ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಕಾಯರ್ತಡ್ಕ ಶಾಲೆಗೆ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿದ ರಾಷ್ಟ್ರಪತಿ ಪ್ರಶಸ್ತಿ ವಿಜೇತ ಶಿಕ್ಷಕ ಯಾಕೂಬ್ ಎಸ್ ಕೊಯ್ಯೂರು ರವರಿಗೆ ಸನ್ಮಾನ

Suddi Udaya

ಕಾಯರ್ತಡ್ಕ: ಕಾಯರ್ತಡ್ಕ ಶಾಲೆಗೆ ಮುಖ್ಯ ಶಿಕ್ಷಕರಾಗಿ ಭಡ್ತಿಹೊಂದಿದ ರಾಷ್ಟ್ರಪತಿ ಪ್ರಶಸ್ತಿ ವಿಜೇತ ಶಿಕ್ಷಕ ಯಾಕೂಬ್ ಎಸ್ ಕೊಯ್ಯೂರು ರವರಿಗೆ ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಶಾಲಾ ಮಕ್ಕಳ ಮತ್ತು ಅಧ್ಯಾಪಕ ವೃಂದದ ಸಮ್ಮುಖದಲ್ಲಿ ಜ.4 ರಂದು ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಜೆಸಿ ರಾಜಾರಾಂ ಟಿ ಸಂಗಮ ನಗರ ಇವರು ಯಾಕೂಬ್ ಎಸ್ ರವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜೆಸಿಐ ಕೊಕ್ಕಡ ಇದರ ಅಧ್ಯಕ್ಷ ಜೇಸಿ ಹೆಚ್ ಜಿ ಎಪ್ ಸಂತೋಷ್ ಜೈನ್, ಕಾರ್ಯದರ್ಶಿ ಜೇಸಿ ಅಕ್ಷತ್ ರೈ, ಕಳೆಂಜ ಸದಾಶಿವೇಶ್ವರ ದೇವಳದ ಅಧ್ಯಕ್ಷ ಜೆಸಿ ಕೆ.ಶ್ರೀಧರ್ ರಾವ್, ಶಿಬರಾಜೆ ಗ್ರಾಮಭ್ಯುದಯದ ಅನುಷ್ಠಾನ ಸಮಿತಿ ಅಧ್ಯಕ್ಷ ಜೆಸಿ ಪಿ.ಟಿ ಸಬಾಸ್ಟಿನ್‌, ಬೆಳ್ಳಾರೆ ಜೆಸಿಐ ಸದಸ್ಯ ಸೀತಾರಾಮ ರೈ, ಅಧ್ಯಾಪಕ ವೃಂದ, ಮಕ್ಕಳು ಉಪಸ್ಥಿತರಿದ್ದರು.

Leave a Comment

error: Content is protected !!