25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಲವಂತಿಗೆ ಜನಸ್ಪಂದನ ಸಭೆ

ಡಿಡುಪೆ: ಮಲವಂತಿಗೆ ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಸಭೆ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಡಿ.26 ರಂದು ಶಾಲಾ ವಠಾರದಲ್ಲಿ ನಡೆಯಿತು.

ಮುಂಡಾಜೆ – ಕಜಕ್ಕೆ ರಸ್ತೆ ದುರಸ್ತಿಗೊಳಿಸಬೇಕು ಹಾಗೆಯೇ ಕಾಜೂರು-ಕಜಕ್ಕೆ ರಸ್ತೆ ಕಿರಿದಾಗಿದ್ದು ಅಗಲೀಕರಣಗೊಳಿಸಬೇಕು ಎಂದು ಗ್ರಾಮಸ್ಥರು ಹೇಳಿದರು.

ಡಿಡುಪೆ – ಎಳನೀರು ಮುಂದುವರಿದ 5 ಕಿಮೀ ರಸ್ತೆಯನ್ನು ನಿರ್ಮಾಣಗೊಳಿಸಬೇಕು. ಈಗಾಗಲೇ 3 ಕಿಮೀ ರಸ್ತೆ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಹೇಳಿದಾಗ ಈಗಾಗಲೇ ಪಂಚಾಯತ್ ಮಟ್ಟದಲ್ಲಿ ಸಭೆ ನಡೆಸಲಾಗಿದ್ದು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಹಲವಾರು ಬಾರಿ ಈ ರಸ್ತೆಯ ನಿರ್ಮಾಣದಲ್ಲಿ ಪ್ರಯತ್ನಿಸುತ್ತಿದ್ದೇನೆ ಸಚಿವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ ಅಧಿಕಾರಿಗಳು ಸ್ಪಂದನೆ ನೀಡುತ್ತಿದ್ದಾರೆ ಎಂದು ಶಾಸಕರು ತಿಳಿಸಿದರು.

ಅರಣ್ಯದಂಚಿನದಲ್ಲಿರುವ ಕರಿಯಾಲು ಭಾಗದಲ್ಲಿ 10ಕ್ಕೂ ಮಿಕ್ಕಿ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ ಎಂದು ಗ್ರಾಮಸ್ಥರು ಹೇಳಿದಾಗ ಇಲಾಖೆಯಲ್ಲಿ ಕಡತದ ಪರಿಶೀಲನೆ ಹಂತದಲ್ಲಿದೆ ಎಂದು ಶಾಸಕರು ತಿಳಿಸಿದರು. ಬಂಗಾರಪಲ್ಕೆ ಎಂಬಲ್ಲಿ 10 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಮಾಡಬೇಕು ಎಂದು ಮೆಸ್ಕಾಂ ಇಲಾಖೆಗೆ ಶಾಸಕರು ಸೂಚಿಸಿದರು. ಎಳನೀರು, ಗುತ್ಯಡ್ಕ ಭಾಗದಲ್ಲಿ ಕಳೆದ 75 ವರ್ಷಗಳಿಂದ ವಿದ್ಯುತ್ ಸೌಲಭ್ಯ ಕಾಣದ ನಮಗೆ ಬೆಳಕು ಹರಿಸಿದ್ದು ಶಾಸಕ ಹರೀಶ್ ಪೂಂಜ ಎಂದು ಗ್ರಾಮಸ್ಥರು ಅವರನ್ನು ಅಭಿನಂದಿಸಿದರು.

