April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆಯಲ್ಲಿ ಡಾ| ಸೂರಜ್ ರವರ ಡೆಂಟಲ್ ಕ್ಲಿನಿಕ್ ಶುಭಾರಂಭ

ಉಜಿರೆ: ಬೆಳೆಯುತ್ತಿರುವ ಉಜಿರೆ ನಗರಕ್ಕೆ ಡಾ| ಸೂರಜ್ ರವರ  ಡೆಂಟಲ್ ಕ್ಲಿನಿಕ್ ಹೊಸ ಮುತ್ತು. ಮನುಷ್ಯನ ಆರೋಗ್ಯದ ಜಾಗೃತಿಯಿಂದ  ವೈದ್ಯರಿಗೆ ಸೇವೆ ಮಾಡುವ ಅವಕಾಶ ದೊರೆತಿದೆ. ದಂತದ ಆರೋಗ್ಯದ ಬಗೆಗೆ ಜನರು ಜಾಗೃತರಾಗಿದ್ದಾರೆ. ಮುಖದ ಅಂದ ಹೆಚ್ಚಿಸಲು ಹಾಗೂ ದಂತದ ಸಂರಕ್ಷಣೆಗೆ  ದಂತ ವೈದ್ಯರ ಸೇವೆ ಅಗತ್ಯವಿದೆ.  ಶೈಕ್ಷಣಿಕ ಕೇಂದ್ರದ ಪರಿಸರದ ಜನರು  ದಂತ ವೈದ್ಯಕೀಯ ಸೇವೆಯ ಪ್ರಯೋಜನ ಪಡೆಯಬೇಕೆಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಹೇಳಿದರು.                 

 ಅವರು ನ.12 ರಂದು  ಉಜಿರೆಯ ಪಾರಿಜಾತ  ವಾಣಿಜ್ಯ ಸಂಕೀರ್ಣದಲ್ಲಿ ನೂತನವಾಗಿ ಪ್ರಾರಂಭಗೊಂಡ  ಡಾ|ಸೂರಜ್ ಅವರ ಡೆಂಟಲ್ ಕ್ಲಿನಿಕನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಕೋರಿದರು. ಅಶ್ವಿನಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ| ಅಶ್ವಿ ನ್ ಉದ್ಯಾವರ, ಡಾ| ಚಾರುಲತಾ ,ಸೌತಡ್ಕ ದೇವಸ್ಥಾನದ ಅರ್ಚಕ ಸತ್ಯಪ್ರಿಯ ಕಲ್ಲೂರಾಯ, ಡಾ| ಪ್ರಕಾಶ್, ಸುಳ್ಯ ಕೆ.ವಿ.ಜಿ. ಕಾಲೇಜಿನ ಡೀನ್ ಡಾ| ಮೋಕ್ಷ ನಾಯಕ್,ನಿಟ್ಟೆ ವಿ.ವಿ.ಯ  ಪರೀಕ್ಷಾ  ಕೇಂದ್ರದ  ಡಾ|ಪ್ರಸಾದ್.,ಪದ್ಮ ಗೌಡ ,ಡಾ| ಗೋಪಾಲಕೃಷ್ಣ,ಡಾ| ಎಂ.ಎಂ . ದಯಾಕರ್ , ಮಂಗಳೂರು ಶ್ರೀನಿವಾಸ್ ಡೆಂಟಲ್ ಕಾಲೇಜಿನ ಡಾ!ಕೃಪಾಲ್  ಮೊದಲಾದವರು ಆಗಮಿಸಿ   ಶುಭ ಕೋರಿದರು.                   

ಧರ್ಮಸ್ಥಳದ   ಗಿರೀಶ್ ಕುದ್ರೆನ್ತಯ, ಧನಂಜಯ ರಾವ್, ಮುಖ್ಯ ಶಿಕ್ಷಕ ಸುರೇಶ ಕೆ, ರವಿಪ್ರಕಾಶ್ ರಾವ್, ವೆಂಕಟೇಶ್, ಮೊದಲಾದವರು ಆಗಮಿಸಿ ನೂತನ ಉದ್ಯಮಕ್ಕೆ ಶುಭ ಹಾರೈಸಿದರು. ಡಾ| ಸೂರಜ್ ಸ್ವಾಗತಿಸಿ,  ಶಿಕ್ಷಕ ರಾಧಾಕೃಷ್ಣ  ಕೆರ್ಮುಣ್ಣಾಯ ನಿರೂಪಿಸಿ, ವಂದಿಸಿದ ಕಾರ್ಯಕ್ರಮದಲ್ಲಿ ಶ್ರೀಶ ಕೆರ್ಮುಣ್ಣಾಯ ಪ್ರಸ್ತಾವಿಸಿದರು.

Related posts

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ಪೋಷಕರ ಸಭೆ

Suddi Udaya

ಗೇರುಕಟ್ಟೆ ಸೌಹಾರ್ದ ಟ್ರೋಫಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ

Suddi Udaya

ವೇಣೂರು ಮಹಾ ಮಸ್ತಕಾಭಿಷೇಕಕ್ಕೆ ಶಾಸಕ ಹರೀಶ್ ಪೂಂಜರವರಿಗೆ ಆಮಂತ್ರಣ ನೀಡಿ‌ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಮಹಾ ಮಸ್ತಕಾಭಿಷೇಕ ಸಮಿತಿ ಪದಾಧಿಕಾರಿಗಳು

Suddi Udaya

ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ವಾಣಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ವಿಭಾಗಿಯ ಮಟ್ಟಕ್ಕೆ ಆಯ್ಕೆ

Suddi Udaya

ತೆಲುಗು ನಟ ಶ್ರೀಕಾಂತ್ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನಕ್ಕೆ ಭೇಟಿ

Suddi Udaya

ಹತ್ಯಡ್ಕ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya
error: Content is protected !!