ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ವೇಣೂರು ಪ್ರಖಂಡ, ಹಿಂದೂ ಹೃದಯ ಸಂಗಮ ಸಮಿತಿ ಆಶ್ರಯದಲ್ಲಿ ಅಳದಂಗಡಿಯಲ್ಲಿ ಬೃಹತ್ ಹಿಂದೂ ಹೃದಯ ಸಂಗಮ ಕಾರ್ಯಕ್ರಮ, ವೈಭವದ ಶೋಭಾಯಾತ್ರೆ, ಕುಣಿತಾ ಭಜನೆ

ಬೆಳ್ತಂಗಡಿ: ನಾಡಿನ ಸಮಸ್ತ ಹಿಂದೂ ಬಾಂಧವರ ಒಗ್ಗೂಡುವಿಕೆಯಿಂದ ವಿಶ್ವ ಹಿಂದೂ ಪತಿಷತ್ ಮತ್ತು ಬಜತಂಗದಳ ಹಿಂದೂ ಹೃದಯ ಸಂಗಮ ಸಮಿತಿ ವೇಣೂರು ಪ್ರಖಂಡ ವತಿಯಿಂದ ಬೃಹತ್ ಹಿಂದೂ ಹೃದಯ ಸಂಗಮ ಕಾರ್ಯಕ್ರಮವು ಅಳದಂಗಡಿಯಲ್ಲಿ ಡಿ.10 ರಂದು ನಡೆಯಿತು.

ವೇಣೂರು ಪ್ರಖಂಡದ 31 ಗ್ರಾಮಗಳ ಹಿಂದೂ ಭಾಂದವರು ಭಾಗಿಯಾಗಿದ್ದರು.ನಾಡಿನ ಹಲವಾರು ಭಜನಾ ತಂಡಗಳಿಂದ ಕುಣಿತಾ ಭಜನೆ ನಡೆಯಿತು. ಅಳದಂಗಡಿಯಿಂದ ಸೋಮನಾಥೇಶ್ವರಿ ಕ್ಷೇತ್ರದ ಮೈದಾನದವರೆಗೆ ವಿವಿಧ ವೇಷಭೂಷಣಗಳಿಂದ ಬೃಹತ್ ಶೋಭಾಯಾತ್ರೆ ನಡೆಯಿತು.ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಏಕ ಜಾತಿಧರ್ಮ ದ್ವಾರಕ ಮಾಯಿ ಮಠದ ಶ್ರೀ ಸಾಯಿ ಈಶ್ವರ ಗುರೂಜಿ ಆಶೀರ್ವಚನ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ವಹಿಸಿದ್ದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರ್ನಾಟಕ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮುಖ್ಯ ಭಾಷಣ ಮಾಡಿದರು.ಮಂಗಳೂರಿನ ವೆನ್ಕಾಕ್ ಆಸ್ಪತ್ರೆಯ ಖ್ಯಾತ ಮೂತ್ರರೋಗ ತಜ್ಞ ಡಾ.ಸದಾನಂದ ಪೂಜಾರಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ,ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ವಿಶ್ವಹಿಂದೂ ಪರಿಷತ್ ವೇಣೂರು ಪ್ರಖಂಡದ ಅಧ್ಯಕ್ಷ ಎಸ್.ಆರ್ ಭಾಸ್ಕರ ಸಾಲಿಯಾನ್,ಹಿಂದೂ ಹೃದಯ ಸಂಗಮ ಸಮಿತಿ ಅಧ್ಯಕ್ಷ ಜಯ ಸಾಲಿಯಾನ್,ಪ್ರಧಾನ ಕಾರ್ಯದರ್ಶಿ ಎಂ.ಪಿ ಶೇಖರ್,ಸಲಹೆಗಾರ ಮೋಹನ್ ಅಂಡಿಂಜೆ,ಪ್ರಮುಖರಾದ ಗಣೇಶ್ ಹೆಗ್ಡೆ,ರಾಜು ಪೂಜಾರಿ,ರಘು,ಹೆಚ್.ಎಲ್ ರಾವ್,ಭಾಸ್ಕರ ಧರ್ಮಸ್ಥಳ,ಸುಂದರ ವೇಣೂರು, ಶಶಿಧರ ಡೋಂಗ್ರೇ,ವಿಶ್ವನಾಥ ಹೊಳ್ಳ,ಸದಾನಂದ ಪೂಜಾರಿ ಉಂಗೀಲಬೈಲು, ರತ್ನಾಕರ ಬುಣ್ಣನ್, ಸೋಮನಾಥ ಬಂಗೇರ ವರ್ಪಾಳೆ, ಸುಧೀರ್ ಆರ್ ಸುವರ್ಣ, ಪ್ರಕಾಶ್ ಪುರೋಹಿತ್,ಆನಂದ ಒಡಿಮಾರ್, ಉದಯ ಹೆಗ್ಡೆ ನಾರಾವಿ,ಮಾಧವ ಶಿರ್ಲಾಲು,ಯಶೋಧರ ಮರೋಡಿ,ಪ್ರಭಾಕರ ಆರಂಭೋಡಿ, ಪ್ರಶಾಂತ್ ಎಂ ಪಾರೆಂಕಿ,ಕರುಣಾಕರ ಹೊಸಂಗಡಿ, ತಾರನಾಥ ಗೌಡ ಶಿರ್ಲಾಲು,ವಿಜಯ ಗೌಡ ವೇಣೂರು,ಅರುವ ಕೊರಗಪ್ಪ ಶೆಟ್ಟಿ, ವಸಂತ ಭಟ್ ನಾರಾವಿ,ಶಿವಭಟ್ ಕಟ್ಟೂರು, ಸಂತೋಷ್ ಕುಮಾರ್ ಕಾಪಿನಡ್ಕ,ನಿತ್ಯಾನಂದ ಶೆಟ್ಟಿ ನೊಚ್ಚ, ಉಪಸ್ಥಿತರಿದ್ದರು.ಹಿಂದೂ ಹೃದಯ ಸಂಗಮ ಸಮಿತಿಯ ಕಾರ್ಯಕರ್ತರು ಸಹಕರಿಸಿದರು.

