22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಮೇರಿಕಾದಲ್ಲಿ ನೆಲೆಸಿದರೂ ಭಾರತೀಯ ಸಂಸ್ಕಾರದ ಧಾರ್ಮಿಕ ವಿಧಿ ವಿಧಾನಗಳನ್ನು ಬಳಸಿ ಗೃಹ ಪ್ರವೇಶ

ಬೆಳ್ತಂಗಡಿ; ದೂರದ ಅಮೇರಿಕಾದಲ್ಲಿ ನೆಲೆಸಿದರೂ ತಮ್ಮ ಗೃಹ ಪ್ರವೇಶ ಸಂದರ್ಭದಲ್ಲಿ ಭಾರತೀಯ ಸಂಸ್ಕಾರ, ಸಂಸ್ಕೃತಿಯನ್ನು ಬಿಡದೆ ಹೊರದೇಶದಲ್ಲಿಯೂ ಕಟ್ಟುಪಾಡು ಪಾಲಿಸುವ ಮೂಲಕ ಉಜಿರೆಯ ದೀಪ್ತಿ ಕಾಂಚೋಡು ಮತ್ತು ಡಾ‌. ಶುಭಮಯಿ ಚಟರ್ಜಿ ಅವರು ಸನಾತನ ಧರ್ಮ ಸಂಸ್ಕೃತಿಯನ್ನು ಎತ್ತಿಹಿಡಿದ್ದಾರೆ‌.

ಡಿ.29 ರಂದು ಅಮೇರಿಕಾದ ಕೊಲೆರೋಡದಲ್ಲಿ ನಡೆದ ನೂತನ ಗೃಹ ಪ್ರವೇಶದ ಕಾರ್ಯಕ್ರಮ ಸಂಪೂರ್ಣವಾಗಿ ಭಾರತೀಯ ಪೂಜಾ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು. ಇದು ಅಲ್ಲಿನ ಜನರ ಪ್ರೀತಿ ವಿಶ್ವಾಸವನ್ನೂ ಗಳಿಸಿ ಕೊಂಡದ್ದಲ್ಲದೆ ಅಭಿಮಾನ ಮೆರೆಯುವಂತೆ ಮಾಡಿತು.


ಗೃಹ ಪ್ರವೇಶದ ಸಂಪ್ರದಾಯದಂತೆ ಹಿಂದಿನ ದಿನ ವಾಸ್ತು ಹೋಮ, ಮರು ದಿನ ಗಣಪತಿ ಹವನ, ಶ್ರೀ ಸತ್ಯನಾರಾಯಣ ಪೂಜೆ ಇತ್ಯಾದಿ ದೇವತಾ ಕಾರ್ಯಕ್ರಮಗಳು ನಡೆದವು. ಉಡುಪಿ ಪುತ್ತಿಗೆ ಮಠದ ಅಮೇರಿಕದ ಶಾಖೆಯ ಪುರೋಹಿತ ವಾದಿರಾಜ ಭಟ್ಟರು ನೇತೃತ್ವ ನೀಡಿದರು. ಈ ವೇಳೆ ಆಹ್ವಾನಿತ ವಿದೇಶಿ ಪ್ರಜೆಗಳು ಮುಖ್ಯವಾಗಿ ನಮ್ಮ ದೇಶದ ಧಾರ್ಮಿಕ ವಿಧಿ ವಿಧಾನಗಳನ್ನು ಗೌರವ ಭಾವದಿಂದ ಕಣ್ತುಂಬಿಕೊಂಡರು. ಅತಿಥ್ಯ ಸ್ವೀಕರಿಸುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ದೀಪ್ತಿ ಕಾಂಚೋಡು ಅವರು ಉಜಿರೆಯ ಮಾಜಿ ಯೋಧ ಲ. ಡಾ. ಗೋಪಾಲಕೃಷ್ಣ ಭಟ್ ಕಾಂಚೋಡು ಮತ್ತು ಸುಲೋಚನಾ ಕಾಂಚೋಡು ದಂಪತಿಯ ಪುತ್ರಿ. ಎಂಎಸ್ಸಿ ಪದವೀಧರೆಯಾಗಿರುವ ದೀಪ್ತಿ ಅವರು ಅಮೇರಿಕಾದಲ್ಲಿ ವೃತ್ತಿಯಲ್ಲಿದ್ದಾರೆ ಅವರ ಪತಿ ಡಾ.‌ಶುಭಮಯಿ ಚಟರ್ಜಿ ಅವರು ವಿಜ್ಞಾನಿಯಾಗಿ ಉದ್ಯೋಗದಲ್ಲಿದ್ದಾರೆ.

Related posts

ಜಮೀಯ್ಯತುಲ್ ಪಲಾಹ್ ಬೆಳ್ತಂಗಡಿ ವತಿಯಿಂದ ಪ್ರತಿಭಾ ಪುರಸ್ಕಾರ, ರೂ. 3 ಲಕ್ಷ‌ ವಿದ್ಯಾರ್ಥಿವೇತನ ವಿತರಣೆ

Suddi Udaya

ಎನ್.ಎಮ್.ಎಮ್.ಎಸ್ ಪರೀಕ್ಷೆ: ಓಡಿಲ್ನಾಳ ಸ.ಉ.ಪ್ರಾ. ಶಾಲೆಯ ವಿದ್ಯಾರ್ಥಿಗಳಾದ ರಶ್ಮಿ ಹಾಗೂ ಸುಜನ್ ರಿಗೆ ಉತ್ತಮ ಅಂಕ : ರಾಜ್ಯಮಟ್ಟದ ವಿದ್ಯಾರ್ಥಿ ವೇತನಕ್ಕೆ ಆಯ್ಕೆ

Suddi Udaya

ರಾಷ್ಟ್ರ ಮಟ್ಟದ ಸ್ಕ್ವೇಯ್ ಮಾರ್ಷಲ್ ಆರ್ಟ್ಸ್ ಸ್ಪರ್ಧೆ: ಸೇಕ್ರೆಡ್ ಹಾರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿ ಯತೀಂದ್ರ ರಿಗೆ ಕಂಚಿನ ಪದಕ

Suddi Udaya

ಬಳಂಜ ಆನೆಪಿಲ ರಸ್ತೆಯ ಅಭಿವೃದ್ಧಿಗೆ ರಕ್ಷಿತ್ ಶಿವರಾಮ್ ರವರಿಂದ ಅನುದಾನ ನೀಡುವ ಭರವಸೆ

Suddi Udaya

ಕಲೆ ,ಸಾಹಿತ್ಯ, ಕ್ರೀಡೆ ಮತ್ತು ಸಾಂಸ್ಕೃತಿಕವಾಗಿ ರಾಜ್ಯಮಟ್ಟದಲ್ಲಿ ಗುರುತಿಸಲ್ಪಟ್ಟ ಬಳಂಜ ಶ್ರೀ ಉಮಾಮಹೇಶ್ವರ ಯುವಕ ಮಂಡಲದ ಪದಾಧಿಕಾರಿಗಳ ಆಯ್ಕೆ

Suddi Udaya

ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮಹಾದ್ವಾರ ಲೋಕಾರ್ಪಣೆ: ರೂ 11 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಮಹಾದ್ವಾರ, ಶಾಸಕ ಹರೀಶ್ ಪೂಂಜರವರಿಂದ ಉದ್ಘಾಟನೆ

Suddi Udaya
error: Content is protected !!