23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಸ್.ಕೆ.ಎಸ್.ಎಸ್.ಎಫ್ ಗುರುವಾಯನಕೆರೆ ಕ್ಲಸ್ಟರ್ ಮಹಾಸಭೆ ಹಾಗೂ ನೂತನ ಸಮಿತಿ ರಚನೆ

ಬೆಳ್ತಂಗಡಿ : ಎಸ್.ಕೆ.ಎಸ್.ಎಸ್.ಎಫ್ ಗುರುವಾಯನಕೆರೆ ಕ್ಲಸ್ಟರ್ ಇದರ ವತಿಯಿಂದ ಹಿದಾಯತುಲ್ ಇಸ್ಲಾಮ್ ಸೆಕೆಂಡರಿ ಮದರಸ ಪೇರಲ್ದಕಟ್ಟೆಯಲ್ಲಿ ಮಹಾಸಭೆ ಹಾಗೂ ನೂತನ ಸಮಿತಿ ರಚನೆ ಕಾರ್ಯಕ್ರಮ ಜ. 10 ರಂದು ನಡೆಯಿತು.

ಪೇರಲ್ದಕಟ್ಟೆ ಜುಮಾ ಮಸೀದಿಯ ಖತೀಬರಾದ ಶಂಶುದ್ದೀನ್ ದಾರಿಮಿಯವರು ದುಆಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮತ್ತು ನೂತನ ಸಮಿತಿಯ ರಚನೆಯ ಬಗ್ಗೆ ಮಾಹಿತಿ ನೀಡಿದರು. ಸುಲೈಮಾನ್ ಕಟ್ಟೆ ವಾರ್ಷಿಕ ವರದಿ ವಾಚಿಸಿದರು. ವಾರ್ಷಿಕ ವರದಿಗೆ ಮನ್ನಣೆ ಪಡೆದ ನಂತರ ನೂತನ ಸಮಿತಿಯ ರಚನೆಯು ಸಮಿತಿಯ ತಾಲೂಕು ವೀಕ್ಷಕರಾದ ಅಬುಬಕ್ಕರ್ ನಿಜಾಮಿ ಮತ್ತು ಯಾಸೀರ್ ಚಿಬಿದ್ರೆಯವರ ಸಮ್ಮುಖದಲ್ಲಿ ನಡೆಯಿತು.

ಗುರುವಾಯನಕೆರೆ ಕ್ಲಸ್ಟರಿನ ನೂತನ ಅಧ್ಯಕ್ಷರಾಗಿ ಎರಡನೇ ಬಾರಿ ಇಸುಬು ಪೂಂಜಿಲ್ಲಾ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸುಲೈಮಾನ್ ಕಟ್ಟೆ ಅದೇ ರೀತಿಯಾಗಿ ಕೋಶಾಧಿಕಾರಿಯಾಗಿ ಸಿರಾಜ್ ಚಿಲಿಂಬಿ ಯವರು ಆಯ್ಕೆಯಾದರು.

ವರ್ಕಿಂಗ್ ಕಾರ್ಯದರ್ಶಿಯಾಗಿ ಅಲ್ತಾಫ್ ಕಟ್ಟೆ, ಉಪವರ್ಕಿಂಗ್ ಕಾರ್ಯದರ್ಶಿಯಾಗಿ ಸಮೀರ್ ಕನ್ನಡಿಕಟ್ಟೆ,
ಮನ್ಸೂರ್ ಕಟ್ಟೆ, ಕಾರ್ಯದರ್ಶಿಯಾಗಿ ಸಮೀರ್, ಉಪಕಾರ್ಯದರ್ಶಿಯಾಗಿ ಹೈದರ್ ಮಾಸ್ಟರ್ ಜಾರಿಗೆಬೈಲು, ನೌಷಾದ್ ಸಾಬರಬೈಲು, ಝೋನ್ ಕೌನ್ಸಿಲ್ಲೆರ್ಸ್ ಯಾಗಿ ರಝಕ್ ಕಟ್ಟೆ, ಸಾದಿಕ್ ಕಟ್ಟೆ, ಇಲ್ಯಾಸ್ ಚಿಲಿಂಬಿ, ಸಿರಾಜ್ ಚಿಲಿಂಬಿ, ಮನ್ಸೂರ್ ಪಾದೆ, ಇಸ್ಮಾಯಿಲ್ ಕಿಂಗ್ ಸ್ಟಾರ್, ಶಿಹಾಬ್ ಜಾರಿಗೆಬೈಲು, ಶರೀಫ್ ಶಬರಿಬೈಲು ಹಂಝ ಕನ್ನಡಿಕಟ್ಟೆ, ಯಾಸೀರ್ ಗೋಳಿಯಂಗಡಿ ಆಯ್ಕೆಯಾದರು.

Related posts

ವಾಲಿಬಾಲ್ ಪಂದ್ಯಾಟ; ರಕ್ಷಿತಾ ಜೆ ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಪುತ್ತೂರಿನಲ್ಲಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಮತ್ತು ಶಶಿಕುಮಾರ್ ರೈ ಬಾಲ್ಯೋಟ್ಟುರವರಿಗೆ ಅಭಿವಂದನಾ ಕಾರ್ಯಕ್ರಮ

Suddi Udaya

ತ್ಯಾಜ್ಯ ಮುಕ್ತ ಭಾರತ ಸ್ವಚ್ಛತೆಯೇ ಸೇವೆ. ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಧರ್ಮಸ್ಥಳದ ನೇತ್ರಾವತಿ ನದಿ ಸ್ಥಾನಘಟ್ಟದಲ್ಲಿ ಚಾಲನೆ

Suddi Udaya

ವಾಣಿ ಕಾಲೇಜಿನಲ್ಲಿ ನಿಹಾರ್ ಎಸ್. ಆರ್‌ಗೆ ಅಭಿನಂದನೆ

Suddi Udaya

ರಾಜ್ಯಮಟ್ಟದ ವಿಜ್ಞಾನ ಸಮಾವೇಶ: ಉಜಿರೆ ಎಸ್.ಡಿ.ಎಂ. ಶಾಲೆಯ ವಿದ್ಯಾರ್ಥಿಗಳ ಎರಡು ತಂಡಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಬೈಸಿಕಲ್ ವಿತರಣೆ

Suddi Udaya
error: Content is protected !!