ಹೊಸಂಗಡಿ ಗ್ರಾ.ಪಂ ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

Updated on:

ಹೊಸಂಗಡಿ: ಕೇಂದ್ರ ಸರಕಾರದ ಮಹತ್ವಕಾಂಕ್ಷೆ ಜನಪ್ರಿಯ ಯೋಜನೆಗಳು ಕಟ್ಟಕಡೆಯ ಫಲಾನುಭವಿಗಳಿಗೂ ದೊರಕುವಂತಾಗಲಿ ಎನ್ನುವ ನಿಟ್ಟಿನಲ್ಲಿ ಮತ್ತು ಇದರ ಮಾಹಿತಿ ಎಲ್ಲರಿಗೂ ತಿಳಿದು ಪ್ರಯೋಜನ ಪಡೆಯುವಂತಾಗಲಿ ಎಂಬ ದ್ಯೇಯ ಉದ್ದೇಶದಿಂದ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಡಿ. 11 ರಂದು ಹೊಸಂಗಡಿ ಗ್ರಾಮ ಪಂಚಾಯತ್ ಗೆ ಆಗಮಿಸಿದ್ದು ಸಂಭ್ರಮದಿಂದ ಬರಮಾಡಿಕೊಂಡರು.

ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷ ಜಗದೀಶ್ ಹೆಗ್ಡೆ ಉದ್ಘಾಟಿಸಿದರು.

ವೇದಿಕೆಯಲ್ಲಿ ಕೆನರಾ ಬ್ಯಾಂಕಿನ ವೇಣೂರು ಬ್ರಾಂಚ್ ಮೆನೆಜರ್ ಅಲೋಕ್, ನಿಕಟಪೂರ್ವ ಅಧ್ಯಕ್ಷ ಕರುಣಾಕರ ಬಡಕೋಡಿ, ಕೇಂದ್ರ ಸರಕಾರದ ಯೋಜನೆಗಳ ಮಾಹಿತಿ ನೀಡುವ ಉಷಾ ನಾಯಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ, ಪಂಚಾಯತ್ ಪ್ರಬಾರಿ ದಿನಕರ ಕುಲಾಲ್ ಉಪಸ್ಥಿತರಿದ್ದರು .

ಕಾರ್ಯಕ್ರಮದಲ್ಲಿ ಸಾವಯವ ಕೃಷಿಕ ಗೋಪಾಲಕೃಷ್ಣ ಭಟ್, ಸಂಜೀವಿನಿ ಸಂಘದ ಸದಸ್ಯೆ ಎಲ್ಲಾ ಬಗೆಯ ಕೃಷಿ ಹೈನುಗಾರಿಕೆ ತೊಡಗಿಸಿಕೊಂಡ ಸುಧಾ ಗಂಗಾಧರ್, ಜೇನು ಕೃಷಿ ಮಾಡುತ್ತಿರುವ ಶ್ರೀಧರ ಮಲೆಕುಡಿಯ, ಪೋಷಣ್ ಯೋಜನೆ ಅಡಿಯಲ್ಲಿ ಕು.ಲಿಪಿ, ಕು.ಪೂಜಿತಾ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Comment

error: Content is protected !!