September 6, 2026
ನಿಧನ

ಸಾಲಬಾಧೆ – ಕೃಷಿಯಲ್ಲಿ ನಷ್ಟ: ಮಲವಂತಿಗೆ ಬಾಡಿಗೆ ಮನೆಯಲ್ಲಿರಾಧೀಶ್ ಆತ್ಮಹತ್ಯೆ

ಬೆಳ್ತಂಗಡಿ: ಸಾಲಬಾಧೆ ಹಾಗೂ ಕೃಷಿ ನಷ್ಟದಿಂದ ನೊಂದ ಕಲ್ಮಂಜ ಗ್ರಾಮದ ನಿಡಿಗಲ್ಲು ಆದರ್ಶ ನಗರ
ಮನೆ, ನಿವಾಸಿ ರಾಧೀಶ್ (36) ರವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ರಾಧೀಶ್‌ ಪ್ರಸ್ತುತ ಮಲವಂತಿಗೆ ಗ್ರಾಮದ ಅಂತರ ಸೂರ್ಯಗುತ್ತು ರವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. 3-4 ವರ್ಷಗಳ ಹಿಂದೆ ಕಲ್ಮಂಜ ಗ್ರಾಮದ ನಿಡಿಗಲ್ಲು ಎಂಬಲ್ಲಿ ಹೊಸ ಮನೆಯನ್ನು ನಿರ್ಮಿಸಿ ಮನೆ ಕಟ್ಟುವ ಸಮಯ ಬ್ಯಾಂಕಿನಿಂದ ಸಾಲವನ್ನು ಮಾಡಕೊಂಡಿದ್ದರು. ಅಲ್ಲದೇ ಲೀಸ್ ಗೆ ಮಾಡಿಕೊಂಡಿದ್ದ ಕೃಷಿ ತೋಟದಲ್ಲಿಯೂ ನಷ್ಟ ಉಂಟಾಗಿದ್ದು ಈ ಎಲ್ಲಾ ಸಮಸ್ಯೆಗಳಿಂದ ಮದ್ಯ ಸೇವಿಸಲು ಪ್ರಾರಂಭಿಸಿದ್ದರು. ಕಳೆದ ಜೂ.7 ರಂದು ಬಾಡಿಗೆ ಮನೆಯಲ್ಲಿ ರಾತ್ರಿ ಸಮಯ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಳ್ಳಲು ಪ್ರಯತ್ನಸಿದ ಸಮಯ ಬಿದ್ದು ಹಣೆಯ ಭಾಗಕ್ಕೆ ತಾಗಿ ಈ ಬಗ್ಗೆ ತಲೆಯಲ್ಲಿ ನರದ ತೊಂದರೆ ಕಾಣಿಸಿಕೊಂಡು 1 ನ್ಯಾರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು ವಿಶ್ರಾಂತಿಯಲ್ಲಿ ಇದ್ದವರು ಡಿ.4 ರಂದು ರಾತ್ರಿ ಸುಮಾರು 9 ಗಂಟೆಯಿಂದ 9.45 ಗಂಟೆಯ ಮಧ್ಯೆದ ಅವಧಿಯಲ್ಲಿ ಅಂತರ ಬಾಡಿಗೆ ಮನೆಯ ಎದುರಿನ ಶೀಟಿನ ರಾಡಿಗೆ ಕುತ್ತಿಗೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಪತ್ನಿ ರಂಜಿನಿ ಅವರು ನೀಡಿದ ದೂರಿನಂತೆ ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆ ಯುಡಿ ಆರ್ ಸಂಖ್ಯೆ: 57/2023 ಕಲಂ 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ಬಜಿರೆ: ಶ್ಯಾಮ ಹೆಗ್ಡೆ ಪೊಂಗರ್ತ್ಯಾರ್ ನಿಧನ

Suddi Udaya

ನಡ: ಮಜಿಲ್ದಡ್ಡ ನಿವಾಸಿ ಸಂತೋಷ್ ಗೌಡ ನಿಧನ

Suddi Udaya

ನಾರಾಯಣ ಅಭ್ಯಂಕರ್ ನಿಧನ

Suddi Udaya

ಅಪರೂಪದ ರಾಜಕಾರಣಿ ಮಾಜಿ ಶಾಸಕ ಕೆ. ವಸಂತ ಬಂಗೇರರ ನಿಧನಕ್ಕೆ ಸಂತಾಪ ಸೂಚಿಸಿದ ವಿಪಕ್ಷ ನಾಯಕ, ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ

Suddi Udaya

ಬೆಳ್ತಂಗಡಿ ಸಮತಾ ಹೋಟೆಲ್ ಮಾಲಕರಾಗಿದ್ದ ವಿಠಲ ಭಟ್ ನಿಧನ

Suddi Udaya

ಶತಾಯುಷಿ ಚೆಲುವಮ್ಮ ಇರ್ತಿಲಾಲ್ ನಿಧನ

Suddi Udaya
error: Content is protected !!