25.4 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಲ್ ಬದ್ರಿಯ್ಯೀನ್ ಫ್ಯಾಮಿಲಿ ಗ್ರೂಪ್; ಅಧ್ಯಕ್ಷರಾಗಿ ಅಶ್ರಫ್ ಆಲಿಕುಂಞಿ ಪುನರಾಯ್ಕೆ

ಬೆಳ್ತಂಗಡಿ: 2017 ರಲ್ಲಿ ಆರಂಭಗೊಂಡು ಹಲವಾರು ಸೇವಾ ಚಟುವಟಿಕೆಗಳ ಮೂಲಕ ಯಶಸ್ವಿಯಾಗಿ ಮುನ್ನಡೆಯುತ್ತಿರುವ ‘ಅಲ್ ಬದ್ರಿಯ್ಯೀನ್ ಫ್ಯಾಮಿಲಿ ಗ್ರೂಪ್’ ಸಂಘಟನೆ ಇದರ 2024 ನೇ ಸಾಲಿನ ನೂತನ ಅಧ್ಯಕ್ಷರಾಗಿ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಅವಿರೋಧವಾಗಿ ಪುನರಾಯ್ಕೆಗೊಂಡಿರುತ್ತಾರೆ.

ಉಪಾಧ್ಯಕ್ಷರಾಗಿ ಹಬೀಬ್ ಸಿ, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಮುಸ್ಲಿಯಾರ್ ನೆರಿಯ, ಜತೆ ಕಾರ್ಯದರ್ಶಿಯಾಗಿ ಮನ್ಸೂರ್ ದರ್ಖಾಸ್ ಮತ್ತು ಕೋಶಾಧಿಕಾರಿಯಾಗಿ ಅಬೂಬಕ್ಕರ್ ಪಂಪು ಇವರು ಆಯ್ಕೆಯಾದರು.
ಉಳಿದಂತೆ 8 ಮಂದಿಯನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಗಿದ್ದು, ನಾಸಿರ್ ಕಲ್ಲಗುಡ್ಡೆ, ರಶೀದ್ ಕಲ್ಲಗುಡ್ಡೆ, ರಫೀಕ್ ಮದನಿ, ಸಲೀಂ ಗಾಂಧಿನಗರ, ಝಕರಿಯಾ ದರ್ಖಾಸ್, ಸ್ವದಕತುಲ್ಲಾ ದಾರಿಮಿ, ಕೆರೀಂ ಬೆಳಾಲು ಮತ್ತು ಯಹ್ಯಾ ಗಾಂಧಿನಗರ ಇವರು ಸ್ಥಾನ‌ ಪಡೆದುಕೊಂಡರು.
ಸಂಘಟನೆಯ 6 ನೇ ಮಹಾಸಭೆಯು ಕಕ್ಕಿಂಜೆ ದರ್ಖಾಸ್ ನಲ್ಲಿ ನಡೆಯಿತು. ಸೂರಲ್ಪಾಡಿ ಮಸ್ಜಿದ್ ಪ್ರಧಾನ ಧರ್ಮಗುರು ಮುರ್ಷಿದ್ ಫೈಝಿ ಉಪನ್ಯಾಸ ನಡೆಸಿಕೊಟ್ಟರು. ನಾಸಿರ್ ಕಲ್ಲಗುಡ್ಡೆ, ರಫೀಕ್ ಮದನಿ ಕಾರ್ಯಕ್ರಮ‌ ನಿರೂಪಿಸಿದರು. ಹಬೀಬ್ ಸಿ ವರದಿ ಮತ್ತು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಗೌರವ ಸಲಹೆಗಾರ ಅಬ್ದುಲ್ಲ ಗಾಂಧಿನಗರ, ಅಬ್ದುಲ್ ರಹಿಮಾನ್ ಮಂತ್ರಬೈಲು, ಸಿ ಮುಹಮ್ಮದ್, ಮೋಣುಚ್ಚ ಕಲ್ಲಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.

Related posts

ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಯ ಬಾಲಕ ಬಾಲಕಿಯರ ನೂತನ ಶೌಚಾಲಯದ ಹಸ್ತಾಂತರ

Suddi Udaya

ಕಳೆಂಜ ಗ್ರಾಮ ಪಂಚಾಯತ್ ನ ಗ್ರಾಮ ಸಭೆ

Suddi Udaya

ಕುತ್ಲೂರು: ಬಜಿಲಪಾದೆಯಲ್ಲಿ ಚಿರತೆ ಪತ್ತೆ

Suddi Udaya

ಧರ್ಮಸ್ಥಳ : ಶ್ರೀ ಮಂ. ಸ್ವಾ. ಅ.ಹಿ. ಪ್ರಾ. ಶಾಲೆಯಲ್ಲಿ ಶಿಕ್ಷಕಿ ಶ್ರೀಮತಿ ಗಿರಿಜಾ ಕುಮಾರಿ ಡಿ. ಎ ರವರಿಗೆ ಬೀಳ್ಕೊಡುಗೆ

Suddi Udaya

ಅಪ್ಸರಾ ಫ್ಯಾಶನ್ ಸೆಂಟರ್ ನಲ್ಲಿ ಆಷಾಡ ಹಾಗೂ ಮಾನ್ಸೂನ್ ಆಫರ್ ಡಿಸ್ಕೌಂಟ್ ಸೇಲ್: ಪ್ರತಿ ಖರೀದಿಯ ಮೇಲೆ ಶೇ.20 ಡಿಸ್ಕೌಂಟ್

Suddi Udaya

ಜು.6 ರಿಂದ ಬೆಳ್ತಂಗಡಿ ಆನ್ ಸಿಲ್ಕ್ಸ್ ನಲ್ಲಿ ಆಷಾಢ ಬಂಪರ್ ಸೇಲ್: ಪ್ರತಿ ಖರೀದಿಗೆ ಶೇ. 50 ರಿಯಾಯಿತಿ

Suddi Udaya
error: Content is protected !!