ಅಳದಂಗಡಿಯಲ್ಲಿ ನೊಚ್ಚ ಹಾರ್ಡ್‌ವೇರ್ ಮತ್ತು ಸ್ಯಾನಿಟರಿ ಶುಭಾರಂಭ

Suddi Udaya

ಅಳದಂಗಡಿ: ಅಳದಂಗಡಿ ಜ್ಯೋತಿ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭಿಸಿದ ನೊಚ್ಚ ಹಾರ್ಡ್‌ವೇರ್ ಮತ್ತು ಸ್ಯಾನಿಟರಿ ಇದರ ಶುಭಾರಂಭವು ಜ.8 ರಂದು ನಡೆಯಿತು.

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲರು ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಕೋರಿದರು.

ಅಳದಂಗಡಿ ಶ್ರೀ ಕ್ಲಿನಿಕ್ ನ ಡಾ.ಎನ್.ಎಂ ತುಳಪುಳೆ, ಬೆಳ್ತಂಗಡಿ ಸ್ವಾತಿ ಕ್ಲಿನಿಕ್ ನ ಡಾ.ಶಶಿಧರ ಡೋಂಗ್ರೆ, ಹಿರಿಯರಾದ ಎಚ್.ಎಲ್ ರಾವ್ ನೂತನ ಸಂಸ್ಥೆಗೆ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಗಂಗಾಧರ ಮಿತ್ತಮಾರ್, ಸೋಮನಾಥ ಬಂಗೇರ ವರ್ಪಾಳೆ, ಡಾ.ಸುಷ್ಮಾ ಡೋಂಗ್ರೆ, ಭೋಜರಾಜ್ ಶೆಟ್ಟಿ, ಸದಾನಂದ ಪೂಜಾರಿ ಉಂಗೀಲಬೈಲು, ಜಗನ್ನಾಥ ಶೆಟ್ಟಿ, ನಿತ್ಯಾನಂದ ನಾವರ, ವಿಜಯ ಕುಮಾರ್ ಜೈನ್, ಪಿಡಿಓ ಪುರುಷೋತ್ತಮ, ಪ್ರದೀಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಶಶಿಧರ ಎ ಶೆಟ್ಟಿ, ಗುರುವಪ್ಪ ಪೂಜಾರಿ, ಉದಯ ಶೆಟ್ಟಿ, ವೀರೇಂದ್ರ ಜೈನ್, ಹಾಗೂ ಇತರರು ಉಪಸ್ಥಿತರಿದ್ದರು.

ಸಂಸ್ಥೆಗೆ ಆಗಮಿಸಿ ಅತಿಥಿ ಗಣ್ಯರನ್ನು ನೊಚ್ಚ ಕುಟುಂಬದ ನಿತ್ಯಾನಂದ ಶೆಟ್ಟಿ, ಪ್ರಕಾಶ್ ಶೆಟ್ಟಿ, ಉದಯ ಶೆಟ್ಟಿ, ನಿಶ್ಚಿತ್ ಶೆಟ್ಟಿ, ಪ್ರತೀಕ್ ಶೆಟ್ಟಿ ಹಾಗೂ ಬಂಧು- ಮಿತ್ರರು ಸ್ವಾಗತಿಸಿ ಸತ್ಕರಿಸಿದರು‌.

Leave a Comment

error: Content is protected !!