27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ರಾಷ್ಟ್ರೀಯ ಕರಾಟೆ ಪಂದ್ಯಾಟ: ಬೆಳ್ತಂಗಡಿಯ ಶೊರಿನ್ ರಿಯೊ ಕರಾಟೆ ಅಶೋಷಿಯೇಶನ್ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

ಬೆಳ್ತಂಗಡಿ: ಹಾಸನದಲ್ಲಿ ನಡೆದಂತಹ ಮುಕ್ತ ರಾಷ್ಟ್ರೀಯ ಕರಾಟೆ ಪಂದ್ಯಕೂಟದಲ್ಲಿ ಬೆಳ್ತಂಗಡಿಯ ಶೊರಿನ್ ರಿಯೊ ಕರಾಟೆ ಅಶೋಷಿಯೇಶನ ವಿಧ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಮುಡಿಗೆರೆಸಿಕೊಂಡಿದ್ದಾರೆ.

ಕಲರ್ ಬೆಲ್ಟ್ ವಿಭಾಗದಲ್ಲಿ ಮೊಹಮ್ಮದ್ ರಯ್ಯಾನ್ ಮತ್ತು ನಿಶಾನ್ ಕಟಾ ಹಾಗೂ ಫೈಟಿಂಗ್ ನಲ್ಲಿ ಚಿನ್ನ, ಆಡ್ಲಿನ್ ಎಲಿಜಬೆತ್ ಜೆರಿನ್ ಫೈಟಿಂಗ್ ನಲ್ಲಿ ಚಿನ್ನ ಮತ್ತು ಕಟಾದಲ್ಲಿ ಕಂಚು, ವಿಶ್ವಾಸ್ ಶೆಟ್ಟಿ ಕಟಾದಲ್ಲಿ ಬೆಳ್ಳಿ, ಕ್ಷಿತಿಜ್ ಶೆಟ್ಟಿ ಕಟಾ ಹಾಗೂ ಫೈಟಿಂಗ್ ನಲ್ಲಿ ಬೆಳ್ಳಿ , ರಾಜೇಶ್ ಶಾಹೋ ಕಟಾದಲ್ಲಿ ಚಿನ್ನ ಫೈಟಿಂಗ್ ನಲ್ಲಿ ಬೆಳ್ಳಿ , ಮೊಹಮ್ಮದ್ ಫಾಝಿಮ್ ಕಟಾದಲ್ಲಿ ಚಿನ್ನ ಫೈಟಿಂಗ್ ನಲ್ಲಿ ಕಂಚು ಮತ್ತು ಹಲೀಮ ಹೈಫಾ ಕಟಾದಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದಾರೆ. ಹಾಗೆಯೇ ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ ಫೈಟಿಂಗ್ ನಲ್ಲಿ ಚಿನ್ನ ಹಾಗೂ ಕಟಾದಲ್ಲಿ ಬೆಳ್ಳಿ, ಮೊಹಮ್ಮದ್ ಅಜ್ಮಲ್ ಫೈಟಿಂಗ್ ನಲ್ಲಿ ಚಿನ್ನ ಕಟಾದಲ್ಲಿ ಬೆಳ್ಳಿ, ಶಹೀರ್ ಅನಾಸ್ ಮತ್ತು ಮೋಹನ್ ಬಜ ಕಟಾ ಹಾಗೂ ಫೈಟಿಂಗ್ ನಲ್ಲಿ ಬೆಳ್ಳಿ ಪದಕವನ್ನು ಪಡೆದು ತಾಲ್ಲೂಕಿಗೆ ಕೀರ್ತಿಯನ್ನು ತಂದಿರುತ್ತಾರೆ.

ಇವರು ರೆನ್ಶಿ ಮೊಹಮ್ಮದ್ ನದೀಮ್, ಶಿಹನ್ ಅಬ್ದುಲ್ ರಹಿಮಾನ್ ಹಾಗೂ ಸೆನ್ಸಾಯಿ ರಿಜ್ವಾನ್ ಇವರಿಂದ ತರಬೇತಿಯನ್ನು ಪಡೆದಿರುತ್ತಾರೆ.

Related posts

ಬೆಳ್ತಂಗಡಿ:ವಿಧಾನ ಪರಿಷತ್ ಮಾಜಿ ಸದಸ್ಯ ಹರೀಶ್ ಕುಮಾರ್ ಅವರ 15ಲಕ್ಷ ಅನುದಾನದಲ್ಲಿ ಕಾಂಕ್ರಿಟೀಕರಣಗೊಂಡ ಮುಗುಳಿ -ಬ್ರಹ್ಮಯಕ್ಷ ಬಸದಿ ರಸ್ತೆ ಉದ್ಘಾಟನೆ

Suddi Udaya

ತೆಕ್ಕಾರು: ವಿದ್ಯುತ್ ತಂತಿಯ ಮೇಲೆ ಬಿದ್ದ ಮರ

Suddi Udaya

ಜನರ ಬಳಿಗೆ ತಾಲೂಕು ಆಡಳಿತ : ನಾರಾವಿಯಲ್ಲಿ ಶಾಸಕರ ನೇತೃತ್ವದಲ್ಲಿ ಜನಸ್ಪಂದನಾ ಕಾರ್ಯಕ್ರಮ ಆರಂಭ

Suddi Udaya

ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಮೋಹನ್ ಕುಮಾರ್ ಕಚೇರಿಗೆ ಕ್ಯಾ. ಬ್ರಿಜೇಶ್ ಚೌಟ ಭೇಟಿ:

Suddi Udaya

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ ಇದರ ಆಶ್ರಯದಲ್ಲಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಗಳಿಗೆ ಕ್ರೀಡಾ ಶೂ ಹಾಗೂ ಸಮವಸ್ತ್ರ ವಿತರಣೆ

Suddi Udaya

ಮುಂಡಾಜೆ: ಔಷಧೀಯ ಮೂಲಿಕಾ ವನ ನಿರ್ಮಾಣ 

Suddi Udaya
error: Content is protected !!