27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಮೇರಿಕಾದಲ್ಲಿ ನೆಲೆಸಿದರೂ ಭಾರತೀಯ ಸಂಸ್ಕಾರದ ಧಾರ್ಮಿಕ ವಿಧಿ ವಿಧಾನಗಳನ್ನು ಬಳಸಿ ಗೃಹ ಪ್ರವೇಶ

ಬೆಳ್ತಂಗಡಿ; ದೂರದ ಅಮೇರಿಕಾದಲ್ಲಿ ನೆಲೆಸಿದರೂ ತಮ್ಮ ಗೃಹ ಪ್ರವೇಶ ಸಂದರ್ಭದಲ್ಲಿ ಭಾರತೀಯ ಸಂಸ್ಕಾರ, ಸಂಸ್ಕೃತಿಯನ್ನು ಬಿಡದೆ ಹೊರದೇಶದಲ್ಲಿಯೂ ಕಟ್ಟುಪಾಡು ಪಾಲಿಸುವ ಮೂಲಕ ಉಜಿರೆಯ ದೀಪ್ತಿ ಕಾಂಚೋಡು ಮತ್ತು ಡಾ‌. ಶುಭಮಯಿ ಚಟರ್ಜಿ ಅವರು ಸನಾತನ ಧರ್ಮ ಸಂಸ್ಕೃತಿಯನ್ನು ಎತ್ತಿಹಿಡಿದ್ದಾರೆ‌.

ಡಿ.29 ರಂದು ಅಮೇರಿಕಾದ ಕೊಲೆರೋಡದಲ್ಲಿ ನಡೆದ ನೂತನ ಗೃಹ ಪ್ರವೇಶದ ಕಾರ್ಯಕ್ರಮ ಸಂಪೂರ್ಣವಾಗಿ ಭಾರತೀಯ ಪೂಜಾ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು. ಇದು ಅಲ್ಲಿನ ಜನರ ಪ್ರೀತಿ ವಿಶ್ವಾಸವನ್ನೂ ಗಳಿಸಿ ಕೊಂಡದ್ದಲ್ಲದೆ ಅಭಿಮಾನ ಮೆರೆಯುವಂತೆ ಮಾಡಿತು.


ಗೃಹ ಪ್ರವೇಶದ ಸಂಪ್ರದಾಯದಂತೆ ಹಿಂದಿನ ದಿನ ವಾಸ್ತು ಹೋಮ, ಮರು ದಿನ ಗಣಪತಿ ಹವನ, ಶ್ರೀ ಸತ್ಯನಾರಾಯಣ ಪೂಜೆ ಇತ್ಯಾದಿ ದೇವತಾ ಕಾರ್ಯಕ್ರಮಗಳು ನಡೆದವು. ಉಡುಪಿ ಪುತ್ತಿಗೆ ಮಠದ ಅಮೇರಿಕದ ಶಾಖೆಯ ಪುರೋಹಿತ ವಾದಿರಾಜ ಭಟ್ಟರು ನೇತೃತ್ವ ನೀಡಿದರು. ಈ ವೇಳೆ ಆಹ್ವಾನಿತ ವಿದೇಶಿ ಪ್ರಜೆಗಳು ಮುಖ್ಯವಾಗಿ ನಮ್ಮ ದೇಶದ ಧಾರ್ಮಿಕ ವಿಧಿ ವಿಧಾನಗಳನ್ನು ಗೌರವ ಭಾವದಿಂದ ಕಣ್ತುಂಬಿಕೊಂಡರು. ಅತಿಥ್ಯ ಸ್ವೀಕರಿಸುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ದೀಪ್ತಿ ಕಾಂಚೋಡು ಅವರು ಉಜಿರೆಯ ಮಾಜಿ ಯೋಧ ಲ. ಡಾ. ಗೋಪಾಲಕೃಷ್ಣ ಭಟ್ ಕಾಂಚೋಡು ಮತ್ತು ಸುಲೋಚನಾ ಕಾಂಚೋಡು ದಂಪತಿಯ ಪುತ್ರಿ. ಎಂಎಸ್ಸಿ ಪದವೀಧರೆಯಾಗಿರುವ ದೀಪ್ತಿ ಅವರು ಅಮೇರಿಕಾದಲ್ಲಿ ವೃತ್ತಿಯಲ್ಲಿದ್ದಾರೆ ಅವರ ಪತಿ ಡಾ.‌ಶುಭಮಯಿ ಚಟರ್ಜಿ ಅವರು ವಿಜ್ಞಾನಿಯಾಗಿ ಉದ್ಯೋಗದಲ್ಲಿದ್ದಾರೆ.

Related posts

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ.ಕಾಲೇಜು ವಾರ್ಷಿಕ ಕ್ರೀಡಾಕೂಟ

Suddi Udaya

ಗುರುವಾಯನಕೆರೆ ಎಕ್ಸೆಲ್ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಿಗೆ ನಾಟಾ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ

Suddi Udaya

ನಡ ಮೂಡಾಯಿಬೆಟ್ಟು ಹಂದಿ ಸಾಕಾಣಾ ಕೇಂದ್ರದಿಂದ ಹಂದಿಯನ್ನು ಎಳೆದೊಯ್ದ ಚಿರತೆ

Suddi Udaya

ಮಡಂತ್ಯಾರು ಬಸವನಗುಡಿ ಒಕ್ಕೂಟದ ವತಿಯಿಂದ ಬಸವೇಶ್ವರ ದೇವರಿಗೆ ಸಿಯಾಳಭಿಷೇಕ

Suddi Udaya

ಬೆಳ್ತಂಗಡಿ ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಸರಕಾರಿ ಸೇವೆಯಿಂದ ನಿವೃತ್ತರಾದ ಡಾ. ಕೆ. ಜಯಕೀರ್ತಿ ಜೈನ್ ರವರಿಗೆ ಅಭಿನಂದನಾ ಸಮಾರಂಭ

Suddi Udaya

ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ವಿವಾದಾತ್ಮಕ ಹೇಳಿಕೆ ಮತ್ತು ಅಧಿಕಾರಿಗಳಿಗೆ ಬೆದರಿಕೆ ವಿರುದ್ಧ ಬೆಳ್ತಂಗಡಿಯಲ್ಲಿ ಎಸ್‌ಡಿಪಿಐ ಪ್ರತಿಭಟನೆ

Suddi Udaya
error: Content is protected !!