ಬಚ್ಚಿರೆ ಬಜ್ಜೈ ವಾಟ್ಸಾಪ್ ಗ್ರೂಪ್ ಸ್ನೇಹ ಸಮ್ಮಿಲನ

Suddi Udaya

ಬರೆಕರೆ ಕೇಶವ ಪ್ರಶಾಂತ್, ಕೊಂಕಣಾಜೆ ಚಂದ್ರಶೇಖರ ಭಟ್ ಮತ್ತು ರವಿಶಂಕರ ಭಟ್ ರಾಯಿ ಮೂವರು ಮಿತ್ರರು ಸೇರಿ ರಚಿಸಿದ ಸಮಾನ ಸ್ನೇಹಿ ಮಿತ್ರರ ವಾಟ್ಸಾಪ್ ಗ್ರೂಪ್ ನ ಸದಸ್ಯರ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಾಳೆ ರಾಯಿಯ ಶ್ರೀಕಲಾ ನಿಲಯದಲ್ಲಿ ನಡೆಯಲಿದ್ದು ಕಾರ್ಯಕ್ರಮದಲ್ಲಿ  ವಿಶ್ವವಿನೋದ ಬನಾರಿಯವರು ರಚಿಸಿದ ಹವ್ಯಕ ಭಾಷೆಯ ಯಕ್ಷಗಾನ ಪ್ರಸಂಗ “ದಕ್ಷಾಧ್ವರ” ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ತಾಳಮದ್ದಳೆ ನಡೆಯಲಿದೆ.

ಹಿರಿಯ ಕಲಾವಿದರಾದ ಬೆಳ್ಳಾರೆ ಮಂಜುನಾಥ ಭಟ್ಟರಿಗೆ ಸನ್ಮಾನ ಹಾಗೂ ವಾಟೆಪಡ್ಪು ವಿಷ್ಣು ಶರ್ಮರವರಿಗೆ ಗೌರವ ಸಹಾಯ ನಿಧಿ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ.

Leave a Comment

error: Content is protected !!