September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉದ್ಯಮಿ ಶಶಿಧರ ಶೆಟ್ಟಿ ಬರೋಡರಿಂದ ಕಾಶಿ ಶೆಟ್ಟಿಯವರ ಸ್ಮರಣಾರ್ಥ ಬಡ ಬಂಟ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು

ಬೆಳ್ತಂಗಡಿ: ತಾಲೂಕಿನ ಬಂಟರ ಸಂಘವನ್ನು ಸಾಲಮುಕ್ತಗೊಳಿಸುವಲ್ಲಿ ಬಹಳ ದೊಡ್ಡ ಕೊಡುಗೆಯನ್ನು ನೀಡಿರುವ ಬಂಟರ ಯಾನೆ ನಾಡವರ ಸಂಘ(ರಿ)ದ ಗೌರವ ಮಾರ್ಗದರ್ಶಕರಾಗಿರುವ ನವಶಕ್ತಿಯ ಉದ್ಯಮಿ ಶಶಿಧರ ಶೆಟ್ಟಿ ಬರೋಡರು, ತಮ್ಮ ತಾಯಿ ಕಾಶಿ ಶೆಟ್ಟಿಯವರ ಸ್ಮರಣಾರ್ಥ ಬೆಳ್ತಂಗಡಿ ತಾಲೂಕಿನ ಬಡ ಬಂಟ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುವ ಯೋಜನೆಯನ್ನು ಘೋಷಿಸಿದ್ಧಾರೆ.

ಬಂಟರ ಸಂಘದ ಮೂಲಕ ಅನುಷ್ಠಾನಗೊಳ್ಳಲಿರುವ ಈ ಯೋಜನೆಯನ್ವಯ ಪ್ರಥಮ ಹಂತದಲ್ಲಿ ಬೆಳ್ತಂಗಡಿ ತಾಲೂಕಿನ 9 ವಲಯಗಳಿಗೆ ತಲಾ ಒಂದರಂತೆ ಒಟ್ಟು ಒಂಬತ್ತು ಕುಟುಂಬಗಳಿಗೆ ಮನೆ ನಿರ್ಮಾಣಕ್ಕಾಗಿ ತಲಾ ರೂ . 2,00,000/-( ರೂಪಾಯಿ ಎರಡು ಲಕ್ಷ ಮಾತ್ರ) ಧನಸಹಾಯವನ್ನು ನೀಡಲಾಗುತ್ತದೆ. ಬಂಟರ ಸಂಘದ ವಲಯ ಸಮಿತಿಯ ಪದಾಧಿಕಾರಿಗಳು ತಮ್ಮ ವಲಯದಿಂದ ಸಹಾಯ ಯೋಗ್ಯ ಕುಟುಂಬವನ್ನು ಗುರುತಿಸಿ, ತಾಲೂಕು ಸಮಿತಿಗೆ ಶಿಫಾರಸು ಮಾಡಿ, ಸೂಕ್ತ ಪರಿಶೀಲನೆಯ ನಂತರ ಬಂಟರ ಸಂಘದಿಂದ ಅನುಮೋದನೆಗೊಂಡ ಮನೆಯ ನಿರ್ಮಾಣದ ಸಂಪೂರ್ಣ ಉಸ್ತುವಾರಿಯನ್ನು ವಲಯ ಸಮಿತಿಯವರು ವಹಿಸಿಕೊಳ್ಳುತ್ತಾರೆ. ಮನೆ ನಿರ್ಮಾಣಕ್ಕೆ ತಗಲುವ ಹೆಚ್ಚುವರಿ ವೆಚ್ಚವನ್ನು ಶ್ರಮದಾನದ ಮೂಲಕ, ಅಗತ್ಯ ಸಾಮಗ್ರಿಗಳನ್ನು ಒದಗಿಸುವ ಮೂಲಕ ಅಥವಾ ಆರ್ಥಿಕ ನೆರವು ನೀಡುವ ಮೂಲಕ ಸ್ಥಳೀಯವಾಗಿ ಕ್ರೋಢೀಕರಿಸಬೇಕಾಗುತ್ತದೆ. ನಿಗದಿಪಡಿಸಿದ ಅವಧಿಯ ಒಳಗೆ ಕನಿಷ್ಠ ಸೌಲಭ್ಯಗಳನ್ನು ಒಳಗೊಂಡ ಸುಂದರ ಮನೆಯನ್ನು ನಿರ್ಮಿಸಿ ಕೊಡುವ ರೀತಿ ವ್ಯವಸ್ಥೆ ಕಲ್ಪಿಸಿಬೇಕಾಗುತ್ತದೆ. ವಲಯ ಸಮಿತಿಯ ಪದಾಧಿಕಾರಿಗಳು ಈ ವಿಚಾರವನ್ನು ಆದ್ಯತೆಯಲ್ಲಿ ಪರಿಗಣಿಸಿ ತಮ್ಮ ವಲಯದಿಂದ ಸಹಾಯ ಯೋಗ್ಯ ಕುಟುಂಬವನ್ನು ಗುರುತಿಸಿ, ಬಂಟರ ಸಂಘಕ್ಕೆ ಶಿಫಾರಸು ಮಾಡಬೇಕು ಹಾಗೂ ಬಡ ಬಂಟ ಕುಟುಂಬಗಳಿಗೆ ನೆರವು ನೀಡಲು ಒದಗಿ ಬಂದ ಈ ಅಪೂರ್ವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಬೆಳ್ತಂಗಡಿ ಬಂಟರ ಸಂಘ ವಿನಂತಿಸಿಕೊಂಡಿದೆ.

Related posts

ತುಳುವರ ಬದುಕು, ಸಂಸ್ಕೃತಿ, ಸಂಘರ್ಷದ ಕಥಾನಕವೇ ಈ “ದಸ್ಕತ್”ಡಿಸೆಂಬರ್ 13 ರಂದು ಬಿಡುಗಡೆ,

Suddi Udaya

ಮುಂಡಾಜೆ: ನದಿಯಲ್ಲಿ ಈಜಲು ಹೋಗಿ ವಿದ್ಯಾರ್ಥಿ ಸಾವು

Suddi Udaya

ಲಯನ್ಸ್ ಕುಟುಂಬ ಮಿಲನ ಸಂಭ್ರಮದ ಹೊನಲು

Suddi Udaya

ಉಜಿರೆ: ಶ್ರೀ ದೇಶಿಕೇಂದ್ರ ಎಜುಕೇಶನ್ ಟ್ರಸ್ಟ್ ಇದರ ನೂತನ ಒಳ ಕ್ರೀಡಾಂಗಣ ಪ್ರಾರಂಭೋತ್ಸವ ಮಕ್ಕಳ ಭವಿಷ್ಯಕ್ಕೆ ಆಧುನಿಕ ಶಿಕ್ಷಣ ಅಗತ್ಯ: ಶರತ್ ಕೃಷ್ಣ ಪಡ್ವೆಟ್ನಾಯ

Suddi Udaya

ಬಿಎಂಎಸ್ ಸಂಘದ ದಕ್ಷಿಣ ಮತ್ತು ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ವಿ. ರಾಧಾಕೃಷ್ಣನ್ ದ.ಕ. ಜಿಲ್ಲೆಗೆ ಆಗಮನ

Suddi Udaya

ಬಳಂಜ: ಅಸೌಖ್ಯದಿಂದ ಮಹಿಳೆ ಸಾವು

Suddi Udaya
error: Content is protected !!