25.1 C
ಪುತ್ತೂರು, ಬೆಳ್ತಂಗಡಿ
June 15, 2025
ನಿಧನ

ಸಾಲಬಾಧೆ – ಕೃಷಿಯಲ್ಲಿ ನಷ್ಟ: ಮಲವಂತಿಗೆ ಬಾಡಿಗೆ ಮನೆಯಲ್ಲಿರಾಧೀಶ್ ಆತ್ಮಹತ್ಯೆ

ಬೆಳ್ತಂಗಡಿ: ಸಾಲಬಾಧೆ ಹಾಗೂ ಕೃಷಿ ನಷ್ಟದಿಂದ ನೊಂದ ಕಲ್ಮಂಜ ಗ್ರಾಮದ ನಿಡಿಗಲ್ಲು ಆದರ್ಶ ನಗರ
ಮನೆ, ನಿವಾಸಿ ರಾಧೀಶ್ (36) ರವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ರಾಧೀಶ್‌ ಪ್ರಸ್ತುತ ಮಲವಂತಿಗೆ ಗ್ರಾಮದ ಅಂತರ ಸೂರ್ಯಗುತ್ತು ರವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. 3-4 ವರ್ಷಗಳ ಹಿಂದೆ ಕಲ್ಮಂಜ ಗ್ರಾಮದ ನಿಡಿಗಲ್ಲು ಎಂಬಲ್ಲಿ ಹೊಸ ಮನೆಯನ್ನು ನಿರ್ಮಿಸಿ ಮನೆ ಕಟ್ಟುವ ಸಮಯ ಬ್ಯಾಂಕಿನಿಂದ ಸಾಲವನ್ನು ಮಾಡಕೊಂಡಿದ್ದರು. ಅಲ್ಲದೇ ಲೀಸ್ ಗೆ ಮಾಡಿಕೊಂಡಿದ್ದ ಕೃಷಿ ತೋಟದಲ್ಲಿಯೂ ನಷ್ಟ ಉಂಟಾಗಿದ್ದು ಈ ಎಲ್ಲಾ ಸಮಸ್ಯೆಗಳಿಂದ ಮದ್ಯ ಸೇವಿಸಲು ಪ್ರಾರಂಭಿಸಿದ್ದರು. ಕಳೆದ ಜೂ.7 ರಂದು ಬಾಡಿಗೆ ಮನೆಯಲ್ಲಿ ರಾತ್ರಿ ಸಮಯ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಳ್ಳಲು ಪ್ರಯತ್ನಸಿದ ಸಮಯ ಬಿದ್ದು ಹಣೆಯ ಭಾಗಕ್ಕೆ ತಾಗಿ ಈ ಬಗ್ಗೆ ತಲೆಯಲ್ಲಿ ನರದ ತೊಂದರೆ ಕಾಣಿಸಿಕೊಂಡು 1 ನ್ಯಾರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು ವಿಶ್ರಾಂತಿಯಲ್ಲಿ ಇದ್ದವರು ಡಿ.4 ರಂದು ರಾತ್ರಿ ಸುಮಾರು 9 ಗಂಟೆಯಿಂದ 9.45 ಗಂಟೆಯ ಮಧ್ಯೆದ ಅವಧಿಯಲ್ಲಿ ಅಂತರ ಬಾಡಿಗೆ ಮನೆಯ ಎದುರಿನ ಶೀಟಿನ ರಾಡಿಗೆ ಕುತ್ತಿಗೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಪತ್ನಿ ರಂಜಿನಿ ಅವರು ನೀಡಿದ ದೂರಿನಂತೆ ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆ ಯುಡಿ ಆರ್ ಸಂಖ್ಯೆ: 57/2023 ಕಲಂ 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ನಿಡ್ಲೆ ಗ್ರಾ.ಪಂ. ಮಾಜಿ ಸದಸ್ಯ ಚಂದ್ರಶೇಖರ್ ನಿಧನ

Suddi Udaya

ಬೆಳ್ತಂಗಡಿಯ ಸಂಜಯನಗರ ನಿವಾಸಿ ಹಿದಾಯತ್ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ನಿಧನ

Suddi Udaya

ಮಾಜಿ ಶಾಸಕ ವಸಂತ ಬಂಗೇರ ನಿಧನಕ್ಕೆ ಸೋಮನಾಥ ನಾಯಕ್ ಸಂತಾಪ

Suddi Udaya

ಮಗನ ಮದುವೆ ಸಂಭ್ರಮದಲ್ಲಿ ಇದ್ದ ತಂದೆ ಹೃದಯಾಘಾತದಿಂದ ಸಾವು

Suddi Udaya

ಮಾಲಾಡಿ: ಮಾಜಿ ಭೂನ್ಯಾಯ ಮಂಡಳಿ ಸದಸ್ಯ ಬಿ.ರಾಮಣ್ಣ ಶೆಟ್ಟಿ ನಿಧನ

Suddi Udaya

ಸೆ.7-8: ನಾಲ್ಕೂರುನಲ್ಲಿ ಪ್ರಥಮ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ: ಮುಂಬಯಿ ಕಲಾವಿದರಿಂದ ಯಕ್ಷಗಾನ ಕಥಾ ಪ್ರಸಂಗ, ಶನೀಶ್ವರ ಪೂಜೆ

Suddi Udaya
error: Content is protected !!