ಉಜಿರೆ: ಕುಂಟಿನಿ ಎಸ್ ಸಿ ಕಾಲೊನಿಯಲ್ಲಿ 9ನೇ ವರ್ಷದ ಸಾಮೂಹಿಕ ದೀಪಾವಳಿ ಆಚರಣೆ

Suddi Udaya

ಉಜಿರೆ: ಉಜಿರೆಯ ಕುಂಟಿನಿ ಎಸ್.ಸಿ ಕಾಲೊನಿಯಲ್ಲಿ 9ನೇ ವರ್ಷದ ದೀಪಾವಳಿಯನ್ನು ಸಾಮೂಹಿಕವಾಗಿ ನ.14 ರಂದು ಆಚರಿಸಲಾಯಿತು.
ಲಕ್ಷ್ಮಿ ಪೂಜೆಯನ್ನು ಡಾ| ಎಂ ಎಂ.ದಯಾಕರ್ ಭಟ್ ರವರು ನೆರವೇರಿಸಿ ಮಾತನಾಡಿ ಮಹಾಲಕ್ಷ್ಮಿ ಮಂತ್ರೋಪದೇಶವನ್ನು ಕಾಲನಿಯ ಸರ್ವರಿಗೂ ಹಿರಿಕಿರಿಯರೆನ್ನದೆ ನೀಡಲಾಯಿತು. ಮಹಾಲಕ್ಷ್ಮಿಯ ಅನುಗ್ರಹದಿಂದ ಜೀವನದಲ್ಲಿ ಸಂತಾನ ಸಂಪತ್ತು ಆರೋಗ್ಯ ಮತ್ತು ಸುಖ ಗಳಿಸಬಹುದು ಎಂದರು.


ಈ ಹಿಂದಿನ ವರ್ಷಗಳಲ್ಲಿ ಪ್ರತೀ ಮನೆಗೆ ನೀಡಿದ ತುಳಸಿಕಟ್ಟೆಯ ಅಲಂಕಾರ ಮತ್ತು ಬಲಿಂದ್ರ ಲೆಪ್ಪು ಇವುಗಳನ್ನೂ ತಮ್ಮ ಮನೆಗಳಲ್ಲಿ ನಿಷ್ಠೆಯಿಂದ ಆಚರಿಸುವಂತೆ ವಿವರಿಸಲಾಯಿತು.ಕಿರಿಯರೆಲ್ಲರೂ ತಮಗಿಂತ ಹಿರಿಯರ ಪಾದಗಳಿಗೆ ವಂದಿಸಿ ಆಶೀರ್ವಾದ ಪಡೆದರು. ಹಬ್ಬದ ಸಂಭ್ರಮ ಆಚರಣೆಗಾಗಿ ಕಾಲನಿಯ ಪ್ರತೀ ಮನೆಗಳಿಗೆ ಅಕ್ಕಿ, ಬೆಲ್ಲ, ಬೇಳೆ ,ತೆಂಗಿನಕಾಯಿ ಮತ್ತು ಪಟಾಕಿಗಳನ್ನು ವಿತರಿಸಲಾಯಿತು. ಸಮಸ್ತರೂ ಹಣತೆಗಳನ್ನು ಬೆಳಗಿ ಸುಡುಮದ್ದು ಸಿಡಿಸಿ ಸಂಭ್ರಮಿಸಿದರು.


ಮುಖ್ಯ ಅತಿಥಿಗಳಾಗಿ ಸಂಘದ ಉನ್ನತ ಅಧಿಕಾರಿಗಳಾದ ಶಿವಪ್ರಸಾದ್ ಮಲೇಬೆಟ್ಟು ರವರು ಆಗಮಿಸಿ ದೀಪಾವಳಿಯ ಮಹತ್ವ ವಿವರಿಸಿದರು ಮತ್ತು ಸಮಾಜದ ಎಲ್ಲಾ ವರ್ಗಗಳಿಗೂ ತಲುಪುವಂತೆ ಕಾರ್ಯಕ್ರಮ ಆಯೋಜಿಸುವುದು ಬಹಳ ಮುಖ್ಯ ಎಂದರು.
ಇನ್ನೋರ್ವ ಮುಖ ಅತಿಥಿ ಪೃಥ್ವಿರಾಜ್ ಶೆಟ್ಟಿ ಯವರು ಇಂತಹ ಕಾರ್ಯಕ್ರಮ ಆಯೋಜಿಸಿದವರು ಶ್ಲಾಘನೀಯರು ಎಂದರು .
ಕೃಷ್ಣಪ್ಪ ಉಪಸ್ಥಿತರಿದ್ದರು. ಆಗಮಿಸಿದ ಸರ್ವರಿಗೂ ರೋಟರಿ ಆನ್ಸ್ ಬೆಳ್ತಂಗಡಿ ಅಧ್ಯಕ್ಷೆ ಸಿಹಿತಿಂಡಿಗಳನ್ನು ವಿತರಿಸಿದರು.

Leave a Comment

error: Content is protected !!