July 23, 2026
Uncategorized

ಗುಂಡೂರಿ ಶ್ರೀ ಗುರು ಚೈತನ್ಯ ಸೇವಾ ಪ್ರತಿಷ್ಠಾನದ ಸೇವಾಶ್ರಮದಲ್ಲಿ ಶುಶ್ರೂಷೆಯ ಪಡೆಯುತ್ತಿದ್ದ ವ್ಯಕ್ತಿ ನಾಪತ್ತೆ

ಬೆಳ್ತಂಗಡಿ : ಗುಂಡೂರಿ ಗ್ರಾಮದ ಶ್ರೀ ಗುರು ಚೈತನ್ಯ ಸೇವಾ ಪ್ರತಿಷ್ಠಾನದ ಸೇವಾಶ್ರಮ ಎಂಬಲ್ಲಿ ಶುಶ್ರೂಷೆಯ ಬಗ್ಗೆ ದಾಖಲಾಗಿದ್ದ ಮಂಗಳೂರು ತಾಲೂಕು ಹೊಸಬೆಟ್ಟು, ಸುರತ್ಕಲ್‌, ನಂದಶ್ರೀ ಅಪಾರ್ಟ್‌ ಮೆಂಟ್‌, ಮುಖ್ಯ ಪ್ರಾಣ ಮಠದ ಬಳಿಯ ನಿವಾಸಿ ಸುಧಾಕರ(58) ಎಂಬವರು ನಾಪತ್ತೆಯಾಗಿರುವುದಾಗಿ ಜ.13 ರಂದು ವೇಣೂರು ಠಾಣೆಗೆ ದೂರು ನೀಡಲಾಗಿದೆ.

ಸುಧಾಕರ ಅವರು ಸುಮಾರು 20 ವರ್ಷಗಳಿಂದ, ಮನೆಬಿಟ್ಟು ಸಿಕ್ಕಿದಲ್ಲಿ ಸುತ್ತಾಡಿಕೊಂಡಿದ್ದವರು ವಿಪರೀತ ಶರಾಬು ಕುಡಿಯುವ ಚಟ ಹೊಂದಿದ್ದು ಅಪರೂಪಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದವರು, ಇತ್ತೀಚೆಗೆ ಮಾನಸಿಕ ಖಿನ್ನತೆಗೊಳಪಟ್ಟು ಪಣಂಬೂರು, ಬೈಕಂಪಾಡಿ ವಠಾರದಲ್ಲಿ ತುಂಬಾ ಕೀಟಲೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವನನ್ನು ಪಡುಬಿದ್ರೆ ಆಶ್ರಮದವರು ತಮ್ಮ ಆಶ್ರಮದಲ್ಲಿ ಸೇರಿಸಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಬಿತ್ತರಿಸಿದ್ದನ್ನು ಕಂಡು ಅವರನ್ನು ಅಲ್ಲಿಂದ ಕರೆದುಕೊಂಡು ಬಂದು ಗುಂಡೂರಿ ಗ್ರಾಮದ ಶ್ರೀ ಗುರು ಚೈತನ್ಯ ಸೇವಾ ಪ್ರತಿಷ್ಠಾನದ ಸೇವಾಶ್ರಮ ಎಂಬಲ್ಲಿ ಶುಶ್ರೂಷೆಯ ಬಗ್ಗೆ ದಾಖಲಿಸಿದ್ದು, ಸದ್ರಿ ಸುಧಾಕರ ಜ.9 ರಂದು ರಾತ್ರಿ ಸುಮಾರು 12 ಗಂಟೆಯ ಬಳಿಕ ಆಶ್ರಮದಿಂದ ಕಾಣೆಯಾಗಿದ್ದು, ಈ ಬಗ್ಗೆ ಆಶ್ರಮದ ಮುಖ್ಯಸ್ಥರು ನೀಡಿದ ಮಾಹಿತಿಯಂತೆ ಅವರು ಸಹೋದರ ವಿಜಯ ಎಂ.ಆಶ್ರಮಕ್ಕೆ ಬಂದು ವಿಚಾರಿಸಿ ಬಳಿಕ ಸಂಬಂಧಿಕರ ಮನೆಗಳಿಗೆಲ್ಲಾ ಸಂಪರ್ಕಿಸಿ, ಭೇಟಿ ನೀಡಿ ವಿಚಾರಿಸಿದ್ದಲ್ಲದೇ, ಪಣಂಬೂರು, ಬೈಕಂಪಾಡಿ, ಸುರತ್ಕಲ್ ವಠಾರಗಳಲ್ಲಿ ಹುಡುಕಾಡಿ ಪತ್ತೆಯಾಗದೇ ಇದ್ದಾಗ ತಡವಾಗಿ ಬಂದು ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಶಾಸಕ ಹರೀಶ್ ಪೂಂಜರ ಹುಟ್ಟುಹಬ್ಬ: ಕನ್ನಾಜೆಯ ಸುರಕ್ಷಾ ಆಚಾರ್ಯ ರಿಂದ ನೂಲಿನಲ್ಲಿ ತಯಾರಿಸಿದ ಹರೀಶ್ ಪೂಂಜರ ಚಿತ್ರ ಉಡುಗೊರೆ

Suddi Udaya

ಗುರುವಾಯನಕೆರೆ ಅರೆಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ಕ್ಷೇತ್ರಕ್ಕೆಖ್ಯಾತ ಉದ್ಯಮಿಗಳಾದ ದಿನೇಶ್ ಅಮರನಾಥ ಶೆಟ್ಟಿ ಪೂನಾ ಭೇಟಿ

Suddi Udaya

ವ್ಯಾಪಕ ಮಳೆ ಹಿನ್ನಲೆ: ನಾಳೆ(ಜು.31) ದ.ಕ. ಜಿಲ್ಲಾದ್ಯಂತ ಶಾಲೆ, ಪ.ಪೂ. ಕಾಲೇಜುಗಳಿಗೆ ರಜೆ

Suddi Udaya

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ಸಭೆ. ನೂತನ ಜಿಲ್ಲಾ ಸಂಘಟನಾ ಅಧ್ಯಕ್ಷರಾಗಿ ಪ್ರಕಾಶ್ ಕಾರಂತ್ ನರಿಕೊಂಬು ಆಯ್ಕೆ

Suddi Udaya

ಮಾಲಾಡಿ ಯುವಕ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ

Suddi Udaya

ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನ ಹರ್ಷಿತ ಆಯ್ಕೆ

Suddi Udaya
error: Content is protected !!