July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ಐಸಿವೈಎಮ್ ಘಟಕದ ಕ್ರಿಸ್ಮಸ್ ಟ್ಯಾಬ್ಲೊ


ಬೆಳ್ತಂಗಡಿ: ಯೇಸು ಕ್ರಿಸ್ತನ ಹುಟ್ಟುಹಬ್ಬದ ಸಂತೋಷವನ್ನು ಎಲ್ಲರಿಗೂ ಹರಡಲು ಒಂದು ಅರ್ಥಪೂರ್ಣ ಕಥೆಯೊಂದಿಗೆ, ಹೋಲಿ ರಿಡೀಮರ್ ಚರ್ಚ್ ಬೆಳ್ತಂಗಡಿ ಇಲ್ಲಿನ ಐಸಿವೈಎಮ್ ಘಟಕದ ಯುವಕರು ಈ ಸಲ ತಮ್ಮ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ರಿಸ್ಮಸ್ ಟ್ಯಾಬ್ಲೋ ಆಯೋಜಿಸಿತು. ಕ್ರಿಸ್ಮಸ್ ಟ್ಯಾಬ್ಲೋ ಡಿ 22 ರಂದು ಗುರುವಾಯನಕೆರೆಯಿಂದ ಲಾಯಿಲದವರೆಗೂ 5 ಕಡೆಗಳಲ್ಲಿ (ಗುರುವಾಯನಕೆರೆ ಜಂಕ್ಷನ್, ಚರ್ಚ್ ರೋಡ್, ಸಂತೆಕಟ್ಟೆ, ಬೆಳ್ತಂಗಡಿ ಬಸ್ ನಿಲ್ದಾಣ, ಲಾಯಿಲ) ಸಂಜೆ ನಡೆಯಿತು.


ಯೇಸು ಕ್ರೀಸ್ತನ ಹುಟ್ಟಿನ ಕಥೆಯನ್ನು ವರ್ಣಿಸುವ ಹಾಡು ಹಾಗು ರೂಪಕವು ಒಳಗೊಂಡು ವಿವಿಧ ಕಡೆಗಳಲ್ಲಿ ಪ್ರದರ್ಶಿಸಲಾಯಿತು. ಐಸಿವೈಎಮ್ ಸದಸ್ಯರು ಕ್ಯಾರೋಲ್‌ಗಳನ್ನು ಹಾಡಿ ನೆರೆದಿರುವ ಸರ್ವರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರಿದರು.

ಕಾರ್ಯಕ್ರಮದಲ್ಲಿ ಎರಡು ಸಾಂಟಾ ಕ್ಲಾಸ್ ಮತ್ತು ಹೆಚ್ಚಿನಷ್ಟು 30 ಐಸಿವೈಎಮ್ ಮತ್ತು ವೈಸಿಎಸ್ ಸದಸ್ಯರು ಭಾಗವಹಿಸಿದ್ದು ಅಲ್ಲಿದ್ದ ಪ್ರತಿಯೊಬ್ಬರಿಗೂ ಚಾಕೊಲೇಟ್ ವಿತರಿಸಿದರು.
ಕಾರ್ಯಕ್ರಮ ಹೋಲಿ ರಿಡೀಮರ್ ಚರ್ಚಿನ ಪ್ರಾಧಾನ ಗುರುಗಳು ಹಾಗೂ ಐಸಿವೈಎಮ್ ಬೆಳ್ತಂಗಡಿ ಘಟಕದ ನಿರ್ದೇಶಕರಾದ ಅ.ವಂ.ಫಾ. ವೋಲ್ಟರ್ ಡಿಮೆಲ್ಲೊರವರ ಮಾರ್ಗದರ್ಶನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೋ, ಬ್ರದರ್ ಸೈಮನ್, ಐಸಿವೈಎಮ್ ಬೆಳ್ತಂಗಡಿ ಘಟಕದ ಸಚೇತಕಿ ಶ್ರೀಮತಿ ಫ್ಲೇವಿಯಾ ಪಾವ್ಲ್, ವೈಸಿಎಸ್ ಬೆಳ್ತಂಗಡಿ ಘಟಕದ ಸಚೇತಕಿ ಶ್ರೀಮತಿ ರೈನಾ, ಐಸಿವೈಎಮ್ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಗ್ಲೆನ್ ಮೋನಿಸ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಭಾಗವಹಿಸಿದರು.

Related posts

ಬೆಳ್ತಂಗಡಿ ಶಾಂತಿಶ್ರೀ ಮಹಿಳಾ ಸಮಾಜ ವತಿಯಿಂದ ಯಕ್ಷಗಾನ ಶೈಲಿಯ ಕಾವ್ಯವಾಚನ- ಪ್ರವಚನ ವೈಭವದ ಶ್ರೀಜಿನ ಶಾಂತಿನಾಥ ಚರಿತೆ

Suddi Udaya

ಚಾರ್ಮಾಡಿ ಘಾಟ್ ತಿರುವಿನಲ್ಲಿ ಕಾಡಾನೆ ಪ್ರತ್ಯಕ್ಷ

Suddi Udaya

ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ: ತೀರ್ಥೇಶ್ ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

Suddi Udaya

ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ನೂತನ ಮುಖ್ಯಸ್ಥರಾಗಿ ಸುನಿಲ್ ಹೆಗ್ಡೆ ನೇಮಕ

Suddi Udaya

ಧರ್ಮಸ್ಥಳ: ಮುಂಡ್ರುಪಾಡಿ ನಿವಾಸಿ ಶ್ರೀಮತಿ ಕಮಲ ನಿಧನ

Suddi Udaya
error: Content is protected !!