Related posts

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಜು. 24 ರಿಂದ ಮುಳಿಯ ಮಾನ್ಸೂನ್ ಧಮಾಕ: ಮುಂಗಾರಿನ ಸಂಭ್ರಮವನ್ನು ಇಮ್ಮಡಿಗೊಳಿಸಲು ಗ್ರಾಹಕರಿಗೆ ಆಕರ್ಷಕ ರಿಯಾಯಿತಿ: ಆ. 5 ಮುಳಿಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ,ಗ್ರಾಹಕರ ಸಮಾಗಮ,

Suddi Udaya

ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಸ್ವಾಮೀಜಿಗಳ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ

Suddi Udaya

ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ದೌರ್ಜನ್ಯ ಮಾಡುತ್ತಿರುವ ಚಿಕ್ಕಮಗಳೂರು ಜಿಲ್ಲೆಯ ಮೀನಾ ನಾಗರಾಜ್ ಮತ್ತು ಅಪರ ಜಿಲ್ಲಾಧಿಕಾರಿ ಕನಕರೆಡ್ಡಿ ಇವರನ್ನು ಕೂಡಲೇ ವರ್ಗಾವಣೆ ಮಾಡಿ ನ್ಯಾಯ ಒದಗಿಸಿಕೊಡುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ರವರಿಗೆ ಬೆಳ್ತಂಗಡಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿ ಸಂಘದಿಂದ ಮನವಿ

Suddi Udaya

ವೇಣೂರು ಪ್ರೌಢಶಾಲಾ ವಿದ್ಯಾರ್ಥಿಯ ಚಿಕಿತ್ಸೆಗೆ ರೂ 40 ಸಾವಿರ ಆರ್ಥಿಕ ನೆರವು ಹಸ್ತಾಂತರ

Suddi Udaya

ಫೆ.8: ಅಗ್ರಿಲೀಫ್ 2.0 – ‘ರೈತರ ಜೊತೆ ವಿಶ್ವದ ಕಡೆ’ ವಿಸ್ತೃತ ಘಟಕದ ಉದ್ಘಾಟನೆ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ರಾಜ್ಯ ಪ್ರಶಸ್ತಿ

Suddi Udaya
error: Content is protected !!