ಅಂಡಿಂಜೆ: ಕಳೆದ ನವೆಂಬರ್ ತಿಂಗಳಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಗ್ರಾಮೀಣ ಭಾಗದ ಪ್ರತಿಭೆ ದ್ವಿಶಾನ್ ಜೈನ್ ಉತ್ತೀರ್ಣರಾಗಿದ್ದಾರೆ.
ಅಂಡಿಂಜೆ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ, ಹೈಸ್ಕೂಲು ನ್ನು ಕೊಕ್ರಾಡಿಯಲ್ಲಿ ಪೂರೈಸಿದರು. ನಂತರ ಪಿಯುಸಿ ಜೈನ್ ಕಾಲೇಜು ಮೂಡಬಿದ್ರೆ,ಬಿಕಾಮ್ ಶ್ರೀ ಧವಳ ಕಾಲೇಜು ಮೂಡಬಿದ್ರೆಯಲ್ಲಿ ಮಾಡಿದರು.ನಂತರ ಸಿಎ ಪರೀಕ್ಷೆಗೆ ಸಿಎ ಕಾರ್ಕಳ ಪ್ರಭಾತ ಕುಮಾರ್ ಅವರೊಂದಿಗೆ ಮಾರ್ಗದರ್ಶನ ಪಡೆದು ಅಂತಿಮವಾಗಿ ಉತ್ತೀರ್ಣರಾದರು.
ಇವರು ಬೆಳ್ತಂಗಡಿ ತಾಲೂಕಿನ ಅಂಡಿಂಜೆ ಗ್ರಾಮದ ಕಂಚ ಮನೆಯ ಸುರೇಂದ್ರ ಜೈನ್ ಮತ್ತು ವಿದ್ಯಾ ಜೈನ್ ದಂಪತಿ ಪುತ್ರ.