ಕಳೆಂಜ ಅಂಗಡಿಯಲ್ಲಿ ಅಕ್ರಮ ಮದ್ಯ ಸಂಗ್ರಹ ಮಾಡಿದ ಆರೋಪ: ಅಂಗಡಿ ಮಾಲಕನ್ನು ದೋಷಯುಕ್ತಗೊಳಿಸಿ ನ್ಯಾಯಾಲಯ ಆದೇಶ

Suddi Udaya

Updated on:

ಕಳೆಂಜ : ಅಂಗಡಿಯಲ್ಲಿ ಅಕ್ರಮ ಮದ್ಯ ಸಂಗ್ರಹ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಗಡಿ ಮಾಲಕನ್ನು ದೋಷಯುಕ್ತಗೊಳಿಸಿ ಬೆಳ್ತಂಗಡಿ ನ್ಯಾಯಾಲಯ ತೀರ್ಪು ನೀಡಿದೆ.

ಕಳೆಂಜ ಗ್ರಾಮದ ಡಾ| ಟಿ.ವಿ.ಜೋಸೆಫ್ ಎಂಬವರ ಮಾಲಕತ್ವದ ಅಂಗಡಿಯನ್ನು ಬಾಡಿಗೆ ನೆಲೆಯಲ್ಲಿ ಪಡೆದಿದ್ದ ವ್ಯಕ್ತಿ ಸದ್ರಿ ಅಂಗಡಿ ಕೋಣೆಯಲ್ಲಿ ಅಕ್ರಮ ಮದ್ಯ ಸಂಗ್ರಹಣೆ ಮಾಡಿದ ಬಗ್ಗೆ ಮಾಹಿತಿ ಪಡೆದ ಅಬಕಾರಿ ಇಲಾಖೆಯವರು ದಾಳಿ ಮಾಡಿ, ತನಿಖೆ ನಡೆಸಿ, ಬೆಳ್ತಂಗಡಿ ವ್ಯವಹಾರಿಕ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ನ್ಯಾಯಾಲಯವು ವಿಚಾರಣೆ ನಡೆಸಿ ನ್ಯಾಯಾಧೀಶ ರಾದ ಸಂದೇಶ್ ಕೆ. ಇವರು ಅಂಗಡಿ ಮಾಲೀಕ ಡಾ। ಟಿ.ವಿ.ಜೋಸೆಫ್ ಇವರನ್ನು ದೋಷ ಮುಕ್ತಗೊಳಿಸಿ ಆದೇಶ ನೀಡಿದ್ದಾರೆ. ಆರೋಪಿಯ ಪರ ವಕೀಲರಾದ ಗಣೇಶ ಗೌಡ ಇವರು ವಾದಿಸಿದ್ದರು.

Leave a Comment

error: Content is protected !!