ಉರುವಾಲು :ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಚಪ್ಪರ ಮೂಹೂರ್ತ

Suddi Udaya

ಉರುವಾಲು :ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಚಪ್ಪರ ಮೂಹೂರ್ತವು ದೇವಸ್ಥಾನದ ವಠಾರದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಜ.5ರಂದು ನಡೆಯಿತು.

ಕಾರ್ಯಕ್ರಮವನ್ನು ಲ| ದೇವದಾಸ್ ಶೆಟ್ಟಿ ಉದ್ಯಮಿಗಳು ಇಬರೋಡಿ ಬದ್ಯಾರು ಇವರ ಅಮೃತ ಹಸ್ತದಿಂದ ಮುಹೂರ್ತ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೋಕ್ತೇಸರರು ಯೋಗೀಶ್ ಪೂಜಾರಿ ಕಡ್ತಿಲ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಡಾ| ಶ್ರೀ ಕೃಷ್ಣರಾಜ ಉರುವಾಲು, ತಂತ್ರಿ ವೆಂಕಟೇಶ್ ಎಡಪದವು, ಕಣಿಯೂರು ಗ್ರಾ.ಪಂ. ಅಧ್ಯಕ್ಷ ಯಶವಂತ, ಸಮಿತಿ ಕಾರ್ಯಾಧ್ಯಕ್ಷ ಸುನಿಲ್ ಗೌಡ ಅಣವು, ಅಧ್ಯಕ್ಷ ದಾಸಪ್ಪ ಗೌಡ ಕೋಡಿಯಡ್ಕ, ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕಲ್ಲಳಿಕೆ, ಉಪಾಧ್ಯಕ್ಷ ಈಶ್ವರ್ ಭಟ್ ಧರ್ಮಾಡಿ, ಜೊತೆ ಕಾರ್ಯದರ್ಶಿ ಗಣೇಶ್ ಗೌಡ ಬನಾರಿ, ಕೋಶಾಧಿಕಾರಿ ಉದಯ್ ಭಟ್ ತಾಳಿಂಜ, ಕಾರ್ಯಧ್ಯಕ್ಷರಾಗಿ ಪ್ರಸನ್ನ ದರ್ಬೆ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕಡ್ತಿಲ, ಉಪಾಧ್ಯಕ್ಷರಾಗಿ ಕೃಷ್ಣ ಭಟ್ ಹತ್ತೊಕ್ಲು, ಶ್ರೀಮತಿ ಉಮಾವತಿ ದೇಜಪ್ಪ ಗೌಡ, ರವಿರಾಜ್ ಉರುವಾಲು, ಅತುಲ್ ಕುಮಾರ್ ಹಲೇಜಿ, ಶ್ರೀಮತಿ ಶೀಲಾ ಪದವು, ಧರ್ಣಪ್ಪ ನಾಯ್ಕ್ ಆನಡ್ಕ, ರಾಜೀವ್ ರೈ ಮೊಗರೋಡಿ, ಕಾರ್ಯದರ್ಶಿಯಾಗಿ ವಿಜಯ್ ಕುಮಾರ್ ಕಲ್ಲಳಿಕೆ, ಜೊತೆ ಕಾರ್ಯದರ್ಶಿಯಾಗಿ ಕೃಷ್ಣಪ್ರಸಾದ್ ಗೌಡ ಮಜಿಕುಡೇಲು, ಕೋಶಾಧಿಕಾರಿಯಾಗಿ ಶ್ರೀಧರ್ ಭಟ್ ಕೂವೆತ್ತಂಡ, ಜೊತೆ ಕೋಶಾಧಿಕಾರಿಯಾಗಿ ಸುಂದರ ಶೆಟ್ಟಿ ಎಂಜಿರಪಲಿಕೆ ಹಾಗೂ ಎಲ್ಲಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Leave a Comment

error: Content is protected !!