ಬೆಳಾಲು ಶ್ರೀ ಧ.ಮಂ.ಪ್ರೌ. ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಲಗೋರಿ ಪಂದ್ಯಾಟ

Suddi Udaya

ಬೆಳಾಲು: ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಹಳೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಲಗೋರಿ ಪಂದ್ಯಾಟ ಜರಗಿತು.

ಪಂದ್ಯಾಟಕ್ಕೆ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ರವರು ಚಾಲನೆ ನೀಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶೇಖರ ಗೌಡ ಕೊಲ್ಲಿಮಾರು, ಉಪಾಧ್ಯಕ್ಷರಾದ ಶ್ರೀಮತಿ ವಸಂತಿ ಮಂಡಾಲು ರವರು ಉಪಸ್ಥಿತರಿದ್ದರು.

ಜಾನಪದ ಕ್ರೀಡೆಯಾಗಿರುವ ಲಗೋರಿಯನ್ನು ಪಂದ್ಯಾಟವಾಗಿ ಅಳವಡಿಸಿಕೊಂಡಿರುವ ಹಳೆ ವಿದ್ಯಾರ್ಥಿ ಸಂಘದ ಬಗ್ಗೆ ಬಹುವಾಗಿ ಮೆಚ್ಚುಗೆ ವ್ಯಕ್ತವಾಯಿತು.

ಪಂದ್ಯಾಟದಲ್ಲಿ ಅಂತಿಮವಾಗಿ ಸಂತೋಷ್ ಕನಿಕ್ಕಿಲ ತಂಡದವರು ಪ್ರಥಮ, ಶೇಖರ್ ಗೌಡ ಕೊಲ್ಲಿಮಾರು ತಂಡ ದ್ವಿತೀಯ ಹಾಗೂ ಸುರೇಶ್ ತಂಡದವರು ತೃತೀಯ ಸ್ಥಾನವನ್ನು ಪಡೆದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ್ ಕನಿಕ್ಕಿಲ, ಕಾರ್ಯದರ್ಶಿಗಳಾದ ಮಹಮ್ಮದ್ ಶರೀಫ್ ಬೆಳಾಲು ರವರು ಕೂಟವನ್ನು ಸಂಯೋಜಿಸಿದರು. ಉಜಿರೆ ಶ್ರೀ ಧ ಮಂ ಕ್ರೀಡಾ ಸಂಘದವರು ಸ್ಪರ್ಧೆಯನ್ನು ನಿರ್ವಹಿಸಿದರು.

Leave a Comment

error: Content is protected !!