September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ನಾಲ್ಕೂರು: ಕೆಲ ಸಮಯದಿಂದ ಪುಣ್ಕೆದೊಟ್ಟು ಪರಿಸರದಲ್ಲಿ ಚಿರತೆ ಕಾಟ ಮನೆಯ ಸಾಕು ಪ್ರಾಣಿಗಳ ಮೇಲೆ ದಾಳಿ, ಭಯಬೀತರಾದ ಗ್ರಾಮಸ್ಥರು, ಅರಣ್ಯ ಇಲಾಖೆಗೆ ಮಾಹಿತಿ, ಸ್ಪಂದನೆ

ಬಳಂಜ: ನಾಲ್ಕೂರು ಗ್ರಾಮದ ಪುಣ್ಕೆದೊಟ್ಟು ಪರಿಸರದಲ್ಲಿ ದಿನದಿಂದ ದಿನಕ್ಕೆ ಚಿರತೆ ಕಾಟ ಜಾಸ್ತಿಯಾಗಿದ್ದು ಗ್ರಾಮಸ್ಥರು ಭಯಬೀತರಾಗಿದ್ದಾರೆ.ಕಳೆದ ಕೆಲವು ಸಮಯದ ಹಿಂದೆ ಬಳಂಜ, ನಿಟ್ಟಡ್ಕ, ಪುಣ್ಕೆದೊಟ್ಟು ಪರಿಸರದಲ್ಲಿ ಸಾಕು ಪ್ರಾಣಿಗಳಾದ ಗೋವು, ನಾಯಿ,ಬೆಕ್ಕು, ಕೋಳಿಗಳ ಮೇಲೆ ದಾಳಿಗಳಾಗಿದ್ದು‌ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಕೂಡಲೇ ಉಪವಲಯರಣ್ಯಾಧಿಕಾರಿ‌ ತಕ್ಷಣ ಸ್ಪಂದಿಸಿ ಚಿರತೆ ಪತ್ತೆಗಾಗಿ ಪುಣ್ಕೆದೊಟ್ಟು ಪರಿಸರದಲ್ಲಿ ಬೋನ್ ಅಳವಡಿಸಿದ್ದರು.ಆದರೆ ಇತ್ತೀಚಿನ ದಿನಗಳಲ್ಲಿ ಈ ಪರಿಸರದಲ್ಲಿ ಪುನಃ ಚಿರತೆ ದಾಳಿ ಮಾಡುತ್ತಿದೆ. ಕಳೆದ ರಾತ್ರಿ ಪುಣ್ಕೆದೊಟ್ಟು ಮನೆ ಕೋಳಿ ಗೂಡುವಿಕೆ ದಾಳಿ ಮಾಡಿದೆ, ನಾಯಿ,ಬೆಕ್ಕು ಕಣ್ಮರೆಯಾಗಿದ್ದು ಇದರಿಂದ ಊರಲ್ಲಿ ಚಿರತೆಯ ಚಿಂತೆ ಹೆಚ್ಚಾಗಿ ಜನರು ರಾತ್ರಿ ಓಡಾಡಲು ಭಯಪಡುವ ಸಮಸ್ಯೆ ಸಂಭವಿಸಿದೆ.

Related posts

ಕಾಶಿಪಟ್ಣ ಗ್ರಾಮ ಪಂಚಾಯತ್ ಪ್ರಥಮ ಹಂತದ ಗ್ರಾಮಸಭೆ, ವಿವಿಧ ಇಲಾಖಾಧಿಕಾರಿಗಳಿಂದ ಇಲಾಖಾ ಮಾಹಿತಿ

Suddi Udaya

ಮುಂಡಾಜೆ ಪ. ಪೂ. ಕಾಲೇಜಿನಲ್ಲಿ ಪೋಷಕರ ಸಭೆ

Suddi Udaya

ಮೂಡುಕೋಡಿ ಶೀನ ಪೂಜಾರಿ ಹೃದಯಾಘಾತದಿಂದ ನಿಧನ

Suddi Udaya

ಶಿಶಿಲ ಶ್ರೀ ಕ್ಷೇತ್ರ ಚಂದ್ರಪುರ ಜಿನ ಮಂದಿರಕ್ಕೆ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರ ಭೇಟಿ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಸಭೆ

Suddi Udaya

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆವರಣ ಗೋಡೆ ಕುಸಿತ: ನೀರಿನ ಪಂಪ್ ಶೆಡ್ ಹಾಗೂ ವಿದ್ಯುತ್ ಕಂಬಕ್ಕೆ ಹಾನಿ

Suddi Udaya
error: Content is protected !!