ನ.19: ಬೆಳ್ತಂಗಡಿಯಲ್ಲಿ ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ಉಚಿತ ದತ್ತು ಕೊಡುವ ಶಿಬಿರ

Suddi Udaya

ಬೆಳ್ತಂಗಡಿ: ತಾಲೂಕಿನ ಪ್ರಾಣಿ ಪ್ರಿಯರಿಗೆ ಸುವರ್ಣವಕಾಶ, ಎಮಿನಲ್ ಕೇರ್ ಟ್ರಸ್ಟ್ ಶಕ್ತಿನಗರ ಮಂಗಳೂರು , ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ಪಟ್ಟಣ ಪಂಚಾಯತ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ಉಚಿತ ದತ್ತು ಕೊಡುವ ಶಿಬಿರ ನ.19 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ನಡೆಯಲಿದೆ.

ದತ್ತುಕೊಡುವ ನಿಯಮಗಳು: ನಿಮ್ಮ ವಿಳಾಸದ ನಕಲು ಪತ್ರ ಕಡ್ಡಾಯವಾಗಿ ಕೊಡಬೇಕು., ನೀವು ನಾಯಿ /ಬೆಕ್ಕಿಗೆ ಸಂತಾನವಾಗದಂತೆ ಚಿಕಿತ್ಸೆ ಮಾಡಿಸಬೇಕು, ನೀವು ತಿಂಗಳಿಗೊಮ್ಮೆ ನಿಮ್ಮ ನಾಯಿ / ಬೆಕ್ಕಿನ ಬಗ್ಗೆ ವರದಿ ಕೊಡಬೇಕು.

Leave a Comment

error: Content is protected !!