25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಮೇರಿಕಾದಲ್ಲಿ ನೆಲೆಸಿದರೂ ಭಾರತೀಯ ಸಂಸ್ಕಾರದ ಧಾರ್ಮಿಕ ವಿಧಿ ವಿಧಾನಗಳನ್ನು ಬಳಸಿ ಗೃಹ ಪ್ರವೇಶ

ಬೆಳ್ತಂಗಡಿ; ದೂರದ ಅಮೇರಿಕಾದಲ್ಲಿ ನೆಲೆಸಿದರೂ ತಮ್ಮ ಗೃಹ ಪ್ರವೇಶ ಸಂದರ್ಭದಲ್ಲಿ ಭಾರತೀಯ ಸಂಸ್ಕಾರ, ಸಂಸ್ಕೃತಿಯನ್ನು ಬಿಡದೆ ಹೊರದೇಶದಲ್ಲಿಯೂ ಕಟ್ಟುಪಾಡು ಪಾಲಿಸುವ ಮೂಲಕ ಉಜಿರೆಯ ದೀಪ್ತಿ ಕಾಂಚೋಡು ಮತ್ತು ಡಾ‌. ಶುಭಮಯಿ ಚಟರ್ಜಿ ಅವರು ಸನಾತನ ಧರ್ಮ ಸಂಸ್ಕೃತಿಯನ್ನು ಎತ್ತಿಹಿಡಿದ್ದಾರೆ‌.

ಡಿ.29 ರಂದು ಅಮೇರಿಕಾದ ಕೊಲೆರೋಡದಲ್ಲಿ ನಡೆದ ನೂತನ ಗೃಹ ಪ್ರವೇಶದ ಕಾರ್ಯಕ್ರಮ ಸಂಪೂರ್ಣವಾಗಿ ಭಾರತೀಯ ಪೂಜಾ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು. ಇದು ಅಲ್ಲಿನ ಜನರ ಪ್ರೀತಿ ವಿಶ್ವಾಸವನ್ನೂ ಗಳಿಸಿ ಕೊಂಡದ್ದಲ್ಲದೆ ಅಭಿಮಾನ ಮೆರೆಯುವಂತೆ ಮಾಡಿತು.


ಗೃಹ ಪ್ರವೇಶದ ಸಂಪ್ರದಾಯದಂತೆ ಹಿಂದಿನ ದಿನ ವಾಸ್ತು ಹೋಮ, ಮರು ದಿನ ಗಣಪತಿ ಹವನ, ಶ್ರೀ ಸತ್ಯನಾರಾಯಣ ಪೂಜೆ ಇತ್ಯಾದಿ ದೇವತಾ ಕಾರ್ಯಕ್ರಮಗಳು ನಡೆದವು. ಉಡುಪಿ ಪುತ್ತಿಗೆ ಮಠದ ಅಮೇರಿಕದ ಶಾಖೆಯ ಪುರೋಹಿತ ವಾದಿರಾಜ ಭಟ್ಟರು ನೇತೃತ್ವ ನೀಡಿದರು. ಈ ವೇಳೆ ಆಹ್ವಾನಿತ ವಿದೇಶಿ ಪ್ರಜೆಗಳು ಮುಖ್ಯವಾಗಿ ನಮ್ಮ ದೇಶದ ಧಾರ್ಮಿಕ ವಿಧಿ ವಿಧಾನಗಳನ್ನು ಗೌರವ ಭಾವದಿಂದ ಕಣ್ತುಂಬಿಕೊಂಡರು. ಅತಿಥ್ಯ ಸ್ವೀಕರಿಸುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ದೀಪ್ತಿ ಕಾಂಚೋಡು ಅವರು ಉಜಿರೆಯ ಮಾಜಿ ಯೋಧ ಲ. ಡಾ. ಗೋಪಾಲಕೃಷ್ಣ ಭಟ್ ಕಾಂಚೋಡು ಮತ್ತು ಸುಲೋಚನಾ ಕಾಂಚೋಡು ದಂಪತಿಯ ಪುತ್ರಿ. ಎಂಎಸ್ಸಿ ಪದವೀಧರೆಯಾಗಿರುವ ದೀಪ್ತಿ ಅವರು ಅಮೇರಿಕಾದಲ್ಲಿ ವೃತ್ತಿಯಲ್ಲಿದ್ದಾರೆ ಅವರ ಪತಿ ಡಾ.‌ಶುಭಮಯಿ ಚಟರ್ಜಿ ಅವರು ವಿಜ್ಞಾನಿಯಾಗಿ ಉದ್ಯೋಗದಲ್ಲಿದ್ದಾರೆ.

Related posts

ಬೆಳ್ತಂಗಡಿ ಎಸ್ ಡಿ ಎಂ ಆಂ.ಮಾ. ಶಾಲೆಯಲ್ಲಿ ತಾಲೂಕು ಮಟ್ಟದ ಪ್ರಾರಂಭಿಕ ತರಬೇತಿ ಶಿಬಿರ ಹಾಗೂ ಪುನಶ್ಚೇತನ ತರಬೇತಿ ಶಿಬಿರ

Suddi Udaya

ಲಾಯಿಲ ಜಿ.ಪಂ. ವ್ಯಾಪ್ತಿಯ ಪ್ರದೇಶಗಳಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಬಿರುಸಿನ ಮತಯಾಚನೆ

Suddi Udaya

ಪಡಂಗಡಿ: ಕುದ್ರೆಂಜ ಬಳಿ ಸೇತುವೆ ಕುಸಿತ: ಸಂಪರ್ಕ ಕಡಿತ

Suddi Udaya

ಅನುದಾನ ಅನ್ಯಾಯ ಪ್ರತಿಭಟಿಸಿ ಕರ್ನಾಟಕ ಕಾಂಗ್ರೆಸ್‌ನಿಂದ ಇಂದು ದಿಲ್ಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಎಂಎಲ್ಸಿ ಹರೀಶ್ ಕುಮಾರ್ ಭಾಗಿ

Suddi Udaya

ಉಜಿರೆ ಉದ್ಯಮಿ, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ರವರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ

Suddi Udaya

ಜೂ.19: ದರ್ಭೆತಡ್ಕ ಸುದೆಗಂಡಿಯಲ್ಲಿ ಕಿರು ಸೇತುವೆಯ ದುರಸ್ತಿ ಕಾರ್ಯ ನಡೆಸಲು ಗ್ರಾಮಸ್ಥರ ಸಭೆ

Suddi Udaya
error: Content is protected !!