September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮುಂಡಾಜೆ : ಸಾಮೂಹಿಕ ಶ್ರೀ ಶನೈಚ್ಚರ ಪೂಜೆ ಹಾಗೂ ಕೀರ್ತನಾ ಕಲೋತ್ಸವ -2024

ಮುಂಡಾಜೆ : ಇಲ್ಲಿಯ 6ನೇ ವರ್ಷದ ಸಾಮೂಹಿಕ ನವಗ್ರಹ ಸಹಿತ ಶ್ರೀ ಶನೈಚ್ಚರ ಪೂಜೆ ಹಾಗೂ ಕೀರ್ತನಾ ಕಲೋತ್ಸವ -2024 ಜ.06 ರಂದು ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಆವರಣದಲ್ಲಿ ನಡೆಯಿತು.

ಕೀರ್ತನಾ ಕಲಾ ತಂಡದ ಅಧ್ಯಕ್ಷ ಸದಾನಂದ ಬಿ. ಮುಂಡಾಜೆ ಪ್ರಾಸ್ತವಿಕವಾಗಿ ಮಾತನಾಡಿ ಕೀರ್ತನಾ ಕಲಾ ತಂಡವು ರಾಜ್ಯ ರಾಷ್ಟ ಮಟ್ಟದಲ್ಲಿ ತೊಡಗಿಸಿಕೊಂಡ ವಿಚಾರವನ್ನು ವ್ಯಕ್ತಪಡಿಸಿಕೊಂಡರು. ಗೌರವ ಉಪಸ್ಥಿತಿ ವಹಿಸಿದ್ದ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಕಲಾ ಕ್ಷೇತ್ರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಗೈದ ಸತ್ಯ ನಾರಾಯಣ ಭಟ್, ಬಾಬು ಪೂಜಾರಿ ಕೂಳೂರು, ಚಂದ್ರಶೇಖರ ಗೌಡ ಸಾಲ್ಪಿಲ, ಆನಂದ ನಲ್ಕೆ, ಕು. ಮೌಲ್ಯ ನಾಯಕ್, ಕು. ದಿವ್ಯಶ್ರೀ ಕೆ. ಶೆಟ್ಟಿ ಯವರಿಗೆ ಅಭಿನಂದಿಸಲಾಯಿತು.ಸಭೆಯಲ್ಲಿ ಮುಂಡಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಬಂಗೇರ ಕೂಳೂರು, ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಆಡಳಿತ ಮೊಕ್ತೇಸರರು ಕಜೆ ವೆಂಕಟೇಶ್ವರ ಭಟ್ ಉಪಸ್ಥಿತರಿದ್ದರು.

ಸಭೆಯ ಬಳಿಕ ಕೀರ್ತನಾ ಕಲಾ ತಂಡದಿಂದ ವಿದ್ಯುನ್ಮತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ಹಾಗೂ ಕಲಾ ಕಲರವ ನಡೆಯಿತು.ನಾರಾಯಣ ಶೆಟ್ಟಿ ಪ್ರಾರ್ಥಿಸಿ, ಸದಾನಂದ ಬಿ. ಮುಂಡಾಜೆ ಸ್ವಾಗತಿಸಿದರು, ಕಾರ್ಯದರ್ಶಿ ಉಮೇಶ್ ಆಚಾರ್ ಧನ್ಯವಾದ ವಿತ್ತರು.

Related posts

ಲೋಬೊ ಟಿವಿಎಸ್‌ನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ: ನಿವೃತ್ತ ಯೋಧ ಜಾನ್ ಮೆನೆಜಸ್‌ಗೆ ಸನ್ಮಾನ

Suddi Udaya

ಉಪ್ಪಿನಂಗಡಿ ನೇತ್ರಾವತಿ ನದಿ ಕೂಟೇಲು ಎಂಬಲ್ಲಿ ಪ್ರವಾಹದಲ್ಲಿ ತೇಲಿ ಬಂದ ಜಾನುವಾರು

Suddi Udaya

ಉಜಿರೆಯ ಡಾ| ಸುಜಾತ ದಿನೇಶ್ ಅವರಿಗೆ ಪಿ ಹೆಚ್ ಡಿ ಪದವಿ

Suddi Udaya

ಕೊಯ್ಯೂರು : ಆದೂರು ಪೇರಲ್ ಶ್ರೀ ಕೃಷ್ಣ ಭಜನಾ ಮಂಡಳಿಯ ವತಿಯಿಂದ ನಗರ ಭಜನಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ಅಳದಂಗಡಿ: ಶ್ರೀ ಸೋಮನಾಥೇಶ್ವರಿ ಭಜನಾ ಮಂಡಳಿಯ ಹಿರಿಯ ಕಾರ್ಯಕರ್ತ ಪೂವಪ್ಪ ಮಡಿವಾಳ ಸನ್ಮಾನ

Suddi Udaya
error: Content is protected !!