
ಸುರ್ಯ: ಮಣ್ಣಿನ ಹರಕೆಯ ಪ್ರಖ್ಯಾತ ಕ್ಷೇತ್ರ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದಲ್ಲಿ ಮಾ. 30 ರಿಂದ ಎ. 4 ರ ವರೆಗೆ ನಡೆದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ವರ್ಷಾವಧಿ ಜಾತ್ರೆಯ ಸಂದರ್ಭದಲ್ಲಿ ಖ್ಯಾತ ಕಲಾವಿದ, ನಟ, ನಿರ್ದೇಶಕ ಡಾ| ದೇವದಾಸ್ ಕಾಪಿಕಾಡ್ ಹಾಗೂ ಕೇರಳ ಸರಕಾರದ ಪ್ರಶಸ್ತಿ ಪುರಸ್ಕೃತ ನೃತ್ಯಬಲಿ ಪರಿಣತರಾದ ಶ್ರೀನಿವಾಸ ಹೆಬ್ಬಾರ್ ಇವರನ್ನು ದೇವಸ್ಥಾನದ ವತಿಯಿಂದ ಅನುವಂಶಿಕ ಆಡಳಿತ ಮುಕ್ತೇಸರ ಸುಭಾಶ್ಚoದ್ರ ಸುರ್ಯಗುತ್ತು ಮತ್ತು ಡಾ| ಸತೀಶ್ಚಂದ್ರ ಸುರ್ಯಗುತ್ತು ಇವರು ಸನ್ಮಾನಿಸಿದರು.









