24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪಾರೆಂಕಿ ಮಾರಿಕಾಂಬ ದೇವಿ ಸನ್ನಿಧಿಯಲ್ಲಿ ಜಾತ್ರೋತ್ಸವ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ

ಮಡಂತ್ಯಾರು: ಇಲ್ಲಿಯ ಪಾರೆಂಕಿ ಗ್ರಾಮದ ಮಾರಿಕಾಂಬ ನಗರದ ಮಾರಿಕಾಂಬ ದೇವಿ ಸನ್ನಿಧಿಯಲ್ಲಿ ಜ. 9 ರಂದು ಜಾತ್ರೋತ್ಸವ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವವು ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ ಸಾಮೂಹಿಕ ಶ್ರೀ ದೇವರ ಪ್ರಾರ್ಥನೆಯೊಂದಿಗೆ ತೋರಣ ಮುಹೂರ್ತ, ಪುಣ್ಯಹ, ಪಂಚಗವ್ಯ, ಅಷ್ಟ ದ್ರವ್ಯ, ಗಣಹೋಮ, ನವಕಲಶ ಪ್ರತಿಷ್ಠೆ, ಪ್ರಧಾನ ಹೋಮ ಮತ್ತು ಗ್ರಾಮ ದೈವಗಳಿಗೆ ತೋರಣ ಮುಹೂರ್ತ, ಸಾರಿ ಪ್ರಶ್ನೆ, ನವ ಕಳಸ ಅಭಿಷೇಕ ವಿಶೇಷ ಸರ್ವಲಂಕಾರ ಸಹಿತ ಮಹಾಪೂಜೆ ಅನ್ನ ಸಂತರ್ಪಣೆ ನಡೆಯಿತು.

ಸಂಜೆ ಮೂಡಾಯೂರು ಗುತ್ತಿನಿಂದ ಗ್ರಾಮದೈವ ಕೊಡಂಗೆತ್ತಾಯ ಮತ್ತು ಇತರ ಪರಿವಾರ ದೈವಗಳ ಭಂಡಾರ ಅದ್ದೂರಿ ಮೆರವಣಿಗೆಯೊಂದಿಗೆ ದೇವಿ ಸನ್ನಿಧಿಗೆ ಆಗಮಿಸಿ ಗದ್ದಿಗೆ ಪೂಜೆ ನೇಮೋತ್ಸವ ದೈವ ದೇವರುಗಳ ಭೇಟಿ ನಡೆಯಿತು. ನಂತರ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶೃತಿ ಆರ್ಟ್ಸ್ ಕಾವಲಕಟ್ಟೆ ಇವರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಬಯಲಾಟ ನಡೆಯಿತು. ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರರಾದ ಕೆ ಸನತ್ ಕುಮಾರ್ ಪಡಿವಾಲ್ ಮತ್ತು ಕುಟುಂಬಸ್ಥರು, ಕಾರ್ಯಧ್ಯಕ್ಷರಾದ ಡಾ| ಕೆ ಎಸ್ ಬಲ್ಲಾಳ್, ಜಾತ್ರಾ ಸಮಿತಿಯ ಸದಸ್ಯರಾದ ರತ್ನಾಕರ್ ಶೆಟ್ಟಿ ಮೂಡಯೂರು, ನವೀನ್ ಪಿ ಯಾದವ್, ಲೋಕೇಶ್ ಆಚಾರ್ಯ, ಜಯಂತ್ ಶೆಟ್ಟಿ, ಕಾಂತಪ್ಪ ಗೌಡ, ಪ್ರವೀಣ್ ಕುಮಾರ್, ಸುಂದರ ಪೂಜಾರಿ, ಅರ್ಚಕರಾದ ರಮೇಶ್ ಭಟ್, ಯೋಗೀಶ್ ಹೆಗ್ಡೆ, ಜಾತ್ರಾ ಉಪ ಸಮಿತಿಯ ಸದಸ್ಯರಾದ ಗಂಗಾಧರ್ ಪೂಜಾರಿ, ಬಾಬು ಆಚಾರ್ಯ, ಸುಂದರ ಮೂಲ್ಯ, ಆನಂದ ಮೂಲ್ಯ, ಸತೀಶ್ ಮೂಲ್ಯ, ದಿನೇಶ್ ಮೂಲ್ಯ, ಮೋಹನ್ ದೊಟ ಹಾಗೂ ಊರ ಪರ ಊರ ಭಕ್ತಾದಿಗಳು ಉಪಸ್ಥಿತರಿದ್ದರು.

Related posts

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಪಿ. ಕುಶಾಲಪ್ಪ ಗೌಡ, ಉಪಾಧ್ಯಕ್ಷರಾಗಿ ಮಹಾಬಲ ಶೆಟ್ಟಿ ಆಯ್ಕೆ

Suddi Udaya

ಹೊಸಂಗಡಿ: ಇಂದಿರಾ ‘ಗಾಂಧಿ ವಸತಿ ಶಾಲೆಯಲ್ಲಿ ಔಷಧೀಯ ವನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ

Suddi Udaya

ಉಜಿರೆ ಎಸ್. ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಉದ್ಯಮಶೀಲತೆ ಕಾರ್ಯಾಗಾರ

Suddi Udaya

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿಯನ್ನು ರಚಿಸಲು ಶಿಫಾರಸ್ಸು ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ರಿಗೆ ಸಮಿತಿಯಿಂದ ಗೌರವಾರ್ಪಣೆ

Suddi Udaya

ನಿವೃತ್ತ ಜಲಾನಯನ ಅಧಿಕಾರಿ ದಯಾನಂದ ಹೆಚ್. ಕುಕ್ಕೇಡಿ ನಿಧನ

Suddi Udaya

ವೇಣೂರು ಎಸ್.ಡಿ.ಎಂ ಐಟಿಐ ಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಉಮೇಶ್ ಕೆ. ರವರಿಗೆ ಬೀಳ್ಕೊಡುಗೆ

Suddi Udaya
error: Content is protected !!