ಮಡಂತ್ಯಾರುವಿನಲ್ಲಿ “ಲಸ್ಸಿ ಟೇಲ್ಸ್ ಕೆಫೆ” ಶುಭಾರಂಭ

Suddi Udaya

ಬೆಳ್ತಂಗಡಿ : ಮಡಂತ್ಯಾರುನಲ್ಲಿ “ಲಸ್ಸಿ ಟೇಲ್ಸ್ ಕೆಫೆ” ಸಂಸ್ಥೆಯ ಉದ್ಘಾಟನೆಯು ಇತ್ತೀಚೆಗೆ ನಡೆಯಿತು.

ಬೆಳ್ತಂಗಡಿ ರಾಮಕ್ಷತ್ರೀಯ ಸಂಘದ ಪೂರ್ವಾಧ್ಯಕ್ಷ ವಿಜಯ್ ಕುಮಾರ್ ರವರ ಪುತ್ರ ರಾಮಕ್ಷತ್ರೀಯ ಯುವ ವೇದಿಕೆ ಕಾರ್ಯದರ್ಶಿ ಸ್ವಸ್ತಿಕ್, ಮಡಂತ್ಯಾರಿನಲ್ಲಿ ಲಸ್ಸಿ ಟೇಲ್ಸ್ ಕೆಫೆ ಎಂಬ ಮಳಿಗೆಯನ್ನು ಪ್ರಾರಂಭಿಸಿದ್ದು ಮಡಂತ್ಯಾರ್‌ನ ಸೇಕ್ರೆಡ್ ಹಾರ್ಟ್ ಚರ್ಚ್‌ನ ವಂ. ಫಾ. ಸ್ಟೇನ್ಸಿ ಗೋವಿಯಸ್ ಸಂಸ್ಥೆಯನ್ನು ಉದ್ಘಾಟಿಸಿ ಶುಭಕೋರಿದರು.

ನೂತನ ಸಂಸ್ಥೆಗೆ ಪಂಚಾಯತ್ ಉಪಾಧ್ಯಕ್ಷ ಗೋಪಾಲಕೃಷ್ಣ ಹಾಗೂ ಕಟ್ಟಡದ ಮಾಲಕ ಜೋನ್ ಕ್ರಾಸ್ತ, ರಾಮಕ್ಷತ್ರೀಯ ಬಂಧುಗಳು ಆಗಮಿಸಿ ಶುಭಕೋರಿದರು.

ಆಗಮಿಸಿದ ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲಕ ಸ್ವಸ್ತಿಕ್ ಸ್ವಾಗತಿಸಿ ಸತ್ಕರಿಸಿದರು. ವಾಣಿ ವಿಜಯ ಕುಮಾರ್, ಸ್ವಾತಿ ಹಾಗೂ ಇತರರು ಸಹಕರಿಸಿದರು. ‌

Leave a Comment

error: Content is protected !!