರಾ.ಪಂ. ಮತ್ತು ಅರಣ್ಯ ಇಲಾಖೆಯ ವತಿಯಿಂದ ವನಮಹೋತ್ಸವ

Suddi Udaya

ನಾರಾವಿ: ಸಂತ ಅಂತೋನಿ ಪದವಿ ಪೂರ್ವ ಕಾಲೇಜಿನಲ್ಲಿ ವನಮಹೋತ್ಸವ

Suddi Udaya
error: Content is protected !!