25.5 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿ

ನಾಲ್ಕೂರು ಇಕೋ ಫಾರ್ಮ್ ನಲ್ಲಿ ಪುರಾತನ ಕಾಲದ ನಾಗ ಕಲ್ಲುಗಳು ಪತ್ತೆ

ಬಳಂಜ: ಮಣ್ಣಿನ ಒಳಗೆ ಹೋಗಿದ್ದ ಪುರಾತನ ಕಾಲದ ನಾಗದೇವರ ವಿಗ್ರಹ ಬೆಳ್ತಂಗಡಿ ತಾಲೂಕಿನ ನಾಲ್ಕೂರು ಗ್ರಾಮದಲ್ಲಿ ಪತ್ತೆಯಾಗಿದೆ.

ಉದ್ಯಮಿ ರಾಕೇಶ್ ಹೆಗ್ಡೆ ಬಳಂಜ ಅವರು ತನ್ನ ಇಕೋ ಫಾರ್ಮ್ ನಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನೆಡುತ್ತಿದ್ದು ನಿರಂತರ ಕೃಷಿ ಕೆಲಸ ಕಾರ್ಯಗಳು ನಡೆಯುತ್ತಿದೆ. ಜೆಸಿಬಿ ಮೂಲಕ ಮಣ್ಣು ಅಗೆಯುವ ಸಂದರ್ಭದಲ್ಲಿ ಪುರಾತನ ಕಾಲದ ನಾಗ ಕಲ್ಲುಗಳು ಸಿಕ್ಕಿರುವುದರಿಂದ ಜನರಲ್ಲಿ ಭಯ,ಭಕ್ತಿಯ ವಾತಾವರಣ ಸೃಷ್ಟಿಯಾಗಿದೆ.

ಈ ನಾಗ ಕಲ್ಲುಗಳು ಸಿಕ್ಕಿದ ಪ್ರದೇಶಕ್ಕೆ ರಾಕೇಶ್ ಹೆಗ್ಡೆಯವರು ಜ್ಯೋತಿಷ್ಯರನ್ನು ಕರೆ ತಂದಾಗ ಈ ಕಲ್ಲುಗಳು ಸುಮಾರು 400 ವರ್ಷಗಳ ಹಿಂದಿನ ಕಾಲದವು ಎಂದು ತಿಳಿಸಿದರು.

ನಮ್ಮ ಇಕೋ ಫಾರ್ಮ್ ನಲ್ಲಿ ನಾಗಬನವಿರುವುದರಿಂದ ಬರುವ ಬುಧವಾರ ನಾಗದೇವರಿಗೆ ಪೂಜೆಗಳು ನಡೆಯಲಿದ್ದು ಇದೀಗ ಮಣ್ಣು ಅಗೆಯುವಾಗ ನಾಗ ಕಲ್ಲು ಸಿಕ್ಕಿರುವುದು ನಮಗೆ ಅಚ್ಚರಿ, ಭಯ, ಭಕ್ತಿ ಮೂಡಿಸಿದೆ ಎಂದು ರಾಕೇಶ್ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Related posts

ಧರ್ಮಸ್ಥಳ ಭಜನಾ ಕಮ್ಮಟದಲ್ಲಿ ಭಾಗವಹಿಸಲು ಅರ್ಹ ಅಭ್ಯರ್ಥಿಗಳಿಗೆ ಅವಕಾಶ

Suddi Udaya

ಲಾಯಿಲ: ರಸ್ತೆ ಬದಿ ಕಸ ಬಿಸಾಡಿದ್ದಕ್ಕೆ ಮತ್ತೆ ಬಿತ್ತು ದಂಡ

Suddi Udaya

ಅನಾರು ದೇವಸ್ಥಾನ ವರ್ಷಾವಧಿ ಜಾತ್ರಾ ಮಹೋತ್ಸವ: ತೋರಣ ಮುಹೂರ್ತ, ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, ಕ್ಯಾಲೆಂಡರ್ ಬಿಡುಗಡೆ

Suddi Udaya

ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣವನ್ನು ಪತ್ತೆಹಚ್ಚಲು ಪೊಲೀಸ್ ಇಲಾಖೆಯಲ್ಲಿ ಎಸ್.ಡಿ.ಪಿ.ಐ ಆಗ್ರಹ

Suddi Udaya

ಮಾಜಿ ಶಾಸಕ ವಸಂತ ಬಂಗೇರ ವಿಧಿವಶಬಂಗೇರ ಅಭಿಮಾನಿಗಳಿಂದ ಅಂತಿಮ ಸಂಸ್ಕಾರದ ಬಗ್ಗೆ ತುರ್ತು ಸಭೆಸಕಲ ಸರ್ಕಾರಿ ಗೌರವಗಳೊಂದಿಗೆ  ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ

Suddi Udaya

ಶ್ರೀರಾಮ ಶಾಲೆ ಸುಲ್ಕೇರಿಯ ವಿದ್ಯಾರ್ಥಿನಿ ಕು.ನಿಷ್ಕಾ ಜೈನ್ ಕಥೆ ಹೇಳುವ ಸ್ಪರ್ಧೆಯಲ್ಲಿ ಪ್ರಥಮ

Suddi Udaya
error: Content is protected !!