23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಸ್.ಕೆ.ಎಸ್.ಎಸ್.ಎಫ್ ಗುರುವಾಯನಕೆರೆ ಕ್ಲಸ್ಟರ್ ಮಹಾಸಭೆ ಹಾಗೂ ನೂತನ ಸಮಿತಿ ರಚನೆ

ಬೆಳ್ತಂಗಡಿ : ಎಸ್.ಕೆ.ಎಸ್.ಎಸ್.ಎಫ್ ಗುರುವಾಯನಕೆರೆ ಕ್ಲಸ್ಟರ್ ಇದರ ವತಿಯಿಂದ ಹಿದಾಯತುಲ್ ಇಸ್ಲಾಮ್ ಸೆಕೆಂಡರಿ ಮದರಸ ಪೇರಲ್ದಕಟ್ಟೆಯಲ್ಲಿ ಮಹಾಸಭೆ ಹಾಗೂ ನೂತನ ಸಮಿತಿ ರಚನೆ ಕಾರ್ಯಕ್ರಮ ಜ. 10 ರಂದು ನಡೆಯಿತು.

ಪೇರಲ್ದಕಟ್ಟೆ ಜುಮಾ ಮಸೀದಿಯ ಖತೀಬರಾದ ಶಂಶುದ್ದೀನ್ ದಾರಿಮಿಯವರು ದುಆಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮತ್ತು ನೂತನ ಸಮಿತಿಯ ರಚನೆಯ ಬಗ್ಗೆ ಮಾಹಿತಿ ನೀಡಿದರು. ಸುಲೈಮಾನ್ ಕಟ್ಟೆ ವಾರ್ಷಿಕ ವರದಿ ವಾಚಿಸಿದರು. ವಾರ್ಷಿಕ ವರದಿಗೆ ಮನ್ನಣೆ ಪಡೆದ ನಂತರ ನೂತನ ಸಮಿತಿಯ ರಚನೆಯು ಸಮಿತಿಯ ತಾಲೂಕು ವೀಕ್ಷಕರಾದ ಅಬುಬಕ್ಕರ್ ನಿಜಾಮಿ ಮತ್ತು ಯಾಸೀರ್ ಚಿಬಿದ್ರೆಯವರ ಸಮ್ಮುಖದಲ್ಲಿ ನಡೆಯಿತು.

ಗುರುವಾಯನಕೆರೆ ಕ್ಲಸ್ಟರಿನ ನೂತನ ಅಧ್ಯಕ್ಷರಾಗಿ ಎರಡನೇ ಬಾರಿ ಇಸುಬು ಪೂಂಜಿಲ್ಲಾ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸುಲೈಮಾನ್ ಕಟ್ಟೆ ಅದೇ ರೀತಿಯಾಗಿ ಕೋಶಾಧಿಕಾರಿಯಾಗಿ ಸಿರಾಜ್ ಚಿಲಿಂಬಿ ಯವರು ಆಯ್ಕೆಯಾದರು.

ವರ್ಕಿಂಗ್ ಕಾರ್ಯದರ್ಶಿಯಾಗಿ ಅಲ್ತಾಫ್ ಕಟ್ಟೆ, ಉಪವರ್ಕಿಂಗ್ ಕಾರ್ಯದರ್ಶಿಯಾಗಿ ಸಮೀರ್ ಕನ್ನಡಿಕಟ್ಟೆ,
ಮನ್ಸೂರ್ ಕಟ್ಟೆ, ಕಾರ್ಯದರ್ಶಿಯಾಗಿ ಸಮೀರ್, ಉಪಕಾರ್ಯದರ್ಶಿಯಾಗಿ ಹೈದರ್ ಮಾಸ್ಟರ್ ಜಾರಿಗೆಬೈಲು, ನೌಷಾದ್ ಸಾಬರಬೈಲು, ಝೋನ್ ಕೌನ್ಸಿಲ್ಲೆರ್ಸ್ ಯಾಗಿ ರಝಕ್ ಕಟ್ಟೆ, ಸಾದಿಕ್ ಕಟ್ಟೆ, ಇಲ್ಯಾಸ್ ಚಿಲಿಂಬಿ, ಸಿರಾಜ್ ಚಿಲಿಂಬಿ, ಮನ್ಸೂರ್ ಪಾದೆ, ಇಸ್ಮಾಯಿಲ್ ಕಿಂಗ್ ಸ್ಟಾರ್, ಶಿಹಾಬ್ ಜಾರಿಗೆಬೈಲು, ಶರೀಫ್ ಶಬರಿಬೈಲು ಹಂಝ ಕನ್ನಡಿಕಟ್ಟೆ, ಯಾಸೀರ್ ಗೋಳಿಯಂಗಡಿ ಆಯ್ಕೆಯಾದರು.

Related posts

ಎ.13-23: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಾರ್ಷಿಕ ವಿಷು ಜಾತ್ರೋತ್ಸವ       

Suddi Udaya

ಬೆಳಾಲು ಗ್ರಾಮ ಪಂಚಾಯತ್ ನಲ್ಲಿ ಬೇಸಿಗೆ ಶಿಬಿರದ ಸಮಾರೋಪ

Suddi Udaya

ಬೆಳ್ತಂಗಡಿ ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

Suddi Udaya

ರಕ್ತೇಶ್ವರಿಪದವು ಸ.ಕಿ.ಪ್ರಾ. ಶಾಲೆಯಲ್ಲಿ ಶಾರದಾ ಪೂಜೆ

Suddi Udaya

ತಾಲೂಕು ಮಟ್ಟದ ಪೋಷಣ್ ಮಾಸಾಚರಣೆ

Suddi Udaya

ಬೆಳ್ತಂಗಡಿ :ವಿಶೇಷ ವಿಮಾನದಲ್ಲಿ ಅಯೋಧ್ಯೆಗೆ ಪ್ರಯಾಣ ಬೆಳೆಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಮತ್ತು ರವಿಶಂಕರ್ ಗುರೂಜಿ

Suddi Udaya
error: Content is protected !!