25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಹಾಡುಹಗಲೇ ಚರ್ಚ್ ರೋಡ್ ಬಳಿ ನಿಲ್ಲಿಸಿದ್ದ ಬೈಕ್ ನಾಪತ್ತೆ

ಬೆಳ್ತಂಗಡಿ : ರಿಪೇರಿಗಾಗಿ ತಂದು ನಿಲ್ಲಿಸಿ ಬೈಕ್ ನಾಪತ್ತೆಯಾಗಿರುವ ಘಟನೆ ಬೆಳ್ತಂಗಡಿಯ ಚರ್ಚ್ ರೋಡ್ ನಲ್ಲಿ ಇಂದು ಸಂಜೆ ನಡೆದಿದೆ‌.

ಮುಂಡೂರು ಗ್ರಾಮದ ಪರಂಬುಡೆ ನಿವಾಸಿ ಕೆ.ಜಗನ್ನಾಥ್ ಅಚಾರ್ಯ ಎಂಬವರಿಗೆ ಸೇರಿದ KA-21-E-7225 ನಂಬರಿನ ಸ್ಲೇಂಡರ್ ಬೈಕ್ ಹಲವು ಸಮಯಗಳಿಂದ ಉಪಯೋಗಿಸದೆ ಮನೆಯಲ್ಲಿ ನಿಲ್ಲಿಸಿದ್ದಲ್ಲಿಯೇ ಇತ್ತು. ಬೈಕ್ ಉಪಯೋಗಿಸದೆ ಇತ್ತಿಚೆಗೆ ಸರಿಯಾಗಿ ಚಲಾಯಿಸಲು ಅಗುತ್ತಿರಲ್ಲಿಲ್ಲ‌. ಬೈಕ್ ಸಂಪೂರ್ಣ ರಿಪೇರಿ ಮಾಡಲು ತಮ್ಮ ರಮೇಶ್ ಅಚಾರ್ಯನಿಗೆ ತಿಳಿಸಿದಂತೆ ಡಿ.26 ರಂದು ಬೆಳಗ್ಗೆ ಮನೆಯಿಂದ ತಂದು ಚರ್ಚ್ ರೋಡ್ ಬಳಿ ಪಾರ್ಕ್ ಮಾಡಿ ರಮೇಶ್ ಅಚಾರ್ಯ ಚಿನ್ನದ ಕೆಲಸಕ್ಕಾಗಿ ಪುತ್ತೂರಿಗೆ ಹೋಗಿ ಸಂಜೆ ಬಂದು ನಿಲ್ಲಿಸಿದ ಸ್ಥಳದಲ್ಲಿ ನೋಡಿದಾಗ ಬೈಕ್ ನಾಪತ್ತೆಯಾಗಿತ್ತು.

ಈ ಬಗ್ಗೆ ರಮೇಶ್ ಅಚಾರ್ಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬೈಕ್ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.

Related posts

ಸುಲ್ಕೇರಿಮೊಗ್ರು ಪುರುಷರ ಬಳಗ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಸಂದೀಪ್ ಪಟ್ಲ, ಕಾರ್ಯದರ್ಶಿಯಾಗಿ ಅಶೋಕ್ ಕಾಡಂಗೆ

Suddi Udaya

ಬಿಜೆಪಿ ನಿಟ್ಟಡೆ ಶಕ್ತಿಕೇಂದ್ರದ ಬೂತ್ ಸಮಿತಿಗಳ ರಚನೆ

Suddi Udaya

ಕರಾಟೆ ಪಂದ್ಯಾಟ: ಉಜಿರೆಯ ಮೋಹನ್ ರಿಗೆ ಕುಮಿತೆ ಹಾಗೂ ಕಟಾ ವಿಭಾಗದಲ್ಲಿ ಚಿನ್ನದ ಪದಕ

Suddi Udaya

ಉದ್ಯಮಿ ಶಶಿಧರ ಶೆಟ್ಟಿ ಬರೋಡರಿಂದ ಕಾಶಿ ಶೆಟ್ಟಿಯವರ ಸ್ಮರಣಾರ್ಥ ಬಡ ಬಂಟ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು

Suddi Udaya

ಮಿತ್ತಬಾಗಿಲು ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ ವತಿಯಿಂದ ಆರ್ಥಿಕ ಸಹಾಯ

Suddi Udaya

ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮಹಿಳಾ ಹವಾನಿಯಂತ್ರಿತ ಶಾಖೆಯ ಉದ್ಘಾಟನಾ ಸಮಾರಂಭ

Suddi Udaya
error: Content is protected !!