25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ಐಸಿವೈಎಮ್ ಘಟಕದ ಕ್ರಿಸ್ಮಸ್ ಟ್ಯಾಬ್ಲೊ


ಬೆಳ್ತಂಗಡಿ: ಯೇಸು ಕ್ರಿಸ್ತನ ಹುಟ್ಟುಹಬ್ಬದ ಸಂತೋಷವನ್ನು ಎಲ್ಲರಿಗೂ ಹರಡಲು ಒಂದು ಅರ್ಥಪೂರ್ಣ ಕಥೆಯೊಂದಿಗೆ, ಹೋಲಿ ರಿಡೀಮರ್ ಚರ್ಚ್ ಬೆಳ್ತಂಗಡಿ ಇಲ್ಲಿನ ಐಸಿವೈಎಮ್ ಘಟಕದ ಯುವಕರು ಈ ಸಲ ತಮ್ಮ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ರಿಸ್ಮಸ್ ಟ್ಯಾಬ್ಲೋ ಆಯೋಜಿಸಿತು. ಕ್ರಿಸ್ಮಸ್ ಟ್ಯಾಬ್ಲೋ ಡಿ 22 ರಂದು ಗುರುವಾಯನಕೆರೆಯಿಂದ ಲಾಯಿಲದವರೆಗೂ 5 ಕಡೆಗಳಲ್ಲಿ (ಗುರುವಾಯನಕೆರೆ ಜಂಕ್ಷನ್, ಚರ್ಚ್ ರೋಡ್, ಸಂತೆಕಟ್ಟೆ, ಬೆಳ್ತಂಗಡಿ ಬಸ್ ನಿಲ್ದಾಣ, ಲಾಯಿಲ) ಸಂಜೆ ನಡೆಯಿತು.


ಯೇಸು ಕ್ರೀಸ್ತನ ಹುಟ್ಟಿನ ಕಥೆಯನ್ನು ವರ್ಣಿಸುವ ಹಾಡು ಹಾಗು ರೂಪಕವು ಒಳಗೊಂಡು ವಿವಿಧ ಕಡೆಗಳಲ್ಲಿ ಪ್ರದರ್ಶಿಸಲಾಯಿತು. ಐಸಿವೈಎಮ್ ಸದಸ್ಯರು ಕ್ಯಾರೋಲ್‌ಗಳನ್ನು ಹಾಡಿ ನೆರೆದಿರುವ ಸರ್ವರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರಿದರು.

ಕಾರ್ಯಕ್ರಮದಲ್ಲಿ ಎರಡು ಸಾಂಟಾ ಕ್ಲಾಸ್ ಮತ್ತು ಹೆಚ್ಚಿನಷ್ಟು 30 ಐಸಿವೈಎಮ್ ಮತ್ತು ವೈಸಿಎಸ್ ಸದಸ್ಯರು ಭಾಗವಹಿಸಿದ್ದು ಅಲ್ಲಿದ್ದ ಪ್ರತಿಯೊಬ್ಬರಿಗೂ ಚಾಕೊಲೇಟ್ ವಿತರಿಸಿದರು.
ಕಾರ್ಯಕ್ರಮ ಹೋಲಿ ರಿಡೀಮರ್ ಚರ್ಚಿನ ಪ್ರಾಧಾನ ಗುರುಗಳು ಹಾಗೂ ಐಸಿವೈಎಮ್ ಬೆಳ್ತಂಗಡಿ ಘಟಕದ ನಿರ್ದೇಶಕರಾದ ಅ.ವಂ.ಫಾ. ವೋಲ್ಟರ್ ಡಿಮೆಲ್ಲೊರವರ ಮಾರ್ಗದರ್ಶನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೋ, ಬ್ರದರ್ ಸೈಮನ್, ಐಸಿವೈಎಮ್ ಬೆಳ್ತಂಗಡಿ ಘಟಕದ ಸಚೇತಕಿ ಶ್ರೀಮತಿ ಫ್ಲೇವಿಯಾ ಪಾವ್ಲ್, ವೈಸಿಎಸ್ ಬೆಳ್ತಂಗಡಿ ಘಟಕದ ಸಚೇತಕಿ ಶ್ರೀಮತಿ ರೈನಾ, ಐಸಿವೈಎಮ್ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಗ್ಲೆನ್ ಮೋನಿಸ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಭಾಗವಹಿಸಿದರು.

Related posts

ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಬ್ರಹ್ಮಕುಂಭಾಭಿಷೇಕ ಸಂಪನ್ನ: ವೈಭವ ಪೂರ್ಣವಾಗಿ ನಡೆದ ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ

Suddi Udaya

ಬೈಕ್ ಮತ್ತು ಪಿಕಪ್ ವಾಹನ ನಡುವೆ ಅಪಘಾತ, ಬೈಕ್ ಸವಾರಿಗೆ ಗಂಭೀರ ಗಾಯ, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ, ವೇಣೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಜು.15: ಧರ್ಮಸ್ಥಳದಲ್ಲಿ ಆತಿಥ್ಯ ವೆಜ್ ಹೊಟೇಲ್ ಶುಭಾರಂಭ

Suddi Udaya

ಬೆಳ್ತಂಗಡಿ: ತುಳುನಾಡ್ ಒಕ್ಕೂಟ ಸಂಘಟನೆಯ ಯುವ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ ಭೋಜರಾಜ ಶೆಟ್ಟಿ ಪಿಲ್ಯ ನಿಧನ

Suddi Udaya

ಶಿರ್ಲಾಲು: ಶ್ರೀ ರಾಮ ದೇವರ ಪ್ರತಿಷ್ಠೆ ಮತ್ತು ಲೋಕಾರ್ಪಣೆ: ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಭಜನಾ ಕಾರ್ಯಕ್ರಮ

Suddi Udaya
error: Content is protected !!