22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಜ.12: ಬಳಂಜ ಬದಿನಡೆಯಲ್ಲಿ ಅಯ್ಯಪ್ಪ ಪೂಜೆ, ಇರುಮುಡಿ ಕಟ್ಟುವ ಕಾರ್ಯಕ್ರಮ

ಬಳಂಜ: ಬಳಂಜ ಬದಿನಡೆ ಶ್ರೀ ಶಾಸ್ತಾರ ನಾಗ ಬ್ರಹ್ಮಲಿಂಗೇಶ್ವರ ದೇವಸ್ಥಾನ ಹಾಗೂ ಅಯ್ಯಪ್ಪ ಭಕ್ತ ವೃಂದ ಬಳಂಜ ಬದಿನಡೆ ಇದರ ವತಿಯಿಂದ ಜ.12 ರಂದು ಕ್ಷೇತ್ರದ ಧರ್ಮದರ್ಶಿಗಳಾದ ಜಯ ಸಾಲಿಯಾನ್ ಗುರುಸ್ವಾಮಿಗಳ ನೇತೃತ್ವದಲ್ಲಿ ಅಯ್ಯಪ್ಪ ಸ್ವಾಮಿ ವೃತಧಾರಿಗಳ ಇರುಮುಡಿ ಕಟ್ಟುವ ಕಾರ್ಯಕ್ರಮ ಮತ್ತು ಅಯ್ಯಪ್ಪ ಪೂಜೆಯು ಬದಿನಡೆ ಕ್ಷೇತ್ರದಲ್ಲಿ ನಡೆಯಲಿದೆ.

ಹಲವು ವರ್ಷಗಳಿಂದ ಇಲ್ಲಿಂದ ಭಕ್ತರು ಶಬರಿಮಲೆ ಯಾತ್ರೆಯನ್ನು ಮಾಡುತ್ತಿದ್ದು ಸುಂದರವಾದ ಶಿಲಾಮಯ ಅಯ್ಯಪ್ಪ ಸ್ವಾಮಿಯ ದೇಗುಲವಿದ್ದು ಹತ್ತಿರದಲ್ಲಿ ಫಲ್ಗುಣಿ ನದಿ ಹರಿಯುತ್ತಿದೆ.


ಮಾಲಾಧಾರಿಗಳಾದ ಸದಾನಂದ ಸಾಲಿಯಾನ್, ಸತೀಶ್ ಬಿಕೆ, ವಿಜಯ ಹೆಗ್ಡೆ, ಪ್ರವೀಣ್ ಕುಮಾರ್ ಲಾಂತ್ಯಾರ್, ಚಂದ್ರಶೇಖರ್ ಪಿಟ್ಟರ್, ದರಣೇಂದ್ರ ಜೈನ್, ಜಯ ಶೆಟ್ಟಿ ನಾಲ್ಕೂರು ಸೇರಿದಂತೆ 15 ಮಂದಿ ಅಯ್ಯಪ್ಪ ಭಕ್ತರು ಮಾಲೆ ಹಾಕಿದ್ದು ಮಕರ ಜ್ಯೋತಿಯ ಪುಣ್ಯ ಕಾಲದಲ್ಲಿ ಶಬರಿಮಲೆ ಯಾತ್ರೆ ಮಾಡಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲಿದ್ದಾರೆ.

Related posts

ನಾಳ: ಶಿವ ದುರ್ಗಾ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಶುಭಾರಂಭ

Suddi Udaya

ಕಡಿರುದ್ಯಾವರ ಕುಕ್ಕಾವು ಜ್ಞಾನ ವಿಕಾಸ ಮಹಿಳಾ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

Suddi Udaya

ಉಜಿರೆ-ಉಪ್ಪಿನಂಗಡಿ ಶ್ರೀದುರ್ಗಾಟೆಕ್ಸ್ ಟೆಲ್ಸ್ ನಲ್ಲಿ ಹೊಸ ಕಲೆಕ್ಷನ್‌ನೊಂದಿಗೆ ಶೇ.10 ರಿಂದ 20ರಷ್ಟು ಡಿಸ್ಕೌಂಟ್

Suddi Udaya

ಕೊಕ್ಕಡ ಜಾರಿಗೆತಡಿ ನಿವಾಸಿ ಮೋನಪ್ಪ ಗೌಡ ನಿಧನ

Suddi Udaya

ಗುರುವಾಯನಕೆರೆ: ಶಕ್ತಿನಗರ ನಿವಾಸಿ ಅಬ್ದುಲ್ ರಝಾಕ್ ಹೃದಯಾಘಾತದಿಂದ ನಿಧನ

Suddi Udaya

ಬೆಳಾಲು : ನೇತ್ರಾವತಿ ನದಿಯಲ್ಲಿ ಮುಳುಗಿದ ವ್ಯಕ್ತಿಯ ಮೃತದೇಹ ಪತ್ತೆ

Suddi Udaya
error: Content is protected !!