ರಸ್ತೆ ಅಭಿವೃದ್ಧಿ ಅವಕಾಶ ಕಲ್ಪಿಸಿವುದಾದರೆ ಸೂಕ್ಷ್ಮ ವಲಯ ಅರಣ್ಯಕ್ಕೆ ಸಮ್ಮತ ಸೂಚಿಸುತ್ತೇವೆ ಎಂದು ಗ್ರಾಮಸ್ಥರು ಹೇಳಿದರು. ಅರಣ್ಯ ಇಲಾಖೆಯ ಪ್ರವಾಸಿ ತಾಣಕ್ಕೆ ಸುಂಕ ವಸೂಲಿ ಮಾಡಲಾಗುತ್ತಿದೆ ಆದರೆ ಇದರಿಂದ ಪಂಚಾಯತ್ ಗೆ ಯಾವುದೇ ಲಾಭವಿಲ್ಲ, ಸ್ವಲ್ಪ ಅಂಶವನ್ನು ಪಂಚಾಯತ್ ಅಭಿವೃದ್ಧಿಗೆ ನೀಡಬೇಕು ಎಂದು ಗ್ರಾಮಸ್ಥರು ಹೇಳಿದಾಗ ಈ ಪ್ರಕ್ರಿಯೆ ಸರ್ಕಾರ ಹಂತದಲ್ಲಿ ಆಗಬೇಕು, ವಿಧಾನ ಸಭೆ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುವುದಾಗಿ ಶಾಸಕರು ತಿಳಿಸಿದರು. ಅಲ್ಲದೇ ಪ್ರವಾಸಿ ತಾಣ ನೇತ್ರಾವತಿ ಪೀಕ್ ಪ್ರವೇಶಿಸಿಸಲು ಪಂಚಾಯತ್ ರಸ್ತೆ ಬಳಕೆಯಾಗುತ್ತದೆ ಇದಕ್ಕೆ ಅನುಗುಣವಾಗಿ ಪಂಚಾಯತ್ 100 ರೂ ಸುಂಕ ವಸೂಲಿ ಮಾಡಬೇಕು ಈ ಬಗ್ಗೆ ಐಬಿಯಲ್ಲಿ ತಹಶೀಲ್ದಾರ್, ಇಓ, ಆರ್ ಎಫ್ ಓ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಶಾಸಕರು ಹೇಳಿದರು.

ನೆಟ್ವರ್ಕ್ ಸಮಸ್ಯೆ, ಸೇತುವೆ, ರಸ್ತೆ ನಿರ್ಮಾಣ ಬೇಡಿಕೆ ಗ್ರಾಮಸ್ಥರು ತಿಳಿಸಿದರು. ತಹಶೀಲ್ದಾರ್ ಪೃಥ್ವಿ ಸಾನಿಕಂ, ತಾಲೂಕು ಪಂಚಾಯತ್ ಲೆಕ್ಕ ಸಹಾಯಕ ಗಣೇಶ್ ಪೂಜಾರಿ, ಅಧ್ಯಕ್ಷ ಪ್ರಕಾಶ್ ಜೈನ್, ಉಪಾಧ್ಯಕ್ಷೆ ರೋಹಿಣಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಶ್ಮಿ, ಸದಸ್ಯರು ಇಲಾಖಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಎನ್ನೆಸ್ಸೆ ಸ್: ಉಜಿರೆ ಶ್ರೀ ಧ. ಮಂ.ಪ.ಪೂ. ಕಾಲೇಜಿನ ಸುದರ್ಶನ್ ನಾಯಕ್ ಗೆ ಉತ್ತಮ ಪರ್ಫಾರ್ಮರ್ ಪ್ರಶಸ್ತಿ

Suddi Udaya

ಬೆಳಾಲು ಶ್ರೀ ಧ. ಮಂ. ಅ.ಪ್ರೌ. ಶಾಲೆಯಲ್ಲಿ ಕುವೆಂಪುರವರ ಜನ್ಮದಿನೋತ್ಸವದ ಪ್ರಯುಕ್ತ ‘ವಿಶ್ವ ಮಾನವ ದಿನಾಚರಣೆ’

Suddi Udaya

ಬೆಳ್ತಂಗಡಿ ಬಿಜೆಪಿ ಯುವಮೋರ್ಚಾದ ಕಾರ್ಯಕಾರಣಿ ಸಭೆ

Suddi Udaya

ಗ್ಯಾರಂಟಿ ಫಲಾನುಭವಿಗಳ ಸಮಾವೇಶದ ಖರ್ಚಿನ ಬಿಲ್‌ಗಳಲ್ಲಿ ಅವ್ಯವಹಾರ: ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ಮಂಜುನಾಥ್ ಸಾಲ್ಯಾನ್ ಆರೋಪ

Suddi Udaya

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರಿಗೆ ಬೆಹರಿನ್ ಇಂಡಿಯಾ ಇಂಟರ್ನ್ಯಾಷನಲ್ ಆವಾರ್ಡ್- 2024

Suddi Udaya

ಕಳೆಂಜ ಬಿರುಗಾಳಿ ಮಳೆಗೆಮನೆಗೆ ಮರ ಬಿದ್ದು ಹಾನಿ

Suddi Udaya
error: Content is protected !!